ಕಬೀರ್ ದುಲ್ಹಾನ್ ಸಿಂಗ್ 
ಸಿನಿಮಾ ಸುದ್ದಿ

ನೀವು ಫಿಟ್ ಆಗಿದ್ದರೆ, ಯಶಸ್ಸು ಖಂಡಿತ: ಖಳನಟ ಕಬೀರ್ ಸಿಂಗ್

ಹೆಬ್ಬುಲಿ ಚಿತ್ರದ ಯಶಸ್ಸಿನ ನಂತರ ಮತ್ತೆ ಸುದೀಪ್ ಮತ್ತು ಕೃಷ್ಣ ಜೋಡಿ ಪೈಲ್ವಾನ್ ಚಿತ್ರದಲ್ಲಿ ಒಂದಾಗಿದೆ. ಇನ್ನು ಈ ಚಿತ್ರದಲ್ಲಿ ಖಳನಾಯಕನಾಗಿ ಕಬೀರ್ ದುಲ್ಹಾನ್ ಸಿಂಗ್ ಅಭಿನಯಿಸುತ್ತಿದ್ದಾರೆ...

ಹೆಬ್ಬುಲಿ ಚಿತ್ರದ ಯಶಸ್ಸಿನ ನಂತರ ಮತ್ತೆ ಸುದೀಪ್ ಮತ್ತು ಕೃಷ್ಣ ಜೋಡಿ ಪೈಲ್ವಾನ್ ಚಿತ್ರದಲ್ಲಿ ಒಂದಾಗಿದೆ. ಇನ್ನು ಈ ಚಿತ್ರದಲ್ಲಿ ಖಳನಾಯಕನಾಗಿ ಕಬೀರ್ ದುಲ್ಹಾನ್ ಸಿಂಗ್ ಅಭಿನಯಿಸುತ್ತಿದ್ದಾರೆ. 
ಪೈಲ್ವಾನ್ ಚಿತ್ರಕ್ಕಾಗಿ ನಿರ್ದೇಶಕ ಕೃಷ್ಣ ಅವರು ಸಿಕ್ಸ್ ಪ್ಯಾಕ್ ಹೊಂದಿರುವ ಖಳನಟನ ಹುಡುಕಾಟದಲ್ಲಿ ತೊಡಗಿದ್ದರು. ಅವರು ಅಂದುಕೊಂಡಂತೆ ಸಿಕ್ಸ್ ಪ್ಯಾಕ್ ಖಳನಟ ಕಬೀರ್ ಸಿಂಗ್ ಸಿಕ್ಕಿದ್ದಾರೆ. 
ಕಬೀರ್ ಸಿಂಗ್ ಅವರನ್ನು ಹೊಗಳಿರುವ ಸುದೀಪ್ ಕಬೀರ್ ಅವರ ಕಾರ್ಯಕ್ಷಮತೆ ಮತ್ತು ಶ್ರಮ ಸ್ವತಃ ಬದಲಾಗಿದೆ. ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಲು 12 ವಾರಗಳ ಚಾಲೆಂಜ್ ತೆಗೆದುಕೊಂಡಿದ್ದರು. ಅದೇ ರೀತಿ ತಮ್ಮ ದೇಹವನ್ನು ದಂಡಿಸಿ ಒಂದು ಆಕಾರಕ್ಕೆ ತಂದಿದ್ದಾರೆ. ಕಬೀರ್ ಅವರ ಬದಲಾವಣೆಯನ್ನು ಕಾಣಲು ಅಭಿಮಾನಿಗಳು ಮತ್ತು ಸಹ ನಟರು ಕಾತುರರಾಗಿದ್ದಾರೆ ಎಂದರು. 
ಇತ್ತೀಚೆಗಷ್ಟೇ ಟ್ವೀಟ್ ಮಾಡಿದ್ದ ಸುದೀಪ್, ನಿಧಾನವಾಗಿ... ನನಗೆ ಇದನ್ನು ಮಾಡಲಾಗುವುದಿಲ್ಲ@Kabirdulhansingh ನನ್ನ ಸಹೋದರ ಏನು ಬದ್ಧತೆ ಅದ್ಭುತ ಎಂದು ಟ್ವೀಟಿಸಿದ್ದರು. 
ಪೈಲ್ವಾನ್ ಚಿತ್ರಕ್ಕಾಗಿ ಕಬೀರ್ ಸ್ವ ಇಚ್ಛೆಯಿಂದ ಈ ಚಾಲೆಂಜ್ ಅನ್ನು ಸ್ವೀಕರಿಸಿದ್ದರು. ನಾನು ನಿನ್ನಷ್ಟು ಹಾರ್ಡ್ ವರ್ಕ್ ಅಲ್ಲ ಸ್ನೇಹಿತ. ನಾನು ನಿನ್ನ ಜತೆ ಸ್ಕ್ರೀನ್ ಹಂಚಿಕೊಳ್ಳಲು ಕಾತರಿಸುತ್ತಿದ್ದೇನೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. 
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಬೀರ್ ನಾನು ಎಂಟು ಪ್ಯಾಕ್ ಗಾಗಿ ತಯಾರಿ ನಡೆಸಿದ್ದೇನೆ. 90 ದಿನಗಳ ಕಾಲ ಜಿಮ್ ನಲ್ಲಿ ಕಸರತ್ತು ನಡೆಸಿದ್ದ ಕಬೀರ್ ಸದ್ಯ ಸಿಕ್ಸ್ ಪ್ಯಾಕ್ ಅನ್ನು ಮಾಡಿದ್ದೇನೆ. ನಾವು ಫಿಟ್ ಆಗಿದ್ದರೆ ಖಂಡಿತ ಯಶಸ್ಸು ಲಭಿಸುತ್ತದೆ ಎಂದು ಹೇಳಿದ್ದಾರೆ. 
ಹೆಬ್ಬುಲಿ ಚಿತ್ರದಲ್ಲೂ ಕಬೀರ್ ದುಲ್ಹಾನ್ ಸಿಂಗ್ ಖಳನಾಯಕನಾಗಿ ಅಭಿನಯಿಸಿದ್ದರು. ಮತ್ತೆ ನಿರ್ದೇಶಕ ಕೃಷ್ಣ ಅವರು ಪೈಲ್ವಾನ್ ಚಿತ್ರಕ್ಕಾಗಿ ಕಬೀರ್ ನನ್ನು ಆಯ್ಕೆ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT