ಚಿರಂತನ್-ಜಗಪತಿ ಬಾಬು 
ಸಿನಿಮಾ ಸುದ್ದಿ

ಮತ್ತೆ ಕನ್ನಡಕ್ಕೆ ತೆಲುಗು ನಟ ಜಗಪತಿ ಬಾಬು?

ಡಿ ಬಾಸ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ತೆಲುಗಿನ ಜಗಪತಿ ಬಾಬು ಅಭಿನಯಿಸುತ್ತಿದ್ದು ಇದೀಗ ವಾರ್ ಅಂಡ್ ಪೀಸ್ ಚಿತ್ರಕ್ಕೆ ಅವರನ್ನು ಕರೆತರಲು ನವ ನಿರ್ದೇಶಕ ಪ್ರಖ್ಯಾತ್ ಗೌಡ ಮುಂದಾಗಿದ್ದಾರೆ.

ಡಿ ಬಾಸ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ತೆಲುಗಿನ ಜಗಪತಿ ಬಾಬು ಅಭಿನಯಿಸುತ್ತಿದ್ದು ಇದೀಗ ವಾರ್ ಅಂಡ್ ಪೀಸ್ ಚಿತ್ರಕ್ಕೆ ಅವರನ್ನು ಕರೆತರಲು ನವ ನಿರ್ದೇಶಕ ಪ್ರಖ್ಯಾತ್ ಗೌಡ ಮುಂದಾಗಿದ್ದಾರೆ.
ವಾರ್ ಅಂಡ್ ಪೀಸ್ ಬಾಕ್ಸಿಂಗ್ ಮತ್ತು ಮಾರ್ಷಲ್ ಆರ್ಟ್ಸ್ ಕುರಿತಾದ ಚಿತ್ರಕಥೆಯನ್ನು ಹೊಂದಿದ್ದು ಈ ಹಿನ್ನೆಲೆಯಲ್ಲಿ ಕೋಚ್ ಪಾತ್ರಕ್ಕೆ ಜಗಪತಿ ಬಾಬುರನ್ನು ಕರೆತರಲು ಚಿತ್ರತಂಡ ನಿರ್ಧರಿಸಿದೆ. 
ಅದಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು ಎರಡನೇ ಹಂತದ ಚಿತ್ರೀಕರಣಕ್ಕೆ ಜಗಪತಿ ಬಾಬುರನ್ನು ಕರೆಸಿ ಅವರಿಂದ ಕೋಚ್ ಪಾತ್ರವನ್ನು ಮಾಡಿಸಬೇಕೆಂಬ ಆಸೆಯನ್ನು ಹೊಂದಿರುವುದಾಗಿ ನಿರ್ದೇಶಕ ಪ್ರಖ್ಯಾತ್ ತಿಳಿಸಿದ್ದಾರೆ.
ಜಗಪತಿ ಬಾಬು ಅವರ ಜೊತೆ ಚಿತ್ರತಂಡ ನಿರಂತರ ಸಂಪರ್ಕದಲ್ಲಿದ್ದಾರೆ. ಇನ್ನು ಈ ಪಾತ್ರಕ್ಕೆ ಜಗಪತಿ ಬಾಬು ಅವರ ಸೂಕ್ತ ಆಯ್ಕೆ ಎಂಬುದು ನಿರ್ದೇಶಕರ ಮಾತು. ವಾರ್ ಅಂಡ್ ಪೀಸ್ ಚಿತ್ರವನ್ನು ಸಂತೋಷ ಕುಮಾರ್ ನಿರ್ಮಿಸುತ್ತಿದ್ದಾರೆ. ನವ ನಟ ಚಿರಂತನ್ ಹಾಗೂ ರಾಣಿ ವಾರದ್ ಮತ್ತು ಅನಘ ನಟಿಯರಾಗಿ ಅಭಿನಯಿಸುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT