ಆಕಾಂಕ್ಷಾ ಸಿಂಗ್ 
ಸಿನಿಮಾ ಸುದ್ದಿ

'ಪೈಲ್ವಾನ್' ನಲ್ಲಿ ಮಹಿಳಾ ಖದರ್ ಸಹ ಇದೆ: ಆಕಾಂಕ್ಷಾ ಸಿಂಗ್

ನಿರ್ದೇಶಕ ಕೃಷ್ಣ ಪೈಲ್ವಾನ್ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ, ಇದು ಸುದೀಪ್ ಮತ್ತು ಆಕಂಕ್ಷಾ ಸಿಂಗ್ ಜೊಡಿಯ ಚಿತ್ರವಾಗಿದ್ದು ಆಕಾಂಕ್ಷಾ ಈ ಚಿತ್ರದಲ್ಲಿನ ಅಭಿನಯದ ಕುರಿತಾದ ನನ್ನ ಅನುಭವ....

ಬೆಂಗಳೂರು: ನಿರ್ದೇಶಕ ಕೃಷ್ಣ ಪೈಲ್ವಾನ್ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ, ಇದು ಸುದೀಪ್ ಮತ್ತು ಆಕಂಕ್ಷಾ ಸಿಂಗ್ ಜೊಡಿಯ ಚಿತ್ರವಾಗಿದ್ದು ಆಕಾಂಕ್ಷಾ ಈ ಚಿತ್ರದಲ್ಲಿನ ಅಭಿನಯದ ಕುರಿತಾದ ನನ್ನ ಅನುಭವ ಇದುವರೆಗಿನ ನನ್ನ ಜೀವನದಲ್ಲೇ ವಿಶೇಷವಾಗಿತ್ತು ಎಂದು ಹೇಳಿದ್ದಾರೆ. ಶುಕ್ರವಾರ ಮಹಿಳಾ ದಿನದ ವಿಶೇಷ ಘಳಿಗೆಯಲ್ಲಿ ಅವರು ಚಿತ್ರದಲ್ಲಿನ ನಟನೆ ಕುರಿತು ಸಾಮಾಜಿಕ ತಾಣದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇದೇ ವೇಳೆ ಆಕಾಂಕ್ಷಾ ಅವರ ಈ ಚಿತ್ರದಲ್ಲಿನ ಮೊದಲ ಕೆಲವು ಫೋಟೋಗಳನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು ಅದರಲ್ಲಿ ನಟಿ ಎರಡು ಶೇಡ್ ಗಳಲ್ಲಿರುವುದು ಕಾಣಬಹುದಾಗಿದೆ.
"ಈ ಚಿತ್ರವು ಮಹಿಳೆಯಿಂದ ನಿರ್ದೇಶಿಸಲ್ಪಟ್ಟಿದೆ. ಸ್ವಪ್ನಾ ಕೃಷ್ಣ ಇದರ ಪ್ರಮುಖ ನಿರ್ದೇಶಕಿ, ನಾನಿದರಲ್ಲಿ ನಾಯಕಿಯಾಗಿದ್ದೇನೆ.ಮಹಿಳೆಯರಿಗೆ ಹೆಚ್ಚಿನ ಶಕ್ತಿ,ಇದೆ" ಆಕಾಂಕ್ಷಾ ಕಳೆದ ಮೇ ನಿಂದ ಸುಮಾರು ಒಂಬತ್ತು ತಿಂಗಳಿನಿಂದ ಚಿತ್ರೀಕರಣದಲ್ಲಿದ್ದು ಸೆಟ್ ನಲ್ಲಿ ಅವರೊಬ್ಬರೇ ಮಹಿಳೆಯಾಗಿದ್ದರೆನ್ನುವುದು ವಿಶೇಷ.
"ಸ್ವಪ್ನಾ ಯಾವಾಗಲೂ ಫೋನ್ ಕರೆಯಲ್ಲಿದ್ದ ಕಾರಣ ಸೆಟ್ ನಲ್ಲಿ ನಾನು ಏಕಾಂಗಿ ಎಂದೆನಿಸಿಲ್ಲ.ನಾನು ಎಂದಿಗೂ ಬೇರೆಯವಳೆನಿಸದಂತೆ ಚಿತ್ರತಂಡದ ಎಲ್ಲಾ ಸದಸ್ಯರೂ ನಡೆದುಕೊಂಡಿದ್ದಾರೆ. ನನ್ನ ಮೇಲೆ ವಿಶ್ವಾಸ ತೋರಿದ್ದಾರೆ"
 "ನನ್ನ ಪಾತ್ರಕ್ಕೆ ಸಮರ್ಪಕ  ಪ್ರಾಮುಖ್ಯತೆಯನ್ನು ನಿಡಲಾಗಿದೆ.ನಿರ್ದೇಶಕರು ನನ್ನನ್ನು ಚೆನ್ನಾಗಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇದು ನನ್ನ ಪ್ರತಿಭೆಯನ್ನು ಪ್ರದರ್ಶಿಸಲು ಯಶಸ್ವಿ ವೇದಿಕೆಯಾಗಿದೆ. ಕೃಷ್ಣ ಈ ಚಿತ್ರ ನಿರ್ದೇಶಿಸಿದ್ದು ಇದರಲ್ಲಿ ನಾನು ಕಾಣಿಸಿಕೊಳ್ಳುತ್ತಿರುವುದು ನನ್ನ ಅದೃಷ್ಟ." ಎನ್ನುವ ನಟಿ ಚಿತ್ರದಲ್ಲಿನ ಅವರ ಪಾತ್ರದ ಕುರಿತು ಯಾವ ಗುಟ್ಟನ್ನೂ ಬಿಟ್ಟುಕೊಡಲಿಲ್ಲ.
ಇನ್ನು ಈ ಚಿತ್ರದಲ್ಲಿ ಹಲವಾರು ನಟರು ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುನೀಲ್ ಶೆಟ್ಟಿ ಮತ್ತು ಸುಶಾಂತ್ ಸಿಂಗ್ ಈ ಸಾಲಿನಲ್ಲಿದ್ದಾರೆ. ಅವರು ಕಬೀರ್ಹಾಗೂ ಶರತ್ ಲೋಹಿತಾಶ್ವ ಅವರೊಡನೆ ಕಾಣಿಸಿಕೊಳ್ಳುತ್ತಾರೆ.
ಚಿತ್ರ ಆರ್.ಆರ್.ಆರ್. ಮೋಹನ್  ಪಿಕ್ಚರ್ಸ್ ಅಡಿಯಲ್ಲಿ ತಯಾರಾಗಿದ್ದು ಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಪಂಜಾಬಿ, ಮರಾಠಿ, ಭೋಜಪುರಿ, ಹಾಗೂ ಬಂಗಾಳಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT