ರುದ್ರಪ್ರಯಾಗ 
ಸಿನಿಮಾ ಸುದ್ದಿ

ರಿಷಬ್ ಶೆಟ್ಟಿ ಮುಂದಿನ ಚಿತ್ರ 'ರುದ್ರಪ್ರಯಾಗ', ಥ್ರಿಲ್ಲರ್ ಸ್ಟೋರಿ ಪೋಸ್ಟರ್ ರಿವೀಲ್!

ರಿಷಬ್ ಶೆಟ್ಟಿ ಅಭಿನಯದ "ಬೆಲ್ ಬಾತಮ್" ಈ ವರ್ಷದ ಸೂಪರ್ ಹಿಟ್ ಚಿತ್ರದಲ್ಲಿ ಒಂದಾಗಿರುವುದು ತಿಳಿದ ವಿಚಾರ. ಈಗ ರಿಷಬ್ ಶೆಟ್ಟಿ ಮುಂದಿನ ಚಿತ್ರಕ್ಕೆ ಜಯಣ್ಣ ಫಿಲ್ಮ್ಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ

ರಿಷಬ್ ಶೆಟ್ಟಿ ಅಭಿನಯದ "ಬೆಲ್ ಬಾತಮ್" ಈ ವರ್ಷದ ಸೂಪರ್ ಹಿಟ್ ಚಿತ್ರದಲ್ಲಿ ಒಂದಾಗಿರುವುದು ತಿಳಿದ ವಿಚಾರ. ಈಗ ರಿಷಬ್ ಶೆಟ್ಟಿ ಮುಂದಿನ ಚಿತ್ರಕ್ಕೆ ಜಯಣ್ಣ ಫಿಲ್ಮ್ಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.ಇದೀಗ ಚಿತ್ರತಂಡ ಅಧಿಕೃತ ಶೀರ್ಷಿಕೆ ಹಾಗೂ ಪೋಸ್ಟರ್ ಪ್ರಕಟಿಸಿದ್ದು ಇದೊಂದು ಥ್ರಿಲ್ಲರ್ ಚಿತ್ರವಾಗಿರಲಿದೆ.
ಚಿತ್ರಕ್ಕೆ "ರುದ್ರಪ್ರಯಾಗ" ಎಂದು ಹೆಸರಿಟ್ಟಿರುವ ರಿಷಬ್ ಶೆಟ್ಟಿ ಕಥಾಹಂದರ ಅಥವಾ ಪಾತ್ರಗಳ ಬಗ್ಗೆ ಹೆಚ್ಚಿನ ಸುಳಿವು ನೀಡಿಲ್ಲ. ಚಿತ್ರ ಮುಖ್ಯವಾಗಿ ಬೆಳಗಾವಿ, ರುದ್ರಪ್ರಯಾಗದಲ್ಲಿ ಶೂಟ್ ಆಗಿರಲಿದೆ.“ಪ್ರಯಾಗ್ ಎಂದರೆ ಹಿಂದಿಯಲ್ಲಿ ಸಂಗಮ, ಮತ್ತು ಈ ವಿಷಯವು ರುದ್ರಪ್ರಯಾಗಕ್ಕೆ ಸಂಬಂಧಿಸುತ್ತದೆ. ನೀವು ಪೋಸ್ಟರ್ ಅನ್ನು ತಲೆಕೆಳಗು ಂಆಡಿ ನೋಡಿದರೆ ನಿಮಗದರ ಅರಿವಾಗಲಿದೆ"
ಅಲಕ್ ನಂದಾ, ಮಂದಾಕಿನಿ ನದಿಗಳ ಸಂಗಮ ಸ್ಥಳ ರುದ್ರಪ್ರಯಾಗ. ಚಿತ್ರದಲ್ಲಿ ಎರಡು ವಿಭಿನ್ನ ಪಾತ್ರವಿರಲಿದೆ.ಅದರಲ್ಲಿ ಒಂದು ಬಹಳ ಶಾಂತತೆಯಿಂದದ್ದ್ರೆ ಇನ್ನೊಂದು ಅಷ್ಟೇ ರೋಚಕವಾಗಿರಲಿದೆ.ಮುಂದೆ ಆ ಎರಡೂ ನದಿಗಳು ಗಂಗೆಯನ್ನು ಸೇರುತ್ತದೆ. ಹಾಗೆಯೇ ಚಿತ್ರದಲ್ಲಿ ಸಹ ಆ ಎರಡೂ ಪಾತ್ರಗಳು ಒಂದು ಕಡೆ ಸಂಗಮಿಸುತ್ತದೆ. ಪೋಸ್ಟರ್‌ನ ಭಾಗವೊಂದರಲ್ಲಿ  ಭಾರತದ ಧ್ವಜ, ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಹಾಗೂ ಸರೋವರವನ್ನು ತೋರಿಸಿದೆ.ಈ ಎರಡು ಸ್ಥಳಗಳು ನನ್ನ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ”ರಿಷಬ್ ಪ್ರಕಾರ, ರುದ್ರಪ್ರಯಾಗದಲ್ಲಿ ಚಿರತೆಯನ್ನು ಸೇರಿಸುವುದು ಪ್ರೇಕ್ಷಕರಿಗೆ ಆಶ್ಚರ್ಯವನ್ನುಂಟು ಮಾಡುತ್ತದೆ, ಮತ್ತು ಈ ಕುತೂಹಲ ತಣಿಯಲು ಚಿತ್ರ ಬಿಡುಗಡೆಯವರೆಗೆ ಕಾಯಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT