ಸತತ ಸೋಲುಗಳಿಂದ ಕಂಗೆಟ್ಟು ಆತ್ಮಹತ್ಯೆಗೆ ಚಿಂತಿಸುತ್ತಿದ್ದೆ: ಎಆರ್ ರೆಹಮಾನ್ 
ಸಿನಿಮಾ ಸುದ್ದಿ

ಸೋಲುಗಳಿಂದ ಕಂಗೆಟ್ಟಾಗ ಆತ್ಮಹತ್ಯೆಗೆ ಚಿಂತಿಸುತ್ತಿದ್ದೆ: ಎಆರ್ ರೆಹಮಾನ್

ಖ್ಯಾತ ಸಂಗೀತ ನಿರ್ದೇಶಕ, ಸಂಯೋಜಕ ಎಆರ್ ರೆಹಮಾನ್ ಅವರ ಸಾಧನೆಗಳು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಇಂದು ಅವರೊಬ್ಬ ಖ್ಯಾತ ಸಂಗೀತ ನಿರ್ದೇಶಕನಾಗಿರಬಹುದು ಆದರೆ ಎಳೆಯ ವಯಸ್ಸಿನಲ್ಲೇ ಆತ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುವಷ್ಟು ನೋವು ಎದುರಿಸಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ, ಸಂಯೋಜಕ ಎಆರ್ ರೆಹಮಾನ್ ಅವರ ಸಾಧನೆಗಳು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಇಂದು ಅವರೊಬ್ಬ ಖ್ಯಾತ ಸಂಗೀತ ನಿರ್ದೇಶಕನಾಗಿರಬಹುದು ಆದರೆ ಎಳೆಯ ವಯಸ್ಸಿನಲ್ಲೇ ಆತ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುವಷ್ಟು ನೋವು ಎದುರಿಸಿದ್ದಾರೆ. 
ಹೌದು, ಸ್ವತಃ ಎಆರ್ ರೆಹಮಾನ್ ತಮ್ಮ ಜೀವನದ ಕಷ್ಟದ ದಿನಗಳನ್ನು ಹೇಳಿಕೊಂಡಿದ್ದಾರೆ.  ಎಆರ್ ರೆಹಮಾನ್ ಅವರ ಜೀವನ ಚರಿತ್ರೆಯನ್ನು ಕೃಷ್ಣ ತ್ರಿಲೋಕ್ ದಾಖಲಿಸಿದ್ದು, ಮುಂಬೈ ನಲ್ಲಿ ಪುಸ್ತಕ ಬಿಡುಗಡೆಯಾಗಿದೆ. ಈ ವೇಳೆ ಸಂದರ್ಶನ ನೀಡಿರುವ ಎಆರ್ ರೆಹಮಾನ್, ತಮ್ಮ ಜೀವನದ ಕಷ್ಟದ ದಿನಗಳನ್ನು ಹೇಳಿಕೊಂಡಿದ್ದಾರೆ. "ಸಿನಿಮಾ ಸಂಯೋಜಕರಾಗಿದ್ದ ನನ್ನ ತಂದೆ ಆರ್ ಕೆ ಶೇಖರ್ ಅವರನ್ನು 9 ನೇ ವಯಸ್ಸಿನಲ್ಲಿ ಕಳೆದುಕೊಂಡೆ, ಸಂಗೀತ ಉಪಕರಣಗಳನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಿದ್ದೆವು. ಈ ಮೂಲಕ ಸಂಗೀತ ಕ್ಷೇತ್ರಕ್ಕೆ ಅತ್ಯಂತ ಸಣ್ಣ ವಯಸ್ಸಿನಲ್ಲೇ ಪ್ರವೇಶಿಸಿದೆ. 12-22 ವಯಸ್ಸಿನ ವೇಳೆಗೆ ಎಲ್ಲವನ್ನೂ ನೋಡಿಯಾಗಿತ್ತು, ಸಾಮಾನ್ಯದ ಸಂಗತಿಗಳನ್ನು ಮಾಡುವುದೆಂದರೆ ಬೇಸರವಾಗುತ್ತಿತ್ತು, ಸಾಮಾನ್ಯವಾದ ಸಂಗತಿಗಳನ್ನು ಮಾಡುವುದರಲ್ಲಿ ಆಸಕ್ತಿ ಇರಲಿಲ್ಲ. ಪ್ರಾರಂಭದ ದಿನಗಳಲ್ಲಿ ಎದುರಿಸಿದ ಕಷ್ಟಗಳು ಮುಂದೆ ಧೈರ್ಯವಂತನಾಗುವಂತೆ ಮಾಡಿದವು. 25 ವರ್ಷದವರೆಗೂ ನಾನು ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಚಿಂತಿಸುತ್ತಿದ್ದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT