ವೈರಮುತ್ತು ಹಾಗೂ ರಾಧಾ ರವಿ 
ಸಿನಿಮಾ ಸುದ್ದಿ

#MeToo: ತಮಿಳಿನ ಪ್ರಸಿದ್ದ ಗೀತರಚನೆಕಾರ ವೈರಮುತ್ತು, ನಟ ರಾಧಾ ರವಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ!

ಭಾರತದಲ್ಲಿ ದಿನ ದಿನಕ್ಕೆ ಕಾವು ಪಡೆದುಕೊಳ್ಳುತ್ತಿರುವ "ಮೀ ಟೂ" ಅಭಿಯಾನಕ್ಕೆ ಇದೀಗ ತಮಿಳು ಚಿತ್ರರಂಗವೂ ಹೊರತಾಗಿಲ್ಲ. ತಮಿಳಿನ ಖ್ಯಾತ ಗೀತ ರಚನೆಗಾರ ವೈರಮುತ್ತು ತಮಗೆ....

ಚೆನ್ನೈ: ಭಾರತದಲ್ಲಿ ದಿನ ದಿನಕ್ಕೆ ಕಾವು ಪಡೆದುಕೊಳ್ಳುತ್ತಿರುವ "ಮೀ ಟೂ" ಅಭಿಯಾನಕ್ಕೆ ಇದೀಗ ತಮಿಳು ಚಿತ್ರರಂಗವೂ ಹೊರತಾಗಿಲ್ಲ. ತಮಿಳಿನ ಖ್ಯಾತ ಗೀತ ರಚನೆಗಾರ ವೈರಮುತ್ತು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಮೂವರು ಅನಾಮಧೇಯ ಮಹಿಳೆಯರು ಆರೋಪಿಸಿದರೆ ತಮಿಳು ಚಿತ್ರರಂಗದ ಹಿರಿಯ ನಟ ರಾಧಾ ರವಿ ವಿರುದ್ಧ ಸಹ ಓರ್ವ ಮಹಿಳೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ.
ಅದೊಮ್ಮೆ ವೈರಮುತ್ತು 18ರ ಹರೆಯದ ಇಬ್ಬರು ಗಾಯಕಿಯರನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ಕಛೇರಿ ಹಾಗೂ ಮನೆ ಎರಡು ಆಗಿದ್ದ ವೈರಮುತ್ತು ಅವರ ನಿವಾಸಕ್ಕೆ ಆಗಮಿಸಿದ ಓರ್ವ ಗಾಯಕಿಯನ್ನು ವೈರಮುತ್ತು ತಬ್ಬಿ ಮುತ್ತಿಕ್ಕಿದ್ದಾಗಿ ಆಕೆ ಹೇಳಿಕೊಂಡಿದ್ದಾರೆ. ಇನ್ನೋರ್ವ ಗಾಯಕಿ ತಾವು ಅವರ ನಿವಾಸದಲ್ಲಿದ್ದಾಗ ಅವರು ಬಾಗಿಲು ಭದ್ರಪಡಿಸಿ ತಮ್ಮನ್ನು ಸ್ಪರ್ಷಿಸಿದ್ದರು ಎಂದು ಆರೋಪಿಸಿದ್ದಾರೆ.
ಪತ್ರಕರ್ತರಾದ ಸಂಧ್ಯಾ ಮೆನನ್ ಸಂತ್ರಸ್ಥೆಯರ ಪರ ಟ್ವೀಟ್ ಮಾಡಿದ್ದಾರೆ.
ಇದರಲ್ಲಿ ಓರ್ವ ಗಾಯಕಿಯು ತನ್ನ ವೃತ್ತಿಜೀವನ ನಾಶವಾಗುವ ಭಯದಿಂದ ಈ ವಿಚಾರವನ್ನು ತಮ್ಮ ಪತಿಯ ಬಳಿ ಸಹ ಹೇಳಿಕೊಂಡಿರಲಿಲ್ಲ ಎಂದು ವಿವರಿಸಿದ್ದಾರೆ.
ಮೂರನೇ ಸಂತ್ರಸ್ಥೆಯ ಪರವಾಗಿ ಗಾಯಕಿ ಚಿನ್ಮಯಿ ಟ್ವೀಟ್ ಮಾಡಿದ್ದು ವೈರಮುತ್ತು ಹಾಸ್ಟೆಲ್ ಬಗೆಗೆ, ಅಲ್ಲಿನ ಹುಡುಗಿಯರೊಡನೆ ವೈರಮುತ್ತು ವಿವಿಧ ರೀತಿಯಲ್ಲಿ ವರ್ತಿಸುತ್ತಿದ್ದದ್ದರ ಬಗೆಗೆ ಅಲ್ಲಿ ವಿವರಗಳಿದೆ.
ಇನ್ನೊಂದೆಡೆ ಬಿಹೈಂಡ್ ವುಡ್ಸ್ ನ ಉದ್ಯೋಗಿಯಾಗಿಯೊಬ್ಬರು ಅನಾಮಧೇಯ ಮಹಿಳೆಯ ಪರವಾಗಿ ಟ್ವೀಟ್ ಮಾಡಿದ್ದು ನಟ ರಾಧಾ ರವಿ ಆಕೆಯನ್ನು ಅಪ್ಪಿಕೊಂಡಿದ್ದು ಚುಂಬಿಸಿದ್ದಾರೆ. ಹಾಗೆಯೇ ಆಕೆ ತನ್ನ ಕೆಲಸ ಮುಗಿದ ಬಳಿಕ ಏಕಾಂತವಾಗಿ ತನ್ನನ್ನು ಭೇಟಿಯಾಗುವಂತೆ ನಟ ಅವಳಿಗೆ ಸೂಚಿಸಿದ್ದರು ಎಂದು ಬರೆಯಲಾಗಿದೆ.
ಸಂಸ್ತ್ರಸ್ಥೆಯರು ಸೂಚಿಸಿರುವ ಇಬ್ಬರೂ ವ್ಯಕ್ತಿಗಳು ರಾಜಕೀಯ ವಲಯದ ಸಂಪರ್ಕ ಹೊಂದಿದ್ದಾರೆ.
ಭಾರತದಲ್ಲಿ ಕಳೆದೊಂದು ವಾರದಿಂದ "ಮೀ ಟೂ" ಅಭಿಯಾನ ನಡೆಯುತ್ತಿದೆ. ಕಾಮೆಡಿಯನ್ ಉತ್ಸವ್ ಚಕ್ರವರ್ತಿ ಇದನ್ನು ಪ್ರಾರಂಭಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT