ಪವನ್ ಕುಮಾರ್ 
ಸಿನಿಮಾ ಸುದ್ದಿ

ಬಾಲಿವುಡ್ ಅಂಗಳದಲ್ಲಿ 'ಲೂಸಿಯಾ' ಡೈರೆಕ್ಟರ್, ಹಿಂದಿ ಚಿತ್ರಕ್ಕೆ ಪವನ್ ಕುಮಾರ್ ಆಕ್ಷನ್ ಕಟ್

ದಕ್ಷಿಣ ಭಾರತದ ಅನೇಕ ನಿರ್ದೇಶಕರು, ನಿರ್ಮಾಪಕರು ಬಾಲಿವುಡ್ ಗೆ ಪ್ರವೇಶಿಸಿ ಅಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆಗಿಳಿಯುವುದು ಇತ್ತೀಚೆಗೆ ಸಾಮಾನ್ಯವೆನಿಸಿದೆ. ಇದೀಗ ಇಂತಹಾ ನಿರ್ದೇಶಕರ ಸಾಲಿಗೆ....

ದಕ್ಷಿಣ ಭಾರತದ ಅನೇಕ ನಿರ್ದೇಶಕರು, ನಿರ್ಮಾಪಕರು ಬಾಲಿವುಡ್ ಗೆ ಪ್ರವೇಶಿಸಿ ಅಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆಗಿಳಿಯುವುದು ಇತ್ತೀಚೆಗೆ ಸಾಮಾನ್ಯವೆನಿಸಿದೆ. ಇದೀಗ ಇಂತಹಾ ನಿರ್ದೇಶಕರ ಸಾಲಿಗೆ ಕನ್ನಡ ನಿರ್ದೇಶಕ ಪವನ್ ಕುಮಾರ್. ಸಹ ಸೇರ್ಪಡೆಗೊಂಡಿದ್ದಾರೆ. "ಲೈಫು ಇಷ್ಟೇನೆ" ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದ ನಿರ್ದೇಶಕ "ಲೂಸಿಯಾ" ಮೂಲಕ ಜನಮೆಚ್ಚುಗೆಗೆ ಪಾತ್ರರಾದರು. ಇದೀಗ ಅವರು ಹಿಂದಿ ಚಲನಚಿತ್ರೋದ್ಯಮಕ್ಕೆ ಕಾಲಿಡುತ್ತಿದ್ದಾರೆ.
ಪವನ್ ಅವರ ಕೊನೆಯ ಬಹುಭಾಷಾ ಚಿತ್ರ ಸಮಂತಾ ಅಕ್ಕಿನೇನಿ ಅಭಿನಯದ ತಮಿಳು ಮತ್ತು ತೆಲುಗಿನ "ಯುಟರ್ನ್" ರೀಮೇಕ್ ಆಗಿತ್ತು.  ಚಿತ್ರದ ರಿಮೇಕ್. ಅವತರಣಿಕೆ ಬಳಿಕ ವೆಬ್ ಸರಣಿ ಲೀಲಾ ಮೂಲಕ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ದೇಶನ ಮಾಡಿದ ಅವರು ಈಗ ಹಿಂದಿ ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ.ಇದರ ಬಗೆಗೆ ಪವನ್ ಇಲ್ಲಿವರೆಗೂ ಗುಟ್ಟು ಬಿಟ್ಟುಕೊಟ್ಟಿಲ್ಲ.ಆದರೆ, ನಿರ್ದೇಶಕರು ದೊಡ್ಡ ಪ್ರೊಡಕ್ಷನ್ ಹೌಸ್ ಜೊತೆ  ಸಂಪರ್ಕದಲ್ಲಿದ್ದಾರೆ,  ಬಾಲಿವುಡ್ ನ ದೊಡ್ಡ ನಾಯಕನ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪವನ್ ಪ್ರಸ್ತುತ ಚಿತ್ರಕಥೆಯನ್ನು ಸಿದ್ಧಪಡಿಸುತ್ತಿದ್ದು, ಸೆಪ್ಟೆಂಬರ್‌ನಲ್ಲಿ ನಿರ್ದೇಶಕ ಈ ಸಂಬಂಧ ಅಧಿಕೃತ ಘೋಷಣೆ ಮಾಡಲಿದ್ದಾರೆ.
ಇನ್ನು ನಿರ್ದೇಶಕರ ಯೋಜನೆಯ ತಯಾರಿಯನ್ನು ಕಂಡರೆ ಚಿತ್ರವು ವರ್ಷಾಂತ್ಯದಲ್ಲಿ ಅಥವಾ 2020 ರ ಆರಂಭದಲ್ಲಿ ಸೆಟ್ತೇರಲಿದೆ ಎಂದು ನಿರೀಕ್ಷಿಸಲಾಗಿದೆ.
ನಿರ್ದೇಶಕರು C10H14N2. ಎಂಬ ಹೆಸರಿನ ನಿಕೋಟಿನ್ ನ ರಾಸಾಯನಿಕ ಸೂತ್ರದ ಮೇಲೆ ಚಿತ್ರ ಮಾಡಲು ಬಯಸುತ್ತಿದ್ದಾರೆ. ಇದನ್ನು ಈಗ ಹಿಂದಿಯಲ್ಲಿ ಮಾಡಲಾಗುತ್ತದೆಯೇ ಅಥವಾ ಬೇರೆ ಭಾಷೆಯಲ್ಲಿ ತಯಾರಿಸಲಾಗುತ್ತದೆಯೆ ಎನ್ನುವುದು  ಪ್ರೊಡಕ್ಷನ್ ಹೌಸ್ ಅದನ್ನು ಅಧಿಕೃತಗೊಳಿಸಿದ ನಂತರವೇ ಬಹಿರಂಗವಾಗಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Trump ಭಾಗಿಯಾಗಲಿರುವ ಗಾಜಾ ಶಾಂತಿ ಶೃಂಗಸಭೆಗೆ ಪ್ರಧಾನಿಗೆ ಈಜಿಪ್ಟ್‌ನ ಸಿಸಿ ಆಹ್ವಾನ: US ಅಧ್ಯಕ್ಷರೊಂದಿಗೆ ವೇದಿಕೆ ಹಂಚಿಕೊಳ್ತಾರಾ ಮೋದಿ?

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

Tomahawk Missiles: ಅಮೆರಿಕ ಉಕ್ರೇನ್ ಗೆ 'ಟೊಮಾಹಾಕ್ ಕ್ಷಿಪಣಿ' ನೀಡುವ ಸಾಧ್ಯತೆ, ರಷ್ಯಾದ ಬಿಗ್ ವಾರ್ನಿಂಗ್ ಏನು?

'ಕುವೆಂಪು ನಾಡಕವಿಯಲ್ಲ, ರಾಷ್ಟ್ರಕವಿ': ಬಿ.ವೈ. ವಿಜಯೇಂದ್ರಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು!

SCROLL FOR NEXT