ಸಿನಿಮಾ ಸುದ್ದಿ

ಬರ್ತ್ ಡೇ ಕಟೌಟ್: ನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲಿಸಿದ ಬಿಬಿಎಂಪಿ

Manjula VN
ಬೆಂಗಳೂರು: ನಟ ಧ್ರುವ ಸರ್ಜಾ ಅವರ ಹುಟ್ಟುಹಬ್ಬದ ಪ್ರಯುಕ್ತ ರಸ್ತೆಯಲ್ಲಿ ಕಟೌಟ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಬನಶಂಕರಿ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ಮಂಗಳವಾರ ತಿಳಿದುಬಂದಿದೆ. 
ಧ್ರುವ ಸರ್ಜಾ ವಿರುದ್ಧ ಬನಶಂಕರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ತಾರಾನಾಥ್ ಅವರು ದೂರು ದಾಖಲಿಸಿದ್ದು, ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. 
ಧ್ರುವ ಸರ್ಜಾ ವಿರುದ್ದ ದೂರು ದಾಖಲಾಗಿಲ್ಲ. ಕಟೌಟ್ ನಲ್ಲಿ ಧ್ರುವ ಸರ್ಜಾ ಅವರ ಫೋಟೋ ಇದ್ದ ಕಾರಣ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 
ಧ್ರುವ ಸರ್ಜಾ ಅವರು ಹೇಳಿಕೆ ನೀಡಿದ ಬಳಿಕ ಯಾರು ಈ ಕಟೌಟ್ ಅಳವಡಿಸಿದ್ದರೂ ಎಂಬುದನ್ನು ಪತ್ತೆ ಹಚ್ಚಿ, ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬನಶಂಕರಿ ಪೊಲೀಸರು ತಿಳಿಸಿದ್ದಾರೆ. 
ವಾರ್ಡ್ ಸಂಖ್ಯೆ 167ರಲ್ಲಿ ಬರುವ ಕೆ.ಆರ್.ರಸ್ತೆ ಮತ್ತು ಶಾಸ್ತ್ರಿ ನಗರ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಧ್ರುವ ಸರ್ಜಾ ಅವರ ಸುಮಾರು 20 ಅಡಿಯ ಕಟೌಟ್ ಹಾಕಲಾಗಿದೆ. 
ಅಭಿಮಾನಿಗಳು ಕಟೌಟ್ ಹಾಕಿದ್ದಾರೆಂದು ತಿಳಿದುಬಂದಿತ್ತು. ಬಿಬಿಎಂಪಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ ಬಳಿಕ ಕಟೌಟ್ ಗಳನ್ನು ತೆಗೆಯಲಾಯಿತು. ಈಗೇಕೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆಂಬುದು ನನಗೆ ಗೊತ್ತಿಲ್ಲ ಎಂದು ನಟ ಧ್ರುವ ಸರ್ಜಾ ಅವರು ಹೇಳಿದ್ದಾರೆ. 
SCROLL FOR NEXT