ಇಂಗ್ಲೀಷ್ ನಲ್ಲಿಯೂ 'ಗಿರ್ಮಿಟ್' ಕೊಡಲು ತಯಾರಾದ ರವಿ ಬಸ್ರೂರ್ 
ಸಿನಿಮಾ ಸುದ್ದಿ

ಇಂಗ್ಲೀಷ್ ನಲ್ಲೂ 'ಗಿರ್ಮಿಟ್' ಕೊಡಲು ರವಿ ಬಸ್ರೂರ್ ತಯಾರು!

ಇತ್ತೀಚೆಗೆ ಸ್ಯಾಂಡಲ್ ವುಡ್ ಚಿತ್ರಗಳು ನಾಲ್ಕೈದು ಭಾಷೆಗಳಲ್ಲಿ ತೆರೆ ಕಾಣುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ. ಇದೀಗ ರವಿ ಬಸ್ರೂರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ....

ಇತ್ತೀಚೆಗೆ ಸ್ಯಾಂಡಲ್ ವುಡ್ ಚಿತ್ರಗಳು ನಾಲ್ಕೈದು ಭಾಷೆಗಳಲ್ಲಿ ತೆರೆ ಕಾಣುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ. ಇದೀಗ ರವಿ ಬಸ್ರೂರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರ ಮುಂದಿನ ಚಿತ್ರ "ಗಿರ್ಮಿಟ್" ಚಿತ್ರವನ್ನು  ಹಿಂದಿ ಮತ್ತು ತೆಲುಗಿನಲ್ಲಿ  ಬಿಡುಗಡೆ ಮಾಡುತ್ತಿರುವುದರೊಡನೆ ತಮಿಳು, ಮಲಯಾಳಂ ಹಾಗೂ ಇಂಗ್ಲಿಷ್  ಭಾಷೆಗಳಲ್ಲಿ ಸಹ ತೆರೆ ಕಾಣುತ್ತಿದೆ.
ನಿರ್ದೇಶಕರು ಇದಾಗಲೇ ಇಂಗ್ಲಿಷ್ ನಲ್ಲಿ ಡಬ್ಬಿಂಗ್ ಪ್ರಾರಂಭಿಸಿದ್ದು  ಇದಕ್ಕಾಗಿ ಅವರು ಹೊಸ ತಂಡವನ್ನು ರಚಿಸಿದ್ದಾರೆ.ಚಿತ್ರದಲ್ಲಿನ ಹಾಡನ್ನು ಇಂಗ್ಲೀಷ್ ನಲ್ಲಿ ಹಾಡುವುದಕ್ಕಾಗಿ ಸಹ ರವಿ ಬಸ್ರೂರ್ ಒಂದು ಹೊಸ ತಂಡವನ್ನು ರಚನೆ ಮಾಡಿದ್ದಾರೆ.ಅಲ್ಲದೆ ವಿವಿಧ ಹಾಡುಗಳಿಗೆ ಅವರೂ ಧ್ವನಿಯಾಗಿದ್ದಾರೆ.
ಕಮರ್ಷಿಯಲ್ ಎಂಟರ್‌ಟೈನರ್‌ ಚಿತ್ರವಾಗಿರುವ "ಗಿರ್ಮಿಟ್" ಸುಮಾರು 280 ಬಾಲ ಕಲಾವಿದರು ಮತ್ತು ಕಲಾವಿದರಾದ  ಅಶ್ಲೇಶ್ ರಾಜ್ ಮತ್ತು ಶ್ಲಾಘಾ ಸಾಲಿಗ್ರಾಮ ಅವರನ್ನೊಳಗೊಂಡಿದೆ.ಓಂಕರ್ ಮೂವೀಸ್ ಮತ್ತು ರವಿ ಬಸ್ರೂರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರವನ್ನು ಎನ್ ಎಸ್ ರಾಜ್‌ಕುಮಾರ್ ನಿರ್ವಹಿಸಿದ್ದಾರೆ. ರವಿ ಬಸ್ರೂರ್ ಸ್ವತಃ ಸಂಗೀತ, ಧ್ವನಿ ವಿನ್ಯಾಸ ಮತ್ತು ಚಿತ್ರಕಥೆಯನ್ನು ನಿರ್ವಹಿಸಿದರೆ, ಅವರ ಸಹೋದರ ಸಚಿನ್ ಬಸ್ರೂರ್ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. 
ಇನ್ನು ಚಿತ್ರದ ಪ್ರಮುಖ ಪಾತ್ರಗಳಿಗೆ ಯಶ್, ರಾಧಿಕಾ ಪಂಡಿತ್ ಧ್ವನಿ ನೀಡಿದ್ದಾರೆ. ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಹಾಡಿದ್ದು ತಾರಾ, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ರಂಗಾಯಣ ರಘು, ಸಾಧು ಕೋಕಿಲಾ, ಪೆಟ್ರೋಲ್ ಪ್ರಸನ್ನ, ಅನುಪಮ ಗೌಡ, ಅನುರಾಧಾ ಭಟ್, ಮತ್ತು ಶಿವರಾಜ್ ಕೆ.ಆರ್ ಮೊದಲಾದವರು ಚಿತ್ರದಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT