ಸಿನಿಮಾ ಸುದ್ದಿ

ಸ್ಟಾರ್ ನಟನಾದರೂ, ಪುನೀತ್ ಅತ್ಯಂತ ವಿನೀತ: ಅನುಪಮಾ ಪರಮೇಶ್ವರನ್

Nagaraja AB
ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಈಗಾಗಲೇ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಅನುಪಮ ಪರಮೇಶ್ವರನ್  'ನಟಸಾರ್ವಭೌಮ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ.
ಪವನ್ ಒಡೆಯರ್ ನಿರ್ದೇಶನದಲ್ಲಿ ರಾಕ್ ಲೈನ್ ಪ್ರೋಢಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕಿಯಾಗಿ ಅನುಪಮ ಪರಮೇಶ್ವರನ್ ನಟಿಸಿದ್ದಾರೆ.
ನಟ ಸಾರ್ವಭೌಮ ಚಿತ್ರ ಹಾಗೂ ಚಿತ್ರೀಕರಣದ ಅನುಭವವನ್ನು ದಿ ಸಿಟಿ ಎಕ್ಸ್ ಪ್ರೆಸ್ ಜೊತೆಗೆ ಹಂಚಿಕೊಂಡಿರುವ ಅನುಪಮ ಪರಮೇಶ್ವರನ್, ಪಾತ್ರ ಚಿಕ್ಕದಾದರೂ ತುಂಬಾ ಪರಿಣಾಮ ಬೀರಿದೆ. ಭವಿಷ್ಯ ರೂಪಿಸುವಲ್ಲಿಯೂ ನೆರವಾಗಿದೆ ಎನ್ನುತ್ತಾರೆ.
ಎಲ್ಲಾ ಚಿತ್ರರಂಗದಲ್ಲೂ ಉತ್ತಮವಾಗಿ ಓಪನಿಂಗ್ ಪಡೆದುಕೊಂಡಿದ್ದು, ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದೇನೆ. ಉತ್ತಮ ಕಥೆ ಹಾಗೂ ಸಹ ನಟರೊಂದಿಗೆ ಕೆಲಸ ಮಾಡಿದ್ದೇನೆ.ನಟ ಸಾರ್ವಭೌಮ ಚಿತ್ರದಲ್ಲೂ ಇದೇ ರೀತಿ ಕೆಲಸ ಮಾಡಿರುವುದಾಗಿ ಹೇಳಿದರು.
ನಟಸೌರ್ವಭೌಮ ಚಿತ್ರದಲ್ಲಿ ವಕೀಲೆಯಾಗಿ ಕಾಣಿಸಿಕೊಂಡಿರುವ ಅನುಪಮ ,ಪಾತ್ರ ಕುರಿತು ಹೆಚ್ಚಿನದಾಗಿ ಏನನ್ನೂ ಹೇಳಲಿಲ್ಲ. ಫೆಬ್ರವರಿ 7 ರಂದು ಚಿತ್ರ ಬಿಡುಗಡೆ ನಂತರ ಎಲ್ಲವೂ ಗೊತ್ತಾಗಲಿದೆ ಎಂದರು.
15 ದಿನಗಳ ಕಾಲ  ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ನಾನೇ  ಡಬ್ ಮಾಡಬಹುದಾದ ಎಂದು ನಿರ್ದೇಶಕರನ್ನು ಕೇಳಲಿಲ್ಲ. ಆದರೆ, ಮುಂದಿನ ಬಾರಿ ಕನ್ನಡ ಚಿತ್ರದಲ್ಲಿ ಅವಕಾಶ ದೊರೆತರೆ ತಾವೇ ಪರಿಪೂರ್ಣವಾಗಿ ಧ್ವನಿ ಡಬ್ ಮಾಡುವುದಾಗಿ ಹೇಳಿದರು.
SCROLL FOR NEXT