ನಟ ಸಾರ್ವಭೌಮ ಚಿತ್ರಕ್ಕಾಗಿ ಒಬ್ಬ ಅಭಿಮನಿಯಿಂದ ಇಡೀ ಥಿಯೇಟರ್ ಬುಕ್! 
ಸಿನಿಮಾ ಸುದ್ದಿ

ನಟ ಸಾರ್ವಭೌಮ ಚಿತ್ರಕ್ಕಾಗಿ ಒಬ್ಬ ಅಭಿಮಾನಿಯಿಂದ ಇಡೀ ಥಿಯೇಟರ್ ಬುಕ್!

ನಟ ಸಾರ್ವಭೌಮ ಚಿತ್ರಕ್ಕಾಗಿ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಕಾಯುತ್ತಿದ್ದು, ಅಭಿಮಾನಿಯೋರ್ವ ಬೆಳಿಗ್ಗೆ 4 ಗಂಟೆಯ ಶೋಗೆ ಇಡಿ ಥಿಯೇಟರ್ ನ್ನೇ ಬುಕ್ ಮಾಡಿದ್ದಾನೆ.

ನಟ ಸಾರ್ವಭೌಮ ಚಿತ್ರಕ್ಕಾಗಿ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಕಾಯುತ್ತಿದ್ದು,  ಅಭಿಮಾನಿಯೋರ್ವ ಬೆಳಿಗ್ಗೆ 4 ಗಂಟೆಯ ಶೋಗೆ ಇಡಿ ಥಿಯೇಟರ್ ನ್ನೇ ಬುಕ್ ಮಾಡಿದ್ದಾನೆ. ಚಿತ್ರ ಮಧ್ಯರಾತ್ರಿಯ ಶೋ ಅನ್ನೂ ಹೊಂದಿರಲಿದ್ದು, ಈ ನಿಟ್ಟಿನಲ್ಲಿ ಚಿತ್ರತಂಡ ಕಮಿಷನರ್ ಗಮನಕ್ಕೂ ತಂದಿದೆ. 
ಈ ನಡುವೆ ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಚಿತ್ರದ ಬಗ್ಗೆ ಮಾತನಾಡಿದ್ದು, 10 ವರ್ಷಗಳ ನಂತರ ಪುನೀತ್ ರಾಜ್ ಕುಮಾರ್ ಗೆ ಸಿನಿಮಾ ನಿರ್ಮಾಣ ಮಾಡಿರುವುದರ ಬಗ್ಗೆ ಮಾತನಾಡಿದ್ದಾರೆ. " ನನ್ನೊಂದಿಗೆ ಜೊತೆಗೂಡಿ ಸಿನಿಮಾ ಮಾಡಲು 10 ವರ್ಷ ಏಕೆ ಬೆಕಾಯಿತು ಎಂಬುದನ್ನು ನೀವು ಪುನೀತ್ ಅವರನ್ನೆ ಕೇಳಬೇಕೆಂದು ಹೇಳಿರುವ ರಾಕ್ ಲೈನ್ ವೆಂಕಟೇಶ್, ಸ್ಟಾರ್ ಗಳೊಂದಿಗೆ ಕೆಲಸ ಮಾಡುವುದಕ್ಕೆ ಚಿತ್ರಕಥೆ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಪುನೀತ್ ನಾನು ಸಿನಿಮಾ ಮಾಡುವುದಕ್ಕೆ ಬಹುಶಃ ಅಂತಹದ್ದೊಂದು ಸ್ಕ್ರಿಪ್ಟ್ ಈ ವರೆಗೂ ಸಿಕ್ಕಿರಲಿಲ್ಲ ಎನ್ನುತ್ತಾರೆ.
ಪುನೀತ್ ಪ್ರತಿ ಸಿನಿಮಾದಲ್ಲೂ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನಟ ಸಾರ್ವಭೌಮ ಚಿತ್ರದಲ್ಲಿ ಪುನೀತ್ ಹಿಂದೆಂದೂ ನಟಿಸಿರದ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಿರ್ವಹಣೆ ಮಾಡಿರುವ ಪಾತ್ರದ ಮೇಲೆ ’ಆತ್ಮ’ ಬರಲಿದೆ ಎಂದು ರಾಕ್ ಲೈನ್ ಹೇಳಿದ್ದಾರೆ. 
ನಟ ಸಾರ್ವಭೌಮ ವಿಶ್ವಾದ್ಯಂತ ಏಕಕಾಲಕ್ಕೆ ಬಿಡುಗಡೆ 
ಫೆ.7 ರಂದು ಬಿಡುಗಡೆಯಾಗಲಿರುವ ಪುನೀತ್ ರಾಜ್ ಕುಮಾರ್ ನಟನೆಯ ನಟ ಸಾರ್ವಭೌಮ ಚಿತ್ರ, ವಿದೇಶಗಳಲ್ಲಿಯೂ ಬಿಡುಗಡೆಯಾಗುತ್ತಿದೆ. ವಿದೇಶಗಳಲ್ಲಿ ಚಿತ್ರ ಬಿಡುಗಡೆ ಜವಾಬ್ದಾರಿಯನ್ನು ಮೂವಿ ಮಾರ್ಟ್ ಕೈಗೆತ್ತಿಕೊಂಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT