ರಾಘವೇಂದ್ರ ರಾಜ್ ಕುಮಾರ್ ಮತ್ತು ಮಂಗಳ 
ಸಿನಿಮಾ ಸುದ್ದಿ

'ಅಮ್ಮನ ಮನೆ' ಟೀಸರ್ ನಲ್ಲಿ ಪತ್ನಿ ಕಾಲಿಗೆರಗಿದ ರಾಘಣ್ಣ

"ಅಮ್ಮನ ಮನೆ' ಚಿತ್ರ ಟೀಸರ್‌ ಬಿಡುಗಡೆ ಕಾರ್ಯಕ್ರಮ ನಿನ್ನೆ ಬೆಂಗಳೂರಿನಲ್ಲಿ ನಡೆಯಿತು. ಚಿತ್ರದ ...

"ಅಮ್ಮನ ಮನೆ' ಚಿತ್ರ ಟೀಸರ್‌ ಬಿಡುಗಡೆ ಕಾರ್ಯಕ್ರಮ ನಿನ್ನೆ ಬೆಂಗಳೂರಿನಲ್ಲಿ ನಡೆಯಿತು. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಾಘವೇಂದ್ರ ರಾಜಕುಮಾರ್‌ ಕಾರ್ಯಕ್ರಮದಲ್ಲಿ ತುಂಬಾ ಬಾವುಕರಾಗಿದ್ದರು.

ವೇದಿಕೆಯಲ್ಲಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ತಮ್ಮ ಅತ್ತೆ ನಾಗಮ್ಮ, ಪತ್ನಿ ಮಂಗಳಾ ಅವರ ಬಗ್ಗೆ ಗುಣಗಾನ ಮಾಡುತ್ತಲೇ ಭಾವುಕರಾದರು. ಈ ವೇಳೆ, ಅತ್ತೆ ನಾಗಮ್ಮನ ಕಾಲಿಗೆ ನಮಸ್ಕರಿಸಿದ ರಾಘಣ್ಣ ನಂತರ ಪತ್ನಿ ಮಂಗಳಾ ಅವರ ಹಣೆಗೊಂದು ಪ್ರೀತಿಯ ಮುತ್ತನಿಟ್ಟು ಅವರ ಕಾಲಿಗೂ ನಮಸ್ಕರಿಸಿದರು.

"ನಾನು ಪತ್ನಿ ಮಂಗಳಾ ಅವರಲ್ಲಿ ನನ್ನ ತಾಯಿಯನ್ನು ನೋಡುತ್ತಿದ್ದೇನೆ. ಅಮ್ಮ ನನ್ನ ಚಿಕ್ಕ ವಯಸ್ಸಿನಲ್ಲಿ ಪಾಲನೆ ಮಾಡಿದರೆ, ಕೆಲ ವರ್ಷಗಳ ಹಿಂದೆ ನಾನು ಅನಾರೋಗ್ಯದಲ್ಲಿದ್ದಾಗ ಪತ್ನಿ ಸಾಕಷ್ಟು ಸಾಥ್‌ ಕೊಟ್ಟರು. ನನ್ನ ಪತ್ನಿ ಮಂಗಳಾ ನನ್ನ ಬದುಕಿನ ಮತ್ತೊಬ್ಬ ತಾಯಿ. ಇನ್ನು, ನನ್ನ ತಂದೆಯ ಸಹೋದರಿ ಅತ್ತೆ ನಾಗಮ್ಮ ಅವರು ಸಹ ತಾಯಿ ಸ್ವರೂಪದಂತೆ ಇದ್ದಾರೆ.

ನಾನು ಹುಟ್ಟಿದ್ದ ಸಂದರ್ಭದಲ್ಲಿ ನನ್ನ ತಾಯಿ ಚಿತ್ರೀಕರಣ ಸೇರಿದಂತೆ ವಜ್ರೇಶ್ವರಿ ಕಂಬೈನ್ಸ್‌ ಸಂಸ್ಥೆಯ ಜವಾಬ್ದಾರಿ ಹೊತ್ತುಕೊಂಡಿದ್ದರು. ಆ ಒತ್ತಡದ ಕೆಲಸಗಳ ಮಧ್ಯೆ ನನ್ನನ್ನು ಸರಿಯಾಗಿ ನೋಡಿಕೊಳ್ಳಲು ಆಗುತ್ತಿರಲಿಲ್ಲ. ಆ ಸಂದರ್ಭದಲ್ಲಿ ನನ್ನ ಅತ್ತೆ ನಾಗಮ್ಮ ಕೂಡ ಅವರ ಮಗಳಿಗೆ ಜನ್ಮ ನೀಡಿದ್ದರು. ಆ ವೇಳೆ ನನಗೂ ಎದೆ ಹಾಲು ಉಣಿಸುವ ಮೂಲಕ ನನ್ನನ್ನು ಸಾಕಿ ಸಲುಹಿದ್ದಾರೆ' ಎಂದು ನೆನಪು ಮೆಲುಕು ಹಾಕುತ್ತಲೇ ಭಾವುಕರಾದರು.

ಅಮ್ಮನ ಮನೆ ಚಿತ್ರ ಗಂಡಸಿನ ಬದುಕಿನಲ್ಲಿ ಬರುವ ಮೂವರು ತಾಯಂದಿರ ಕುರಿತ ಕಥೆ ಹೇಳುತ್ತದೆ. ಹಾಗಾಗಿ, ಅಂದು ವೇದಿಕೆಗೆ ರಾಘವೇಂದ್ರ ರಾಜಕುಮಾರ್‌ ಅವರ ಅತ್ತೆ ನಾಗಮ್ಮ, ಪತ್ನಿ ಮಂಗಳಾ ಹಾಗೂ ಭಾವಿ ಸೊಸೆ ಶ್ರೀದೇವಿ ಅವರನ್ನು ಆಹ್ವಾನಿಸಿ ಅವರ ಮೂಲಕವೇ "ಅಮ್ಮನ ಮನೆ' ಚಿತ್ರದ ಟೀಸರ್‌ ಬಿಡುಗಡೆ ಮಾಡಿಸಲಾಯಿತು.

ನಿಖೀಲ್‌ ಮಂಜು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಚಿತ್ರ ಸೆನ್ಸಾರ್‌ ಆಗಿದ್ದು, ಫೆಬ್ರವರಿ ಮೊದಲ ವಾರದಲ್ಲಿ ರಾಜ್ಯಾದ್ಯಂತ ತೆರೆಗೆ ಬರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT