ನನ್ನ ಕನಸು ನನಸಾಗುತ್ತಿದೆ: 'ಕಿಸ್' ಚಿತ್ರದ ಯುವ ಸಂಗೀತಗಾರ ಆದಿ ಹರಿ 
ಸಿನಿಮಾ ಸುದ್ದಿ

ನನ್ನ ಕನಸು ನನಸಾಗುತ್ತಿದೆ: 'ಕಿಸ್' ಚಿತ್ರದ ಯುವ ಸಂಗೀತಗಾರ ಆದಿ ಹರಿ

ಕನ್ನಡದ "ಕಿಸ್" ಚಿತ್ರ ಹಲವು ಕಾರಣಗಳಿಂದ ವಿಶೇಷವಾಗಿದ್ದು ಯುವ ಸಂಗೀತ ನಿರ್ದೇಶಕ ಆದಿ ಹರಿ ಪಾಲಿಗಂತೂ ಅತ್ಯಂತ ಮಹತ್ವದ ಚಿತ್ರವೆಂಬುದರಲ್ಲಿ ಎರಡು ಮಾತಿಲ್ಲ.

ಬೆಂಗಳೂರು: ಕನ್ನಡದ "ಕಿಸ್" ಚಿತ್ರ ಹಲವು ಕಾರಣಗಳಿಂದ ವಿಶೇಷವಾಗಿದ್ದು ಯುವ ಸಂಗೀತ ನಿರ್ದೇಶಕ ಆದಿ ಹರಿ ಪಾಲಿಗಂತೂ ಅತ್ಯಂತ ಮಹತ್ವದ ಚಿತ್ರವೆಂಬುದರಲ್ಲಿ ಎರಡು ಮಾತಿಲ್ಲ. 18 ವರ್ಷದ ಆದಿ ಅವರನ್ನು ಈ ಚಿತ್ರದ ಮೂಲಕ ಕನ್ನಡ ಸಿನಿ ಪ್ರಪಂಚಕ್ಕೆ ಪರಿಚಯಿಸಲಾಗುತ್ತಿದ್ದು ಇವರ ಹಿನ್ನೆಲೆ ಸಂಗೀತದಲ್ಲಿ ಮೂಡಿ ಬಂದ ಮೊದಲ ಹಾಡು "ನೀನೆ ಮೊದಲು, ನೀನೇ ಕೊನೆ" ಗೆ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ದನಿಯಾಗಿರುವುದು ಗಮನಾರ್ಹ.
 "ನನ್ನ ಮೊದಲ ಚಿತ್ರಕ್ಕೆ ಖ್ಯಾತ ಗಾಯಕಿ ಶ್ರೇಯಾ ಅವರು ಹಾಡಿರುವುದುನನಗೆ ಅತ್ಯಂತ ಖುಷಿ ತಂದಿದೆ. ನನ್ನ ಕನಸು ನನಸಾಗುತ್ತಿದೆ" ಆದಿ ಹೇಳಿದ್ದಾರೆ.
ಇನ್ನು ಆದಿ ಸಂಗೀತಮಯ ಕುಟುಂಬದಿಂದಲೇ ಬಂದವರಾಗಿದ್ದಾರ್ರೆ. ಅವರ ತಂದೆ ವಿ. ಹರಿಕೃಷ್ಣ, ತಾಯಿ ವಾಣಿ ಸಹ ಸಂಗೀತಲೋಕದಲ್ಲಿ ಪ್ರಸಿದ್ದ ಹೆಸರುಳ್ಳವರು. ಇನ್ನು ವಾಣಿ ಕನ್ನಡದ ಹಿರಿಯ ಸಂಗೀತ ಸಂಯೋಜಕ ಜಿಕೆ ವೆಂಕಟೇಶ್ ಅವರ ಮೊಮ್ಮಗಳು ಎಂಬುದೂ ವಿಶೇಷ. "ನನ್ನಎಲ್ಲಾ ಏಳಿಗೆಗೆ ಜಾರಣ ಕಿಸ್ ಚಿತ್ರದ ನಿರ್ದೇಶಕ ಎಪಿ ಅರ್ಜುನ್ ಅವರಾಗಿದ್ದಾರೆ. ಅವರಿಲ್ಲದೆ ಹೋದಲ್ಲಿ ನನಗಿದನ್ನು ಸಾಧಿಸಲು ಆಗುತ್ತಿರಲಿಲ್ಲ" ಆದಿ ಹೇಳಿದ್ದಾರೆ.
10ನೇ ತರಗತಿನಂತರ ಸಂಗೀತ ಕಲಿಯಲು ಪ್ರಾರಂಭಿಸಿದ ಆದಿ ಇದೀಗ  ಸ್ಟೀಫನ್ ಕಾಲೇಜ್ ಆಫ್ ಫಿಲ್ಮ್ ಮ್ಯೂಸಿಕ್ ನಲ್ಲಿ ರವಿ ಕಶ್ಯಪ್ ಹಾಗೂ  ಪ್ರವೀಣ್ ಡತ್ ಸ್ಟೀಫನ್ ಮಾರ್ಗದರ್ಶನದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
"ನಾನು ಸಂಗೀತಗಾರನಾಗಲು ಬಯಸಿದ್ದೆ,. ನನ್ನ ತಂದೆಯು ನಾನು ಪ್ರೋಗ್ರಾಮರ್ ಆಗಲು ಸಲಹೆ ನೀಡಿದ್ದರು.ಇದೀಗ ನಾನು ನನ್ನ ತಂದೆಯಿಂದಲೇ ಮ್ಯೂಸಿಕ್  ಪ್ರೋಗ್ರಾಮಿಂಗ್ಕಲಿಯುತ್ತಿದ್ದೇನೆ" 
"ಒಂದು ದಿನ ಅರ್ಜುನ್ ನಮ್ಮ ಮನೆಗೆ ಬಂದಿದ್ದಾಗ ನನ್ನ ತಂದೆ ಬೇರೊಂದಷ್ಟು ಕೆಲಸಗಳಲ್ಲಿ ನಿರತವಾಗಿದ್ದರು.ಆಗ ನನ್ನ ತಂದೆ ನನಗೆ ಈ ಚಿತ್ರದ ಸ್ಕ್ರಿಪ್ಟ್ ನೊಡಲು ಹೇಳಿದ್ದಾರೆ.ನಾನೇ ಕಂಪೋಸ್ ಮಾಡಲು ಹೇಳಿದ್ದರು.ನಾನು ಹೆಚ್ಚು ಯೋಚಿಸದೆ ಒಪ್ಪಿಕೊಂಡಿದ್ದೆ. ಅದಾಗಿ ಈಗ ಚಿತ್ರದ ಮೊದಲ ಹಾಡನ್ನು ಶ್ರೇಯಾ ಮೇಡಂ ಹಾಡುತ್ತಿದ್ದಾರೆ ಎಂದು ನಂಬಲೇ ಆಗುತ್ತಿಲ್ಲ!" ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT