ಬೆಂಗಳೂರು: ಪುನೀತ್ ರಾಜ್ ಕುಮಾರ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ, ಅಮೆರಿಕಾದಲ್ಲಿ ನಡೆದ ಅಕ್ಕ ಸಮ್ಮೆಳನ ಮುಗಿಸಿ ವಾಪಾಸಿಗಿರುವ ಪುನೀತ್ ಕರ್ನಾಟಕ ಚಲನ ಚಿತ್ರ ಕಪ್ ನಲ್ಲೂ ಭಾಗವಹಿಸಿದ್ದಾರೆ. ಇದೆಲ್ಲಾದರ ನಡುವೆ ಸೆಪ್ಟಂಬರ್ 18ರಿಂದ ನಟಸಾರ್ವ ಭೌಮ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ,
ಪವನ್ ಒಡೆಯರ್ ನಿರ್ಮಾಣದ ಮುಂದಿನ ಸಿನಿಮಾಗಾಗಿ ಕೊಲ್ಕೊತಾಗೆ ತೆರಳಲಿದ್ದಾರಪೆ, ನಟ ಸಾರ್ವಭೌಮದಲ್ಲಿ ಅನುಪಮಾ ಪರಮೇಶ್ವರನ್ ನಟ ಸಾರ್ವಭೌಮನಿಗೆ ನಾಯಕಿಯಾಗಿದ್ದಾರೆ. 10 ದಿನಗಳ ಪ್ರಮುಖ ಭಾಗ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ,
ನಟ ಸಾರ್ವಭೌಮದಲ್ಲಿ ಪುನೀತ್ ಪತ್ರಕರ್ತನಾಗಿ ನಟೆಸಲಿದ್ದಾರೆ, ಅನುಪಮಾ ವಕೀಲೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ರಚಿತಾರಾಮ್ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ,
ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ತಯಾರಾಗುತ್ತಿದ್ದು ಚಿಕ್ಕಣ್ಣ , ರವಿ ಶಂಕರ್ ಮುಂತಾದವರು ನಟಿಸುತ್ತಿದ್ದಾರೆ.