ಕಿಚ್ಚ ಸುದೀಪ್ 
ಸಿನಿಮಾ ಸುದ್ದಿ

ದಬಾಂಗ್ 3 ಆಯ್ತು, ಇದೀಗ ತಮಿಳು ಚಿತ್ರದಲ್ಲೂ ಕಿಚ್ಚ ಸುದೀಪ್ ವಿಲನ್!

ಇತ್ತೀಚಿಗೆ  ತೆರೆಕಂಡಿರುವ  ಬಾಲಿವುಡ್   ಸೂಪರ್ ಸ್ಟಾರ್    ಸಲ್ಮಾನ್ ಖಾನ್ ಅವರ  ದಬಾಂಗ್ -೩ ಚಿತ್ರದಲ್ಲಿ    ಚಂದನವನ ನಾಯಕ ಕಿಚ್ಚ ಸುದೀಪ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಚೆನ್ನೈ: ಇತ್ತೀಚಿಗೆ  ತೆರೆಕಂಡಿರುವ  ಬಾಲಿವುಡ್   ಸೂಪರ್ ಸ್ಟಾರ್    ಸಲ್ಮಾನ್ ಖಾನ್ ಅವರ  ದಬಾಂಗ್ -೩ ಚಿತ್ರದಲ್ಲಿ    ಚಂದನವನ ನಾಯಕ ಕಿಚ್ಚ ಸುದೀಪ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದ  ನಟನೆಗೆ ಸುದೀಪ್  ಎಲ್ಲಾ  ವರ್ಗದ ಪ್ರೇಕ್ಷಕರಿಂದಲೂ   ಪ್ರಶಂಸೆ ಪಡೆದುಕೊಂಡಿದ್ದಾರೆ.  ಆದರೆ, ಸುದೀಪ್ ಮತ್ತೊಮ್ಮೆ ಖಳನಾಯಕನಾಗಿ ನಟಿಸಲಿದ್ದಾರೆ.   ಆದರೆ ಈ ಬಾರಿ ತಮಿಳು ಚಿತ್ರದಲ್ಲಿ  ಖಳನಾಯಕರಾಗಿ  ಕಾಣಿಸಿಕೊಳ್ಳಲಿದ್ದಾರೆ. 

ಶಿಂಬು ನಾಯಕರಾಗಿ ಮಾನಡು ಎಂಬ ಚಿತ್ರ  ನಿರ್ಮಿಸುತ್ತಿದ್ದೇನೆ ಎಂದು ವೆಂಕಟ್ ಪ್ರಭು ೨೦೧೮ ರಲ್ಲಿ ಹೇಳಿದ್ದರು. ಆದರೆ, ಚಿತ್ರವನ್ನು ನಿರ್ಮಿಸುತ್ತಿದ್ದ  ಸುರೇಶ್ ಕಾಮಟ್ಜಿ  ಹಾಗೂ  ಶಿಂಬು ನಡುವಿನ  ಮನಸ್ತಾಪದಿಂದಾಗಿ ಚಿತ್ರ ನಿರ್ಮಾಣ ಸ್ಥಗಿತಗೊಂಡಿತ್ತು.    ನಾಯಕ ಶಿಂಬು ತಂದೆ,   ಪ್ರಸಿದ್ದ  ತಮಿಳು ನಿರ್ದೇಶಕ ಟಿ. ರಾಜೇಂದರ್  ಮಧ್ಯ ಪ್ರವೇಶದಿಂದ  ಮಾನಡು ಚಿತ್ರ  ಚಿತ್ರೀಕರಣ ಮುಂದುವರಿಸಿರುವುದಾಗಿ  ವೆಂಕಟ್ ಪ್ರಭು  ತಿಳಿಸಿದ್ದಾರೆ.

ಚಿತ್ರದ  ಚಿತ್ರೀಕರಣ ಜನವರಿಯಲ್ಲಿ ಪ್ರಾರಂಭವಾಗಲಿದೆ ಎಂದು ನಿರ್ಮಾಪಕ ಸುರೇಶ್ ಕಾಮತ್ಜಿ ಹೇಳಿದ್ದಾರೆ. ದಬಾಂಗ್ -೩ ಶೂಟಿಂಗ್ ಸಮಯದಲ್ಲಿಯೇ  ಸುದೀಪ್    ಆವರನ್ನು ಖಳನಾಯಕನಾಗಿ ನಟಿಸಲು ಕೇಳಲಾಯಿತು ಎಂದು ನಿರ್ಮಾಪಕ ಸುರೇಶ್ ಕಾಮತ್ಜಿ  ತಿಳಿಸಿದ್ದು, ಕಥೆ ಕೇಳಿದ ಕೂಡಲೇ ಸುದೀಪ್ ಈ ಚಿತ್ರದಲ್ಲಿ ಖಳನಾಯಕನಾಗಿ ನಟಿಸಲು ಒಪ್ಪಿಕೊಂಡಿದ್ದರು. ಉಳಿದ ಪಾತ್ರವರ್ಗವನ್ನು ಶೀಘ್ರದಲ್ಲೇ  ಪ್ರಕಟಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ. ರಾಜಮೌಳಿ ನಿರ್ದೇಶನದ ಈಗಾ ಚಿತ್ರದಲ್ಲಿ ಸುದೀಪ್ ಖಳನಾಯಕನಾಗಿ ನಟಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT