ಮೇಘನಾ ರಾಜ್ 
ಸಿನಿಮಾ ಸುದ್ದಿ

ನಾನು ನಟಿ, ಗಾಯಕಿ ಮತ್ತು ಈಗ ನಿರ್ಮಾಪಕಿ: ಮೇಘನರಾಜ್

ಮದುವೆಯಾದ ನಂತರ ಕೆಲವು ನಾಯಕಿಯರು ತಮ್ಮ ವೃತ್ತಿ ಜೀವನಕ್ಕೆ ಸ್ಟಾಪ್ ಹಾಕುತ್ತಾರೆ, ಆದರೆ ಮೇಘನರಾಜ್ ನಾಯಕಿ ನಟಿಯಾಗಿ, ಗಾಯಕಿ ಮತ್ತು ಸದ್ಯ ನಿರ್ಮಾಪಕಿಯಾಗುವ ...

ಮದುವೆಯಾದ ನಂತರ ಕೆಲವು ನಾಯಕಿಯರು ತಮ್ಮ ವೃತ್ತಿ ಜೀವನಕ್ಕೆ ಸ್ಟಾಪ್ ಹಾಕುತ್ತಾರೆ, ಆದರೆ ಮೇಘನರಾಜ್ ನಾಯಕಿ ನಟಿಯಾಗಿ, ಗಾಯಕಿ ಮತ್ತು ಸದ್ಯ ನಿರ್ಮಾಪಕಿಯಾಗುವ ನಿಟ್ಟಿನಲ್ಲಿ ಯೋಚಿಸುತ್ತಿದ್ದಾರೆ.
ಪವನ್ ನಿರ್ದೇಶನದ ಪುಟಾಣಿ ಪಂಟರ್ಸ್ ಸಿನಿಮಾಗೆ ನಿರ್ಮಾಪಕಿಯಾಗಲಿದ್ದಾರೆ, ಮಜಾ ಟಾಕೀಸ್ ಮೂಲಕ ಗುರುತಿಸಿಕೊಂಡಿರುವ ಪವನ್ ಚೊಚ್ಚಲ ನಿರ್ದೇಶನ ಮಾಡುತ್ತಿದ್ದಾರೆ, ಇಂದು ಸಿನಿಮಾ ಮುಹೂರ್ತ ಇಂದು ನಡೆಯಲಿದೆ, ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಮತ್ತು ದ್ರುವ ಸರ್ಜಾ ಹಾಜರಿದ್ದರು.
ನಾನು ನಿರ್ಮಾಪಕಿಯಾಗಬೇಕೆಂದು ಕೇವಲ ಒಂದು ರಾತ್ರಿಯಲ್ಲ ನಿರ್ಧಾರವಾಗಿದ್ದಲ್ಲ, ನಾನು ಮದುವೆಯಾದೆ ಎಂಬ ಕಾರಣಕ್ಕೆ ನಾನು ನಿರ್ಮಾಪಕಿಯಾಗುತ್ತಿಲ್ಲ, ನಾನು ಈಗಾಗಲೇ ನಾಯಕಿ ಮತ್ತು ಗಾಯಕಿಯಾಗಿ ಅನುಭವ ಪಡೆದಿದ್ದೇನೆ, ನಿರ್ಮಾಪಕಿಯಾಗಬೇಕೆಂದು ಮುಂದಿನ ಹೆಜ್ಜೆ ಇಡುತ್ತೇನೆ,  ಹೊಸ ಪ್ರತಿಭೆಗಾಗಿ ಹುಡುಕಾಟ ನಡೆಸುತ್ತಿರುವಾಗ ಪವನ್ ಪ್ರಾಜೆಕ್ಟ್ ನನದೆ ಇಷ್ಟವಾಯಿತು, ಇದು ಪೂರ್ತಿ ಮನೋರಂಜನಾತ್ಮಕ ಸಿನಿಮಾವಾಗಿದೆ.
ತಮ್ಮ ಷರತ್ತು ಹಾಗೂ ನಿಬಂಧನೆಗಳ ಬಗ್ಗೆ ಸ್ಪಷ್ಟವಾಗಿದ್ದಾರೆ, ಮಕ್ಕಳ ಸಿನಿಮಾಗೆ ಮಹಿಳೆ ನಿರ್ಮಾಪಕಿಯಾಗಿದ್ದು, ಸಮನಾಂತರ ಸಿನಿಮಾವಾಗುವುದು ಮೇಘನಾಗೆ ಇಷ್ಟವಿಲ್ಲ, ಮೂವರು ಸ್ಲಮ್  ಮಕ್ಕಳ ಕುರಿತ ಕಥೆಯಾಗಿದೆ, 
ಏಪ್ರಿಲ್ 26 ರಿಂದ ಮೇಘನಾ ಸೆಟ್ ಗೆ ಜಾಯಿನ್ ಆಗಲಿದ್ದಾರೆ, ಮೇಘನಾ ಸೃಜನ್ ಲೊಕೇಶ್ ಜೊತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, 
ಮದುವೆಯಾಗಿದ್ದರೂ ಕೂಡ ಮೇಘನಾ ತಮ್ಮ ಅಭಿರುಚಿಗಳಿಂದ ಹಿಂದೆ ಸರಿದಿಲ್ಲ,  ತಮ್ಮ ತಾಯಿ ಮದುವೆಯಾದ ನಂತರ ಚಿತ್ರದಲ್ಲಿ ನಟಿಸುವುದನ್ನು ಬಿಟ್ಟಿಲ್ಲ. ಈಗಲೂ ಕೂಡ ಅವರು ನಟಿಸುತ್ತಿದ್ದಾರೆ, ಹಿರಿಯ ನಟಿಯರಾದ ಭಾರತಿ ಅಮ್ಮ, ಮತ್ತು ಸುಮಲತಾ ಅಮ್ಮ ಕೂಡ ಇಂದಿಗೂ ಸಿನಿಮಾಗಳಲ್ಲಿ ನಟಿಸುವುದನ್ನು ಬಿಟ್ಟಿಲ್ಲ,
ನನ್ನ ಹಿಂದಿನ ಎಲ್ಲಾ ಕಮಿಂಟ್ ಮೆಂಟ್ ಗಳನ್ನು ಪೂರ್ಣಗೊಳಿಸಿದ್ದೇನೆ,ಹೀಗಾಗಿ ನಾನು ಮುಂದಿನ ಪ್ರಾಜೆಕ್ಟ್ ಬಗ್ಗೆ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT