ಕುರಿಗಾಹಿ ಹನುಮಂತಪ್ಪನ ರಾಗಕ್ಕೆ ಮನಸೋತ ಕರ್ನಾಟಕ! 
ಸಿನಿಮಾ ಸುದ್ದಿ

ಕುರಿಗಾಹಿ ಹನುಮಂತಪ್ಪನ ರಾಗಕ್ಕೆ ಮನಸೋತ ಕರ್ನಾಟಕ!

ಕುರಿ ಕಾಯುತ್ತಿರುವಾಗ ಕುರಿಗಾಹಿಯೊಬ್ಬ ಹಾಗೆ ಸುಮ್ಮನೆ ಹಾಡಿದ ಹಾಡೊಂದು ಈಗ ಕರ್ನಾಟಕದ ಜನತೆಯ ಮನಸ್ಸು ತಟ್ಟಿದೆ!

ಗದಗ: ಕುರಿ ಕಾಯುತ್ತಿರುವಾಗ ಕುರಿಗಾಹಿಯೊಬ್ಬ ಹಾಗೆ ಸುಮ್ಮನೆ ಹಾಡಿದ ಹಾಡೊಂದು ಈಗ ಕರ್ನಾಟಕದ ಜನತೆಯ ಮನಸ್ಸು ತಟ್ಟಿದೆ! 
ಗದಗ ಜಿಲ್ಲೆ ಶಿರಹಟ್ಟಿಯ ಕುರಿಗಾಹಿ ಹನುಮಂತ ಬಟ್ಟೂರ ಅವರ ಹಾಡೀಗ ವಾಟ್ಸ್​ಆ್ಯಪ್, ಫೇಸ್‌ಬುಕ್‌ ಸೇರಿ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಹೌದು, ಶಿವರಾಜ್‌ಕುಮಾರ್  ಅಭಿನಯದ ಗಲಾಟೆ ಅಳಿಯಂದ್ರು ಚಿತ್ರದ ಸಾಗರಿಯೇ ಸಾಗರಿಯೇ ಹಾಡು ಹಾಡುತ್ತಾ ತನ್ನ ಮೊಬೈಲ್ ಸೆಲ್ಫಿಯಲ್ಲಿ ರೆಕಾರ್ಡ್‌ ಮಾಡಿ ಫೇಸ್‌ಬುಕ್‌ಗೆ ಹಾಕಿದ್ದ ಹನುಮಂತಪ್ಪ ಹಾಡೀಗ ಎಲ್ಲರ ಮನಗೆದ್ದಿದೆ.
ಈತನ ಹಾಡನ್ನು ಕೇಳಿ ಮೆಚ್ಚಿದ ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಮತ್ತಿತರೆ ಖ್ಯಾತ ಗಾಯಕರು ಸಹ ಅವರಿಗೆ ಶಹಬಾಸ್ ಎಂದಿದ್ದಾರೆ.
ಹನುಮಂತ ಹೈಸ್ಕೂಲ್‌ವರೆಗೂ ಮಾತ್ರ ಶಿಕ್ಷಣ ಪಡೆದಿದ್ದು, ಬದುಕಿನ ಅನಿವಾರ್ಯತೆಯಿಂದ ಕುರಿ ಕಾಯುವ ಕುಲವೃತ್ತಿ  ಆಯ್ದುಕೊಂಡಿದ್ದಾರೆ. ಚಿಕ್ಕಂದಿನಿಂದ ಸಿನಿಮಾ ನೋಡುವ ಗೀಳು.ಹೊಂದಿದ್ದ ಇವರಿಗೆ ರಾಜ್‌ಕುಮಾರ್ ಎಂದರೆ ಬಹು ಪ್ರೀತಿ. ಹಾಗೆಯೇ ಕನ್ನಡದ ಸಂಗೀತ ಪ್ರಧಾನ ರಿಯಾಲಿಟಿ ಶೋಗಳನ್ನು ನೋಡುವುದೆಂದರೆ ಇವರಿಗೆ ಅಚ್ಚು ಮೆಚ್ಚು.
ಇನ್ನು ಸಾಮಾನ್ಯವಾಗಿ ಎಲ್ಲ ಕುರಿಗಾಹಿಗಳು ಕಲಾವಿದರೆ ಆಗಿರುತ್ತಾರೆ. ಅವರು  ಕುರಿಗಳನ್ನು ಕಾಯುತ್ತಾ ಬೇಸರವಾದಾಗ ಹಾಡುತ್ತಾ ದಿನಪೂರ್ತಿ ಅಡವಿಯಲ್ಲಿ ಮೈಮರೆಯುತ್ತಾರೆ. ಆದರೆ ಹನುಮಂತಪ್ಪ ಮಾತ್ರ ತಾನು ಹಾಡಿದ ಹಾಡನ್ನು ಮೊಬೈಲ್ ರೆಕಾರ್ಡ್ ಮಾಡಿ ಫೇಸ್ ಬುಕ್ ನಲ್ಲಿ ಹಾಇದ್ದ ಕಾರಣ ರಾತ್ರೋ ರಾತ್ರಿ ಫೇಮಸ್ ಆಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT