ಕೋಮಲ್ ಕುಮಾರ್ 
ಸಿನಿಮಾ ಸುದ್ದಿ

4 ವರ್ಷದ ನಂತರ 'ಕೆಂಪೇಗೌಡ-2' ಮೂಲಕ ಮರಳುತ್ತಿದ್ದಾರೆ ಕೋಮಲ್

ತಮ್ಮ ಕಚಗುಳಿ ಇಡುವ ಕಾಮಿಡಿ ಮೂಲಕ ನಕ್ಕು ನಗಿಸುತ್ತಿದ್ದ ಕೋಮಲ್‌ ಕುಮಾರ್‌ ಆ್ಯಕ್ಷನ್‌ ಅವತಾರ ತಾಳಿದ್ದ ಕೆಂಪೇಗೌಡ-2 ಚಿತ್ರದ ಟ್ರೇಲರ್‌ ಭಾನುವಾರ ಬಿಡುಗಡೆಯಾಗುತ್ತಿದ್ದು, ..

ತಮ್ಮ ಕಚಗುಳಿ ಇಡುವ ಕಾಮಿಡಿ ಮೂಲಕ ನಕ್ಕು ನಗಿಸುತ್ತಿದ್ದ ಕೋಮಲ್‌ ಕುಮಾರ್‌ ಆ್ಯಕ್ಷನ್‌ ಅವತಾರ ತಾಳಿದ್ದ ಕೆಂಪೇಗೌಡ-2 ಚಿತ್ರದ ಟ್ರೇಲರ್‌ ಭಾನುವಾರ ಬಿಡುಗಡೆಯಾಗುತ್ತಿದ್ದು, ಇದು ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲೇ ಒಂದು ಹೊಸ ಮತ್ತು ಒಳ್ಳೆಯ ಪ್ರಯತ್ನ ಎಂದು ಕೋಮಲ್ ಹೇಳಿದ್ದಾರೆ.
ನಾನು ತೆರೆ ಮೇಲೆ ಬಂದು ನಾಲ್ಕು ವರ್ಷಗಳೇ ಕಳೆದಿವೆ.  ಇದು ನನ್ನ ಸೆಕೆಂಡ್ ಇನ್ನಿಂಗ್ಸ್.  ಒಂದು ಸಿನಿಮಾ ನಿರ್ಮಾಣ ಮಾಡಿ ಬಿಡುಗಡೆ ಮಾಡುವ ಹೊತ್ತಿಗೆ ಹೈರಾಣಾಗಿ ಬಿಡುತ್ತಾರೆ. ಆದರೆ ನಾವು ಕೆಂಪೇಗೌಡ-2 ಚಿತ್ರ ಮಾಡಿ ಮುಗಿಸಿದ್ದೇವೆ. ಆದರೆ ಇದುವರೆಗೂ ಸುಸ್ತು ಅನ್ನುವುದೇ ಆಗಿಲ್ಲ. ಸಾಕಷ್ಟು ಜನ ಯಾಕೆ ಲೇಟಾಯಿತು ಎಂದು ಕೇಳಿದ್ದರು. ಅದಕ್ಕೆ ನಾನು ಕೊಡುವ ಉತ್ತರ ಸಾಕಷ್ಟು ಜನ ಧರ್ಮಸ್ಥಳಕ್ಕೆ ಕಾರಿನಲ್ಲಿ ಬಸ್ಸಿನಲ್ಲಿ ಹೋಗುತ್ತಾರೆ, ನಾವು ಪಾದಯಾತ್ರೆಯಲ್ಲಿ ಹೋಗಿದ್ದೇವೆ. ಹಾಗಾಗಿ ತಡವಾಗಿದೆ. 
ಈಗ ಏಪ್ರಿಲ್ 14 ರಂದು ಟ್ರೇಲರ್‌ ಬಿಡುಗಡೆ ಆಗುತ್ತಿದೆ,. ಅದು ಖಂಡಿತಾ ಜನರಿಗೆ ಇಷ್ಟವಾಗುತ್ತದೆ' ಎನ್ನುತ್ತಾರೆ ಕೋಮಲ್‌. ಶಂಕರೇಗೌಡ ನಿರ್ದೇಶನದ ಈ ಸಿನಿಮಾದಲ್ಲಿ ರಿಶಿಕಾ ಶರ್ಮ ನಾಯಕಿಯಾಗಿ ನಟಿಸಿದ್ದಾರೆ. 
ನಾನು ದೊಡ್ಡ ಗ್ಯಾಪ್‌ ತೆಗೆದುಕೊಂಡರೂ ಹೊಸ ರೀತಿಯ ಪ್ರಯತ್ನದ ಮೂಲಕ ಬರುತ್ತಿದ್ದೇನೆ. ಪಾತ್ರ, ಕಥೆ ಬಹಳ ಸೊಗಸಾಗಿದೆ. ಪ್ರೇಕ್ಷಕರಿಗೆ ಬಹಳ ಇಷ್ಟವಾಗುವಂಥ ಅನೇಕ ಅಂಶ ಈ ಸಿನಿಮಾದಲ್ಲಿವೆ. 
2012ರಲ್ಲಿ ಸುದೀಪ್ ಮತ್ತು ರಾಗಿಣಿ ದ್ವಿವೇದಿ ಅಭಿನಯದ ಕೆಂಪೇಗೌಡ ಸಿನಿಮಾ ರಿಲೀಸ್ ಆಗಿತ್ತು, ಗೋವಿಂದಾಯ ನಮಃ ಸಿನಿಮಾ ನಾಯಕ ನಟ ಕೋಮಲ್ ಕೆಂಪೇಗೌಡ-2 ಸಿನಿಮಾದಲ್ಲಿ ನಟಿಯಿಸಿದ್ದಾರೆ. ರಿಷಿಕಾ ಶರ್ಮಾ ಕನ್ನಡದಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT