ಕಾರ್ಮೋಡ ಸರಿದು ಚಿತ್ರತಂಡ 
ಸಿನಿಮಾ ಸುದ್ದಿ

ಕುದುರೆಮುಖದ ಸುಂದರ ಪರಿಸರದಲ್ಲಿ 'ಕಾರ್ಮೋಡ ಸರಿದು' ಸಿನಿಮಾ ಚಿತ್ರೀಕರಣ

ಕಾರ್ಮೋಡ ಸರಿದು ಎಂಬ ಸಿನಿಮಾ ಮೂಲಕ ಉದಯ್ ಕುಮಾರ್ ಪಿಎಸ್ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾಗೂ ಕುದುರೆಮುಖಕ್ಕೂ ಬಿಡಿಸಲಾಗದ ನಂಟಿದೆ...

ಕಾರ್ಮೋಡ ಸರಿದು ಎಂಬ ಸಿನಿಮಾ ಮೂಲಕ ಉದಯ್ ಕುಮಾರ್  ಪಿಎಸ್ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾಗೂ ಕುದುರೆಮುಖಕ್ಕೂ ಬಿಡಿಸಲಾಗದ ನಂಟಿದೆ.
ಮಂಜು ರಾಮಣ್ಣ ಮತ್ತು ನಾನು ಕುದುರೆ ಮುಖದಲ್ಲೇ ಹುಟ್ಟಿ ಬೆಳೆದದ್ದದು, ಹುಡುಗನೊಬ್ಬನ ಬದುಕಿನಲ್ಲಿ ಕಾರ್ಮೋಡ ಕವಿದಾಗ ಅದನ್ನು ಹೇಗೆ ತಿಳಿಗೊಳಿಸುತ್ತಾನೆ ಎನ್ನುವುದೇ ಸಿನಿಮಾ ಕಥೆ ಎಂದು ನಿರ್ದೇಶಕ ಉದಯ್‌ ಕುಮಾರ್‌ ಹೇಳಿದ್ದಾರೆ. 
'ಹದಿನೆಂಟು ವರ್ಷಗಳ ಕೆಳಗೆ ನಾನು ಕುದುರೆಮುಖ ಬೆಟ್ಟಕ್ಕೆ ಹೋಗಿದ್ದೆ. ಅಲ್ಲಿನ ವಾತಾವರಣ ಕಂಡು ಇಲ್ಲೊಂದು ಸಿನಿಮಾ ಮಾಡಬೇಕು ಅನಿಸಿತು. ಆ ಪರಿಸರಕ್ಕೆ ಹೊಂದುವಂಥ ಕಥೆ ಹೆಣೆಬೇಕು ಎಂಬ ಉತ್ಸಾಹ ಬಂತು. ತುಂಬಾ ವರ್ಷಗಳ ನಂತರ ಕಾರ್ಮೋಡ ಸರಿದಾಗ ಕಥೆ ಸಿಕ್ಕಿತು. ನನ್ನ ಮೊದಲ ಚಿತ್ರಕ್ಕೆ ಇಂಥದ್ದೊಂದು ಕಥೆ ಸಿಕ್ಕಿದ್ದು, ಖುಷಿ ಕೊಟ್ಟಿದೆ' ಎಂದು ನಿರ್ದೇಶಕ ಹೇಳಿದ್ದಾರೆ.. 
ಈ ಸಿನಿಮಾಗೆ ಅದ್ವಿತಿ ನಾಯಕಿ. ಮಲೆನಾಡಿನಲ್ಲಿ ವೈದ್ಯಯಾಗಿ ಸೇವೆ ಸಲ್ಲಿಸುವ ಪಾತ್ರದಲ್ಲಿ ಇವರು ನಟಿಸಿದ್ದಾರೆ. 
ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ ಸಿನಿಮಾದ ಎಲ್ಲಾ ಹಾಡುಗಳು ನನಗೆ ಇಷ್ಟ. ಅದರಲ್ಲೂ 'ಕಾರ್ಮೋಡ ಸರಿದು..' ಹಾಡು ನನ್ನ ಸದಾ ಕಾಲದ ಫೇವರಿಟ್ ಹಾಡು. ಇದೀಗ ಅದೇ ಹಾಡಿನ ಶೀರ್ಷಿಕೆಯ ಸಿನಿಮಾದಲ್ಲಿ ನಟಿಸುತ್ತಿರುವುದು ನನಗೆ ತುಂಬಾ ಖುಷಿ ತಂದಿದೆ" ಎಂದಿದ್ದಾರೆ. 
"ಕುದುರೆಮುಖ ಸೇರಿದಂತೆ ಮಲೆನಾಡ ಹಲವು ಕಡೆ ಸಿನಿಮಾದ ಬಹುತೇಕ ಚಿತ್ರೀಕರಣವಾಗಿದೆ. ಇನ್ನೂ ಈ ಚಿತ್ರದಲ್ಲಿ ಮಳೆಯೂ ಪ್ರಧಾನವಾಗಿದ್ದು, ಆಗಸ್ಟ್ ತಿಂಗಳ ಮಲೆನಾಡಿನ ಭಾರಿ ಮಳೆಯಲ್ಲಿಯೇ ಶೂಟಿಂಗ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT