ರಮೇಶ್ ಅರವಿಂದ್ ಅಭಿನಯದ ನೂರನೇ ಸಿನಿಮಾ ಪುಷ್ಪಕ ವಿಮಾನನಕ್ಕೆ ನಿರ್ದೇಶನ ಮಾಡಿ ಹೆಸರುಗಳಿಸಿದವರು ಎಸ್. ರವೀಂದ್ರನಾಥ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲಕ್ಕೆ ಇತ್ತೀಚೆಗಷ್ಟೇ ಬ್ರೇಕ್ ಹಾಕಿದ್ದರು.
ಕಂಟ್ರಿಮೇಡ್ ಚಾರಿ ಎನ್ನುವ ಗ್ಯಾಂಗ್ ಸ್ಟರ್ ಸಿನಿಮಾಗೆ ಅವರು ಚಾಲನೆ ನೀಡಿದ್ದರು. ಇದೀಗ ಆ ಚಿತ್ರದ ಹೀರೋ ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ರಣವಿಕ್ರಮ ಪುಷ್ಪಕ ವಿಮಾನ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ಗಮನಸೆಳೆದಿದ್ದ ನಟ ಶಿವಾಂಕ್ ಕಂಟ್ರಿಮೇಡ್ ಚಾರಿಗೆ ಹೀರೋ ಆಗಿದ್ದಾರೆ.
1996ರಲ್ಲಿ 23-24ರ ಹರೆಯದ ಹುಡುಗರ ಮನಸ್ಥಿತಿ ಹೇಗಿತ್ತು ಎಂಬುದನ್ನು ಶಿವಾಂಕ್ ಪಾತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಿದ್ದಾರಂತೆ ನಿರ್ದೇಶಕರು. ಬದುಕಿನ ಬಗ್ಗೆ ಗಂಭೀರತೆ ಇಲ್ಲದ ಆ ವಯಸ್ಸಿನ ಹುಡುಗರು ಹೇಗೆಲ್ಲ ಇರುತ್ತಾರೆ? ಯಾವುದೆ ಗುರಿ ಇಟ್ಟುಕೊಳ್ಳದೆ ದುಡ್ಡಿಗಾಗಿ ಏನೆಲ್ಲ ಮಾಡುತ್ತಾರೆ ಎಂಬುದನ್ನು ಶಿವಾಂಕ್ ಪಾತ್ರ ಹೇಳಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos