ಇಶಾನ್ 'ರೆಮೋ'ಗಾಗಿ ಕೋಟಿ ವೆಚ್ಚದಲ್ಲಿ ತಯಾರಾಗ್ತಿದೆ ಐಷಾರಾಮಿ ಕಛೇರಿ 
ಸಿನಿಮಾ ಸುದ್ದಿ

ಇಶಾನ್ 'ರೆಮೋ'ಗಾಗಿ ಕೋಟಿ ವೆಚ್ಚದಲ್ಲಿ ತಯಾರಾಗ್ತಿದೆ ಐಷಾರಾಮಿ ಕಛೇರಿ

ಇಶಾನ್ ಅಭಿನಯದ ಪವನ್ ಒಡೆಯರ್ ನಿರ್ದೇಶನದಲ್ಲಿನ ಮುಂದಿನ ಚಿತ್ರಕ್ಕಾಗಿ ಗಾರ್ಡನ್ ಸಿಟಿಯ ಹೃದಯ ಭಾಗದಲ್ಲಿ ಒಂದು ಕೋಟಿ ರು. ವೆಚ್ಚದಲ್ಲಿ ಗಾಜುಇನಂತಹಾ ರಚನೆಯಿಂದ ತಾತ್ಕಾಲಿಕ ಕಛೇರಿಯೊಂದನ್ನು ರಚಿಸಲಾಗುತ್ತಿದೆ.

ಇಶಾನ್ ಅಭಿನಯದ ಪವನ್ ಒಡೆಯರ್ ನಿರ್ದೇಶನದಲ್ಲಿನ ಮುಂದಿನ ಚಿತ್ರಕ್ಕಾಗಿ ಗಾರ್ಡನ್ ಸಿಟಿಯ ಹೃದಯ ಭಾಗದಲ್ಲಿ ಒಂದು ಕೋಟಿ ರು. ವೆಚ್ಚದಲ್ಲಿ ಗಾಜುಇನಂತಹಾ ರಚನೆಯಿಂದ ತಾತ್ಕಾಲಿಕ ಕಛೇರಿಯೊಂದನ್ನು ರಚಿಸಲಾಗುತ್ತಿದೆ.

ಇಶಾನ್ ಮುಂದಿನ ಚಿತ್ರ "ರೆಮೋ" ಗಾಗಿ ಈ ಕಛೇರಿ ಸಿದ್ದವಾಗುತ್ತಿದ್ದು ಚಿತ್ರನಿರ್ಮಾಪಕರು ಪತ್ರಿಕೆಯೊಡನೆ ಕೆಲವು ಸ್ಟಿಲ್ ಗಳನ್ನು ಹಂಚಿಕೊಂಡಿದ್ದಾರೆ.ಕುತೂಹಲಕರ ಎಂದರೆ ಇಡೀ ಸೆಟ್ ನಾಯಕನ ಪಾತ್ರಕ್ಕೆ ಸಂಬಂಧಿಸಿದ್ದಾಗಿದ್ದು ಆತನ ಪಾತ್ರ ಸಂಪೂರ್ಣ ಪಾರದರ್ಶಕವಾಗಿರಲಿದೆ.

ಇದರಂತೆ 360 ಡಿಗ್ರಿ ಜಾಗದಲ್ಲಿ ಯಾವುದೇ ಪರದೆ ಅಳವಡಿಸದೆ ಟಾಕಿ ಭಾಗಗಳ ಪ್ರಮುಖ ಭಾಗವನ್ನು ಈ ಐಷಾರಾಮಿ ರಚನೆಯಲ್ಲಿ ಚಿತ್ರೀಕರಿಸಲಾಗುತ್ತದೆ. ತಂಡದ ಸದಸ್ಯರು ಪ್ರಸ್ತುತ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಸಿಂಗಾಪುರಕ್ಕೆ ತೆರಳಲಿದ್ದಾರೆ. ಬಳಿಕದ ಕೆಲ ದಿನಗಳ ಕಾಲ ಹೈದರಾಬಾದ್ ನಲ್ಲಿ ಚಿಒತ್ರೀಕರಣ ನಡೆಯಲಿದೆ.

"ರೆಮೋ" ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಶೇಕಡಾ 25 ರಷ್ಟು ಚಿತ್ರೀಕರಣ ಪೂರ್ಣವಾಗಿದೆ. ಡಿಸೆಂಬರ್ ನಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

"ರೆಮೋ" ಮೂಲಕ ಪೂರ್ಣ ಪ್ರಮಾಣದ ರೊಮ್ಯಾಂಟಿಕ್ ಡ್ರಾಮಾ ನಿರ್ದೇಶಕರಾಗುತ್ತಿರುವ ಪವನ್ ಒಡೆಯರ್ ತಮ್ಮ  ಹಿಂದಿನ ಸಂದರ್ಶನವೊಂದರಲ್ಲಿ ಇದು ಇಂದಿನ ಯುವಕರನ್ನು ಆಕರ್ಷಿಸಲಿದೆ ಎಂದಿದ್ದರು.ಅಲ್ಲದೆ ಮತ್ತು ಇದು ಸಾಮಾನ್ಯ ಪ್ರೇಮಕಥೆಯಾಗುವುದಿಲ್ಲ. ಈ ಚಿತ್ರದಲ್ಲಿ ಇಶಾನ್ ಇಮೇಜ್ ಮೇಕ್ ಓವರ್ ಆಗಿರಲಿದೆ ಎಂದು ಅಭಿಪ್ರಾಯಪಟ್ಟಿದ್ದರು.

ಚಿತ್ರವನ್ನು ನಟನ ಸಹೋದರ ಸಿ.ಆರ್.ಮೋನೊಹರ್ ನಿರ್ಮಿಸಿದ್ದು, ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಚಿತ್ರಕ್ಕೆ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಸಂಗೀತ ಇದೆ. ಈ ಮೂಲನಿರ್ದೇಶಕ ಪವನ್ ಒಡೆಯರ್ ಹಾಗೂ ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT