ಚಿರಂತನ್-ಜಗಪತಿ ಬಾಬು 
ಸಿನಿಮಾ ಸುದ್ದಿ

ಮತ್ತೆ ಕನ್ನಡಕ್ಕೆ ತೆಲುಗು ನಟ ಜಗಪತಿ ಬಾಬು?

ಡಿ ಬಾಸ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ತೆಲುಗಿನ ಜಗಪತಿ ಬಾಬು ಅಭಿನಯಿಸುತ್ತಿದ್ದು ಇದೀಗ ವಾರ್ ಅಂಡ್ ಪೀಸ್ ಚಿತ್ರಕ್ಕೆ ಅವರನ್ನು ಕರೆತರಲು ನವ ನಿರ್ದೇಶಕ ಪ್ರಖ್ಯಾತ್ ಗೌಡ ಮುಂದಾಗಿದ್ದಾರೆ.

ಡಿ ಬಾಸ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ತೆಲುಗಿನ ಜಗಪತಿ ಬಾಬು ಅಭಿನಯಿಸುತ್ತಿದ್ದು ಇದೀಗ ವಾರ್ ಅಂಡ್ ಪೀಸ್ ಚಿತ್ರಕ್ಕೆ ಅವರನ್ನು ಕರೆತರಲು ನವ ನಿರ್ದೇಶಕ ಪ್ರಖ್ಯಾತ್ ಗೌಡ ಮುಂದಾಗಿದ್ದಾರೆ.
ವಾರ್ ಅಂಡ್ ಪೀಸ್ ಬಾಕ್ಸಿಂಗ್ ಮತ್ತು ಮಾರ್ಷಲ್ ಆರ್ಟ್ಸ್ ಕುರಿತಾದ ಚಿತ್ರಕಥೆಯನ್ನು ಹೊಂದಿದ್ದು ಈ ಹಿನ್ನೆಲೆಯಲ್ಲಿ ಕೋಚ್ ಪಾತ್ರಕ್ಕೆ ಜಗಪತಿ ಬಾಬುರನ್ನು ಕರೆತರಲು ಚಿತ್ರತಂಡ ನಿರ್ಧರಿಸಿದೆ. 
ಅದಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು ಎರಡನೇ ಹಂತದ ಚಿತ್ರೀಕರಣಕ್ಕೆ ಜಗಪತಿ ಬಾಬುರನ್ನು ಕರೆಸಿ ಅವರಿಂದ ಕೋಚ್ ಪಾತ್ರವನ್ನು ಮಾಡಿಸಬೇಕೆಂಬ ಆಸೆಯನ್ನು ಹೊಂದಿರುವುದಾಗಿ ನಿರ್ದೇಶಕ ಪ್ರಖ್ಯಾತ್ ತಿಳಿಸಿದ್ದಾರೆ.
ಜಗಪತಿ ಬಾಬು ಅವರ ಜೊತೆ ಚಿತ್ರತಂಡ ನಿರಂತರ ಸಂಪರ್ಕದಲ್ಲಿದ್ದಾರೆ. ಇನ್ನು ಈ ಪಾತ್ರಕ್ಕೆ ಜಗಪತಿ ಬಾಬು ಅವರ ಸೂಕ್ತ ಆಯ್ಕೆ ಎಂಬುದು ನಿರ್ದೇಶಕರ ಮಾತು. ವಾರ್ ಅಂಡ್ ಪೀಸ್ ಚಿತ್ರವನ್ನು ಸಂತೋಷ ಕುಮಾರ್ ನಿರ್ಮಿಸುತ್ತಿದ್ದಾರೆ. ನವ ನಟ ಚಿರಂತನ್ ಹಾಗೂ ರಾಣಿ ವಾರದ್ ಮತ್ತು ಅನಘ ನಟಿಯರಾಗಿ ಅಭಿನಯಿಸುತ್ತಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT