ಕವಿತಾ ಗೌಡ-ಆಡಂ ಪಾಶಾ 
ಸಿನಿಮಾ ಸುದ್ದಿ

ಬಿಗ್‌ಬಾಸ್‌ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆಡಂ ಪಾಶಾ, ಕವಿತಾ ಗೌಡ ಆಡಂಗೆ ಕೊಟ್ಟಿದ್ದೇನು? ಮನಕಲಕುವ ದೃಶ್ಯ!

ಅಭಿನಯ ಚಕ್ರವರ್ತಿ ಸುದೀಪ್ ನಿರೂಪಿಸಿ ಕೊಡುವ ಕನ್ನಡ ಬಿಗ್‌ಬಾಸ್‌ ಶೋ ಹಲವು ವಿಚಾರಗಳಿಗೆ ಸುದ್ದಿಯಾಗುತ್ತಿರುತ್ತದೆ...

ಬೆಂಗಳೂರು: ಅಭಿನಯ ಚಕ್ರವರ್ತಿ ಸುದೀಪ್ ನಿರೂಪಿಸಿ ಕೊಡುವ ಕನ್ನಡ ಬಿಗ್‌ಬಾಸ್‌ ಶೋ ಹಲವು ವಿಚಾರಗಳಿಗೆ ಸುದ್ದಿಯಾಗುತ್ತಿರುತ್ತದೆ. 
ಬಿಗ್‌ಬಾಸ್‌ ಕನ್ನಡ ಆರನೇ ಆವೃತ್ತಿಯೂ ಆರಂಭವಾಗಿ ಸ್ಪರ್ಧಿಗಳು ಪ್ರತಿದಿನ ಮನರಂಜನೆಯನ್ನು ನೀಡುತ್ತಿರುತ್ತಾರೆ. ಈ ಬಾರಿ ಬಿಗ್ ಬಾಸ್ ಮನೆಗೆ ಸ್ಪೆಶಲ್ ವ್ಯಕ್ತಿ ಆಡಂ ಪಾಶಾ ಎಂಟ್ರಿ ಕೊಟ್ಟಿದ್ದಾರೆ. ಕಳೆದ ಮೂರು ವಾರಗಳಿಂದಲೂ ಒಮ್ಮೆಯೂ ಭಾವುಕರಾಗದ ಆಡಂ ಪಾಶಾ ಶುಕ್ರವಾರ ಪ್ರಸಾರವಾದ ಸಂಚಿಕೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. 
ಬಿಗ್‌ಬಾಸ್‌ ಮನೆಯಲ್ಲಿ ದೀಪಾವಳಿ ಆಚರಿಸಲಾಗುತ್ತಿತ್ತು. ಹಬ್ಬದ ಪ್ರಯುಕ್ತ ವಿಶೇಷ ಟಾಸ್ಕ್ ಗಳನ್ನು ನೀಡುವ ಮೂಲಕ ಮನೆಯಲ್ಲಿ ದೀಪಾವಳಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಇನ್ನು ಟಾಸ್ಕ್ ಗೆದ್ದ ಸ್ಪರ್ಧಿಗಳಿಗೆ ಅವರ ಪ್ರೀತಿ ಪಾತ್ರರಿಂದ ಬಂದಿರುವ ಉಡುಗೊರೆಯನ್ನು ಸಹ ನೀಡಲಾಗುತ್ತಿತ್ತು. 
ಎಲ್ಲಾ ಸ್ಪರ್ಧಿಗಳಿಗೂ ಸಂದೇಶ ಕಳುಹಿಸಲಾಗಿತ್ತು. ಆದರೆ ಆಡಂ ಪಾಶಾಗೆ ಯಾರು ದೀಪಾವಳಿಯ ಸಂದೇಶ ಕಳುಹಿಸಿರಲಿಲ್ಲ. ಹೀಗಾಗಿ ಎಲ್ಲ ಸ್ಪರ್ಧಿಗಳು ತಮ್ಮ ಕುಟುಂಬಸ್ಥರು ನೀಡಿದ ಗಿಫ್ಟ್ ನಿಂದ ಸಂತೋಷದಲ್ಲಿದ್ದ ಕ್ಷಣದಲ್ಲಿ ಆಡಂ ಒಂದು ಕ್ಷಣ ಭಾವುಕರಾದರು. ಈ ವೇಳೆ ಕವಿತಾ ಗೌಡ ತಮಗೆ ಬಂದಿರುವ ಗಿಫ್ಟ್ ಅನ್ನು ಆಡಂಗೆ ನೀಡುವ ಮೂಲಕ ಅವರ ದುಃಖದಲ್ಲಿ ಭಾಗಿಯಾದರು. 
ಕವಿತಾ ಗೌಡ ಅವರಿಗೆ ತನ್ನ ಆತ್ಮೀಯ ಸ್ನೇಹಿತರು ಇಸ್ರೇಲ್ ನಿಂದ ತಂದಿದ್ದ ಲಾಕೆಟ್ ಅನ್ನು ಬಿಗ್‌ಬಾಸ್‌ ಮನೆಗೆ ಕಳುಹಿಸಿದ್ದರು. ಅದೇ ಲಾಕೆಟ್ ಅನ್ನು ಕವಿತಾ ಆಡಂಗೆ ನೀಡಿದರು. ನಾನು ಈ ಲಾಕೆಟ್ ಬಹಳ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದೇನೆ. ಆಡಂಗೆ ಕುಟುಂಬಸ್ಥರು ಎಲ್ಲಿದ್ದಾರೆ? ಏನು ಎಂಬುದು ನನಗೆ ಗೊತ್ತಿಲ್ಲ. ಸದ್ಯ ಆಡಂಗಾಗಿ ಯಾವ ಸಂದೇಶ ಅಥವಾ ಗಿಫ್ಟ್ ಬಂದಿಲ್ಲ. ಹಾಗಾಗಿ ನನ್ನ ಅದೃಷ್ಟದ ಲಾಕೆಟ್ ಅನ್ನು ಆಡಂಗೆ ನೀಡುತ್ತಿದ್ದೇನೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT