ವಿಕ್ಕಿ ಬರೆದ ಅಂಬರೀಷ್ ಚಿತ್ರಗಳು 
ಸಿನಿಮಾ ಸುದ್ದಿ

ಭಾರವಾದ ಹೃದಯದಿಂದ ಸಮಾಧಿ ಬಳಿ ಅಂಬರೀಷ್ ಚಿತ್ರ ಬರೆದ ಕಲಾವಿದ ವಿಕ್ಕಿ!

ಕಂಠೀರವ ಸ್ಟುಡಿಯೋದಲ್ಲಿ ನಟ ಅಂಬರೀಷ್ ಅವರ ಬೆಂಗಳೂರಿನ ಕಲಾವಿದ ಜಿ.ವಿಕ್ಕಿ ಸಮಾಧಿ ಸ್ಥಳದಲ್ಲಿ ಭಾವುಕರಾದರು.

ಬೆಂಗಳೂರು: ಕಂಠೀರವ ಸ್ಟುಡಿಯೋದಲ್ಲಿ ನಟ ಅಂಬರೀಷ್ ಅವರ ಬೆಂಗಳೂರಿನ ಕಲಾವಿದ ಜಿ.ವಿಕ್ಕಿ ಸಮಾಧಿ ಸ್ಥಳದಲ್ಲಿ ಭಾವುಕರಾದರು. ಅಂಬರೀಷ್ ಅವರು ಜೀವಂತವಾಗಿದ್ದಾಗ ಅವರ ಭಾವಚಿತ್ರ ಹಾಗೂ ಕಟೌಟ್ ಗಳನ್ನು ವಿಕ್ಕಿ ಬರೆಯುತ್ತಿದ್ದರು. ಆದರೆ ಸೋಮನವಾರ ಅಂಬರೀಷ್ ಚಿತ್ರ ಬರೆಯುವಾಗ ಅವರ ನೋವು ಅನುಭವಿಸುತ್ತಿದ್ದರು.
ತಮಿಳುನಾಡು ಮೂಲದ ವಿಕ್ಕಿ ಬೆಂಗಳೂರಿನಲ್ಲಿ ಆರ್ಟ್ ಎಜೆನ್ಸಿ ನಡೆಸುತ್ತಿದ್ದಾರೆ.10ನೇ ತರಗತಿ ಮುಗಿಸಿದ ಮೇಲೆ, ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿದ ನಂತರ ನಾನು ಸಿನಿಮಾ ಪೋಸ್ಚರ್ ಮತ್ತು ಕಟೌಟ್ ಬರೆಯುವುದನ್ನು ಕಲಿಯಲು ಆರಂಭಿಸಿದರು, 18 ವರ್ಷ ವಯಸ್ಸಾದ ಮೇಲೆ ಬೆಂಗಳೂರಿಗೆ ಬಂದು ಕೆಲಸ ಮಾಡಲು ಆರಂಭಿಸಿದ್ದಾಗಿ ಹೇಳಿದ್ದಾರೆ.
ಅಂಬರೀಷ್ ಅವರ ಸಿನಿಮಾಗಳ ಹಲವು ದೊಡ್ಡ ದೊಡ್ಡ ಕಟೌಟ್ ಗಳನ್ನು ಬರೆದಿದ್ದಾರೆ, ಅವುಗಳನ್ನು ಥಿಯೇಟರ್ ಗಳ ಮುಂದೆ ವಿಕ್ಕಿ ಬರೆದ ಕಟೌಟ್ ಗಳಿರುತ್ತವೆ, ನಾನು ಚುನಾವಣೆ ಗಾಗಿಯೂ ಕಟೌಟ್ ಬರೆಯುತ್ತೇನೆ, ಅಂಬರೀಷ್ ಜೀವನದ ಮೂರು ಹಂತಗಳ ವಿಭಿನ್ನ ಚಿತ್ರಗಳನ್ನು ಬರೆದಿದ್ದಾರೆ,
ಸೂರ್ಯಸ್ತ ಆಗುತ್ತಿರುವ ಚಿತ್ರ, ಅವರ ಸಾವಿನ ಸಂಕೇತ, ಅದನ್ನು ಪೂರ್ಣಗೊಳಿಸಲು 2 ಗಂಟೆ ಸಮಯಾವಕಾಶ ಹಿಡಿಯಿತು, ಒಮ್ಮೆ ಅಂಬರೀಶ್ ಮಂಡ್ಯದಲ್ಲಿ ಕಟೌಟ್ ನೋಡಿ, ನನ್ನ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ, ನನ್ನ ಕೈ ಕುಲುಕಿದರು, ಅದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT