ಶೃತಿ ಹರಿಹರನ್ 
ಸಿನಿಮಾ ಸುದ್ದಿ

ಸುದೀಪ್, ಸುಹಾಸಿನಿ ಜೊತೆ ನಟಿಸುತ್ತಿರುವುದು ಅದೃಷ್ಟದ ಅವಕಾಶ: ಶೃತಿ ಹರಿಹರನ್

ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ಸುದೀಪ್ ಎದುರು ಶೃತಿ ಹರಿಹರನ್ ನಟಿಸುತ್ತಿದ್ದಾರೆ. ಅಂಬರೀಷ್ ಗೆ ನಾಯಕಿಯಾಗಿ ಸುಹಾಸಿನಿ ಅಭಿನಿಸುತ್ತಿದ್ದಾರೆ...

ಬೆಂಗಳೂರು: ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ  ಸುದೀಪ್ ಎದುರು ಶೃತಿ ಹರಿಹರನ್ ನಟಿಸುತ್ತಿದ್ದಾರೆ. ಅಂಬರೀಷ್ ಗೆ ನಾಯಕಿಯಾಗಿ ಸುಹಾಸಿನಿ ಅಭಿನಿಸುತ್ತಿದ್ದಾರೆ.
ಇದೇ ಮೊದಲ ಬಾರಿಗೆ ಶೃತಿ ಹರಿಹರನ್ ಕಿಚ್ಚ ಸುದೀಪ್ ಜೊತೆಗೆ ನಟಿಸುತ್ತಿದ್ದಾರೆ. ಸುಹಾಸಿನಿಯ ಸಣ್ಣ ವಯಸ್ಸಿನ ಪಾತ್ರದಲ್ಲಿ ಶೃತಿ ಅಭಿನಯಿಸುತ್ತಿದ್ದಾರೆ.
ಗುರುದತ್ತ ಗಾಣಿಗ ನಿರ್ದೇಶನದ ಸಿನಿಮಾದಲ್ಲಿ ಅಂಬರೀಷ್ ಅವರ ಯಂಗರ್ ವರ್ಸನ್ ನಲ್ಲಿ ಸುದೀಪ್ ಸುಹಾಸಿನಿ ಯಂಗರ್ ವರ್ಸನ್ ನಲ್ಲಿ ಶೃತಿ ಹರಿಹರನ್ ನಟಿಸುತ್ತಿದ್ದಾರೆ.
ಗುರು ಬಗ್ಗೆ ನನಗೆ ಗೊತ್ತಿದೆ, ಅವರು ಈ ಮೊದಲು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು, ಈ ಸಿನಿಮಾದಲ್ಲಿ ನನಗೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಹೇಳಿದ್ದಾರೆ, ಈ ಸಿನಿಮಾದಲ್ಲಿ ಸುಹಾಸಿನಿ ಅವರು ನಟಿಸುತ್ತಿರುವುದು ನನಗೆ ಹೆಚ್ಚಿನ ಉತ್ಸಾಹ ತಂದಿದೆ. ಈ ಸಿನಿಮಾದಲ್ಲಿ ಶೃತಿ 1970 ರ ದಶಕದ ಪಾತ್ರ ನಿರ್ವಹಿಸುತ್ತಿದ್ದಾರೆ.
ಈ ಸಿನಿಮಾ ನನ್ನ ಕಾಲೇಜು ದಿನಗಳನ್ನು ನೆನಪಿಗೆ ತರುತ್ತಿದೆ, ಅಂದಿನ ದಿನಗಳಲ್ಲಿ ಎರಡು ಜಡೆ ಜೊತೆಗೆ ಹೂವು ಹಾಕುವುದು ಸ್ಟೈಲ್, ಆ ಕಾಲದ ಸ್ಟೈಲ್ ನಲ್ಲಿ ಸುಂದರವಾಗಿ ಕಾಣುವುದು ನನಗೆ ತುಂಬಾ ಇಷ್ಟ.ಅಂದಿನ ದಿನಗಳಲ್ಲಿ ಮೊಬೈಲ್ ಇರಲಿಲ್ಲ, ಪ್ರೀತಿ ಹೆಚ್ಚು ಶುದ್ದ ಹಾಗೂ ಮುಗ್ಧತೆಯಿತ್ತು, ಆ ರೀತಿಯ ಪಾತ್ರ ಈ ಸಿನಿಮಾದಲ್ಲಿದೆ, ಸುದೀಪ್ ಎದುರು ನನ್ನ ನಟನೆ ಐಸ್ ಮೇಲಿನ ಕೇಕ್ ನಂತೆ ಎಂದಿದ್ದಾರೆ.
ಸುಹಾಸಿನಿ ಅವರ ಅಮೃತ ವರ್ಷಿಣಿ ನನ್ನ ಆಲ್ ಟೈಮ್ ಫೇವರಿಟ್, ಆ ರೀತಿಯ ಮತ್ತೊಂದು ಸಿನಿಮಾ ಮತ್ತೊಂದು ಬಂದಿಲ್ಲ, ಆ ರೀತಿ ಪಾತ್ರವನ್ನು ಮತ್ಯಾರು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ, ಆವರ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುವ ಅವಕಾಶ ನನಗೆ ಸಿಕ್ಕಿಲ್ಲ, ಈ ಮೊದಲು ನಾನು ಅವರನ್ನು ಭೇಟಿ ಮಾಡಿದ್ದೆ. ಲೂಸಿಯಾ, ಗೋದಿಬಣ್ಣ ಸಾಧಾರಣ ಮೈಕಟ್ಟು, ವಿಸ್ಮಯ, ಸೋಲೋ ಮುಂತಾದ ಸಿನಿಮಾಗಳನ್ನು ನೋಡಿ ನನ್ನ ಬಗ್ಗೆ  ಮೆಚ್ಚುಗೆಯ ಮಾತುಗಳನ್ನಾಡಿದರು, ಅವರ ಬಾಡಿ ಲಾಂಗ್ವೇಜ್ ವಿಭಿನ್ನ, ಅದಕ್ಕಾಗಿ ನಾನು ಹೊಂದಿಕೊಳ್ಳುತ್ತಿದ್ದೇನೆ ಎಂದು ಶೃತಿ ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಉತ್ತರ ಪ್ರದೇಶ: "ಆಕ್ಷೇಪಾರ್ಹ" ಸ್ಥಿತಿಯಲ್ಲಿದ್ದ ಪ್ರೇಮಿಗಳನ್ನು ಹೊಡೆದು ಕೊಂದ ಕುಟುಂಬಸ್ಥರು!

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

SCROLL FOR NEXT