ಸಿನಿಮಾ ಸುದ್ದಿ

ಶ್ರೇಯಸ್ ಮಂಜು ಮುಂದಿನ ಚಿತ್ರಕ್ಕೆ ಖ್ಯಾತ ನಿರ್ದೇಶಕ ವಿಕೆ ಪ್ರಕಾಶ್ ಆ್ಯಕ್ಷನ್ ಕಟ್!

Vishwanath S
ಪಡ್ಡೆ ಹುಲಿ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ಶ್ರೇಯಸ್ ಮಂಜು ಇದೀಗ ಎರಡನೇ ಚಿತ್ರಕ್ಕೆ ರೆಡಿಯಾಗಿದ್ದಾರೆ. ಚಿತ್ರಕ್ಕೆ ವಿಷ್ಣು ಪ್ರಿಯಾ ಎಂದು ಶೀರ್ಷಿಕೆ ಇಡಲಾಗಿದ್ದು ಚಿತ್ರವನ್ನು ಖ್ಯಾತ ನಿರ್ದೇಶಕ ವಿಕೆ ಪ್ರಕಾಶ್ ನಿರ್ದೇಶನ ಮಾಡಲಿದ್ದಾರೆ.
ಖ್ಯಾತ ನಿರ್ಮಾಪಕ ಕೆ ಮಂಜು ಮತ್ತು ಪುತ್ರ ಶ್ರೇಯಸ್ ಮಂಜು ಇಬ್ಬರು ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿದ್ದು ಈ ಹಿನ್ನೆಲೆಯಲ್ಲಿಯೇ ಎರಡನೇ ಚಿತ್ರಕ್ಕೂ ವಿಷ್ಣುವರ್ಧನ್ ಹೆಸರಿನ ಮೊದಲ ಎರಡು ಅಕ್ಷರವನ್ನು ಶೀರ್ಷಿಕೆಯಾಗಿ ಇಡಲಾಗಿದೆ. 
ಚಿತ್ರಕ್ಕೆ ಧಾರವಾಡದ ಸಿಂಧುಶ್ರೀ ಕಥೆ ಬರೆದಿದ್ದಾರೆ. ಅವರ ತಂಡ ಇದೀಗ ಚಿತ್ರಕಥೆ ಮತ್ತು ಸಂಭಾಷಣೆ ಕುರಿತ ಕೆಲಸದಲ್ಲಿ ನಿರತವಾಗಿದೆ. ಇನ್ನು ಆಗಸ್ಟ್ 24ರಂದು ಚಿತ್ರದ ಮಹೂರ್ತ ನೆರವೇರಲಿದೆ. 
SCROLL FOR NEXT