ಸಿನಿಮಾ ಸುದ್ದಿ

ಮಂಗಳೂರು: ಕಾರು ಅಪಘಾತ, ಯುವ ತುಳು ಚಿತ್ರ ನಿರ್ದೇಶಕ ಮೃತ್ಯು

Raghavendra Adiga
ಮಂಗಳೂರು: ಮರಕ್ಕೆ ಕಾರು ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಯುವ ತುಳು ಚಿತ್ರ ನಿರ್ದೇಶಕ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಶಿರ್ತಾಡಿಯಲ್ಲಿ ನಡೆದಿದೆ.
ತುಳು ಚಿತ್ರ ನಿರ್ದೇಶಕ ಹ್ಯಾರಿಸ್ ಹೌದಾಲ್(30) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಹ್ಯಾರೀಸ್ ಮೂಡಬಿದಿರೆಯಿಂದ ಶಿರ್ಕಾಡಿ ಕಡೆ ಓಮಿನಿ ಕಾರಿನಲ್ಲಿ ತೆರಳುವಾಗ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾಗಿದೆ. ಹ್ಯಾರೀಸ್ ಸ್ವತಃ ಕಾರು ಚಲಾಯಿಸುತ್ತಿದ್ದು ಅವರು ನಿದ್ರೆ ಮಂಪರಿನಲ್ಲಿದ್ದ ಕಾರಣ ಅಪಘಾತವಾಗಿದೆ ಎಂದು ಹೇಳಲಾಗಿದೆ,
ಅಪಘಾತದ ತೀವ್ರತೆಗೆ ಹ್ಯಾರೀಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 
ಮೃತ ಹ್ಯಾರೀಸ್ ಕಳೆದ ಹದಿನೈದು ದಿನಗಳಿಂದ ತುಳು ಚಿತ್ರ "ಆಟಿಡೊಂಜಿ ದಿನ ತುಳು" ನಿರ್ದೇಶನದಲ್ಲಿ ತೊಡಗಿದ್ದರು. ಮೂಡಬಿದಿರೆ ಸುತ್ತ ಮುತ್ತ ಚಿತ್ರದ ಚಿತ್ರೀಕರಣ ಸಾಗಿತ್ತು. 
ಘಟನೆ ಸಂಬಂಧ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SCROLL FOR NEXT