ಸಿನಿಮಾ ಸುದ್ದಿ

ರಾಮನಗರ: ರಸ್ತೆ ಅಪಘಾತದಲ್ಲಿ ಸ್ಯಾಂಡಲ್‌ವುಡ್ ಯುವ ಖಳನಟ ಸಾವು

Shilpa D
ರಾಮನಗರ: ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಯಾಂಡಲ್ ವುಡ್ ಯುವ ಖಳನಟ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಕಗ್ಗಲೀಪುರದಲ್ಲಿ ನಡೆದಿದೆ. 
ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಅಭಿನಯದ ಭಜರಂಗಿ ಸಿನಿಮಾದಲ್ಲಿ ಖಳನಟನಾಗಿ ನಟಿಸಿದ್ದ ಕುಮಾರ್ ಮೃತ ದುರ್ದೈವಿ.
ಕನಕಪುರ ತಾಲೂಕಿನ ನಿವಾಸಿಯಾದ ಕುಮಾರ್, ಗಾಂಧಿ ನಗರದ ಸಮೀಪ ಬೈಕ್‌ನಲ್ಲಿ ತೆರೆಳುತ್ತಿದ್ದ ವೇಳೆ, ಎದುರಿನಿಂದ ಬಂದ ಬುಲೆರೋ ಕಾರು ಡಿಕ್ಕಿಯಾಗಿದ್ದು, ಈ ದುರಂತ ಸಂಭವಿಸಿ, ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SCROLL FOR NEXT