ಪ್ರಿಯಾಂಕಾ ತಿಮ್ಮೇಶ್ 
ಸಿನಿಮಾ ಸುದ್ದಿ

ಕಾಲಿವುಡ್ ನಲ್ಲಿ ಪ್ರಿಯಾಂಕಾ ತಿಮ್ಮೇಶ್ ಬ್ಯುಸಿ: ಮೊದಲ ತಮಿಳು ಚಿತ್ರ ಬಿಡುಗಡೆಗೆ ಮುನ್ನವೇ ಎರಡನೇ ಚಿತ್ರಕ್ಕೆ ಕರೆ

ತಮಿಳಿನಲ್ಲಿ ತನ್ನ ಮೊದಲ ಚಿತ್ರ ಬಿಡುಗಡೆಗೆ ಮುನ್ನವೇ ಪ್ರಿಯಾಂಕಾ ತಿಮ್ಮೇಶ್ ಕಾಲಿಉವುಡ್ ನಿಂದ ಎರಡನೇ ಚಿತ್ರದ ಆಫರ್ ಸ್ವೀಕರಿಸಿದ್ದಾರೆ. ಪ್ರಿಯಾಂಕಾ ಮೊದಲ ತಮಿಳು ಚಿತ್ರ....

ಬೆಂಗಳೂರು: ತಮಿಳಿನಲ್ಲಿ ತನ್ನ ಮೊದಲ ಚಿತ್ರ ಬಿಡುಗಡೆಗೆ ಮುನ್ನವೇ ಪ್ರಿಯಾಂಕಾ ತಿಮ್ಮೇಶ್ ಕಾಲಿಉವುಡ್ ನಿಂದ ಎರಡನೇ ಚಿತ್ರದ ಆಫರ್ ಸ್ವೀಕರಿಸಿದ್ದಾರೆ. ಪ್ರಿಯಾಂಕಾ ಮೊದಲ ತಮಿಳು ಚಿತ್ರ ಅಸೀಫ್ ಖುರೇಷಿ ನಿರ್ದೇಶನದ ಉದಯ ನಾಯಕನಾಗಿರುವ "ಉತ್ತರವು ಮಹಾರಾಜ" ಚಿತ್ರ ಇದೇ ನವೆಂಬರ್ 16ರಂದು ತೆರೆ ಕಾಣುತ್ತಿದೆ. ಚಿತ್ರದ ಪ್ರಚಾರಕ್ಕಾಗಿ ನಟಿ ಇಂದು (ಸೋಮವಾರ) ಚೆನ್ನೈಗೆ ತೆರಳುತ್ತಿದ್ದು ತಮ್ಮ ಎರಡನೇ ಚಿತ್ರದ ಶೂಟಿಂಗ್ ಮಂಗಳವಾರದಿಂದ ಪ್ರಾರಂಭಿಸಲು ನಿರ್ಧರಿಸಿದ್ದಾರೆ.
ಜಿಎನ್ ಆರ್ ಕುಮಾರವೇಲನ್ ನಿರ್ದೇಶನದ ಈ ಚಿತ್ರಕ್ಕೆ ಇನ್ನೂ ಹೆಸರನ್ನು ಅಂತಿಮಗೊಳಿಸಿಲ್ಲ.ಇನ್ನೊಂದು ಸ್ವಾರಸ್ಯವೆಂದರೆ ಈ ಚಿತ್ರದಲ್ಲಿ ಪ್ರೊಯಾಂಕಾ ಕನ್ನಡದ ಇನ್ನೋರ್ವ ನಟ ಕಿಶೋರ್ ಹ್ಜೆತೆ ತೆರೆ ಹಂಚಿಕೊಳ್ಳಲಿದ್ದಾರೆ.
"ಅವರು ಪ್ರಶಸ್ತಿ ವಿಜೇತ ನಿರ್ದೇಶಕರಾಗಿದ್ದು ಚಿತ್ರದ ಕಥೆ ನನಗೆ ಬಹಳ ಹಿಡಿಸಿತು. ಕಾಲಿವುಡ್ ನಲ್ಲಿ ಚಿತ್ರ ನಿರ್ಮಾಣ ಶೈಲಿ ಬಹುತೇಕ ವಿಭಿನ್ನವಾಗಿರುತ್ತದೆ. ಕಥೆಯು ಯಾವಾಗಲೂ ಮುಖ್ಯ ವಸ್ತುವಿನ ಸುತ್ತಲೇ ಇರಲಿದೆ. ಈ ಚಿತ್ರದಲ್ಲಿ ಮುಖ್ಯ ಪಾತ್ರವೆನ್ನುವ ವಿಚಾರವೇ ಇಲ್ಲ. ಇಲ್ಲಿ ಎಲ್ಲಾ ಕಥೆ, ಪಾತ್ರಗಳೂ ಅತಿ ಮುಖ್ಯವಾಗಿದ್ದು ಇಂತಹಾ ಚಿತ್ರವೊಂದರಲ್ಲಿ ತಾನೂ ಕಾಣಿಸಿಕೊಳ್ಳುತ್ತಿದ್ದೇನೆ" ಪ್ರಿಯ್ತಾಂಕ ಹೇಳಿದ್ದಾರೆ.
ಕನ್ನಡದಲ್ಲಿ ಇದಾಗಲ್ ಪ್ರಸಿದ್ದರಾದ ನಟಿ ಪ್ರಿಯಾಂಕ ಇತ್ತೀಚ್ಗೆ "ಕೈಯಾಮುಕುಳಂ ಕೋಚ್ ಉನ್" ಮೂಲಕ ಮಲಯಾಳಂ ಚಿತ್ರರಂಗದಲ್ಲಿಯೂ ತಮ್ಮ ಛಾಪು ಮೂಡಿಸಿದ್ದರು.
ಕನ್ನಡದಲ್ಲಿ ಸಹ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸುತ್ತಿರುವ ನಟಿ ತಮ್ಮ ನಟನೆಯ "ಭೀಮಸೇನ ನಳಮಹಾರಾಜ" ಅಲ್ಲದೆ ಪ್ರಜ್ವಲ್ ದೇವರಾಜ್ ಅಭಿನಯದ "ಅರ್ಜುನ್ ಗೌಡ" ಚಿತ್ರದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ.
"ನಾನು ಇದಾಗಲೇ ತೆಲುಗು ನಿರ್ದೇಶಕರೊಡನೆ ಸಹ ಸಂಪರ್ಕದಲ್ಲಿದ್ದು ಒಂದಿಮ್ಮೆ ನಿರ್ದೇಶಕರ ಮಾತುಕತೆ ಯಶಸ್ವಿಯಾದರೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಅಭಿನಯಿಸಿದಂಟಾಗ;ಲಿದೆ. ಟಾಲಿವುಡ್ ನ ವಿವಿಧ ನಿರ್ದೇಶಕರು ತನಗೆ ಚಿತ್ರೀಕರಣಕ್ಕಾಗಿ ಆಫರ್ ನೀಡಿದ್ದಾರೆ. "ನಟಿ ಸಂತಸದಿಂದ ಪ್ರತಿಕ್ರಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

SCROLL FOR NEXT