ಸಿನಿಮಾ ಸುದ್ದಿ

ಮತ್ತೆ ಒಂದಾದ 'ರಾಮ್ ಲೀಲಾ' ಜೋಡಿ: ಚಿರು-ವಿಜಯ್ ಕಿರಣ್ ಸಂಯೋಗದಲ್ಲಿ ಹೊಸ ಚಿತ್ರಕ್ಕೆ ಶೀಘ್ರ ಮಹೂರ್ತ

Raghavendra Adiga
ಬೆಂಗಳೂರು: "ರಾಮ್ ಲೀಲಾ ಬಳಿಕ  ನಟ ಚಿರಂಜೀವಿ ಸರ್ಜಾ ಹಾಗೂ ನಿರ್ದೇಶಕ  ವಿಜಯ್ ಕಿರಣ್ ಮತ್ತೆ ಒಂದಾಗಿದ್ದಾರೆ. ಚಿರಂಜೀವಿ ಅವರ ಮುಂದಿನ ಚಿತ್ರವನ್ನು  ಉದಯ್ ಕೆ ಮೆಹ್ತಾ ನಿರ್ಮಾಣ ಮಾಡುತ್ತಿದ್ದು ಇದಕ್ಕೆ ವಿಜಯ್ ಆಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರದ ಮಹೂರ್ತ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದ್ದು ಆ ವೇಳೆಗೆ ಚಿತ್ರತಂಡ ಚಿತ್ರದ ಟೈಟಲ್ ತೀಸರ್ ಅನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ಹಾಕಿಕೊಂಡಿದೆ.
ಚಿತ್ರದ ನಾಯಕಿ ಸೇರಿಅಂತೆ ಇತರೆ ಪಾತ್ರಗಳಿಗೆ ನಟ ನಟಿಯರ ಆಯ್ಕೆ ಇನ್ನಷ್ಟೇ ಆಗಬೇಕಿದ್ದು ಸಧ್ಯ ಧರ್ಮ ವಿಶ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ ಎನ್ನುವುದು ಖಚಿತಪಟ್ಟಿದೆ.
ಈ ಚಿತ್ರ ಡಿಸೆಂಬರ್ ತಿಂಗಳಲ್ಲಿ ಸೆಟ್ಟೇರುವ ನಿರೀಕ್ಷೆ ಇದ್ದು ನಿರ್ಮಾಪಕ ಉದಯ್ ಚಿರು ಸೋದರ ದ್ರುವ ಸರ್ಜಾ ಅವರಿಗಾಗಿ ಸಹ ಒಂದು ಚಿತ್ರ ತಯಾರಿಸುವ ಯೋಜನೆ ಹೊಂದಿದ್ದಾರೆ. ಆ ಚಿತ್ರ ಮುಂದಿನ ವರ್ಷದಲ್ಲಿ ಶೂಟಿಂಗ್ ಪ್ರಾರಂಭಿಸುವ ನಿರೀಕ್ಷೆ ಇದೆ.
SCROLL FOR NEXT