ಸಿನಿಮಾ ಸುದ್ದಿ

ಯೋಗರಾಜ್ ಭಟ್ ಅವರಂಥ ನಿರ್ದೇಶಕರ ಬಳಿ ಕೆಲಸ ಮಾಡುವುದು ಸುದೈವ; ಸೋನಾಲ್ ಮಾಂಟೇರಿಯಾ

Sumana Upadhyaya
ಪಂಚತಂತ್ರ ಸಿನಿಮಾ ತಮ್ಮ ವೃತ್ತಿಬದುಕಿನಲ್ಲಿ ಮಹತ್ವದ ತಿರುವು ನೀಡಲಿದೆ ಎಂದು ನಾಯಕಿ ಸೋನಾಲ್ ಮಾಂಟೇರಿಯಾ ಹೇಳಿದ್ದಾರೆ.
ಪ್ರತಿಯೊಬ್ಬರ ವೃತ್ತಿಬದುಕಿನಲ್ಲಿಯೂ ಇಂತಹ ಸಮಯಕ್ಕಾಗಿ ಕಾಯುತ್ತೇವೆ. ಚಿತ್ರ ಬಿಡುಗಡೆಗೆ ಮುನ್ನ ವಿಶ್ವಾಸದಿಂದ ಹೇಳುತ್ತೇನೆ, ಯೋಗರಾಜ್ ಭಟ್ ಅವರ ಈ ಚಿತ್ರ ನನಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ. ಶೃಂಗಾರದ ಹೊಂಗೆಮರ ಗೀತೆಯಂತೂ ಅದ್ಭುತವಾಗಿ ಮೂಡಿಬಂದಿದ್ದು ಅದು ಕೂಡ ನಮಗೆ ಧನಾತ್ಮಕ ಅಂಶವಾಗಿದೆ ಎನ್ನುತ್ತಾರೆ ಈ ಮಂಗಳೂರು ಚೆಲುವೆ,
ಸೋನಾಲ್ ಮಾಂಟೇರಿಯಾ ತುಳು ಭಾಷೆಯ ಚಿತ್ರಗಳಿಂದ ತಮ್ಮ ವೃತ್ತಿಬದುಕು ಆರಂಭಿಸಿ ಈ ಹಿಂದೆ ಕನ್ನಡದ ಕೆಲವೊಂದು ಸಣ್ಣ ಚಿತ್ರಗಳಲ್ಲಿ ಅಭಿನಯಿಸಿದ್ದರು. ಆದರೆ ಪ್ರೇಕ್ಷಕರಿಗೆ ಹತ್ತಿರವಾದದ್ದು ಇದೀಗ ಪಂಚತಂತ್ರ ಮೂಲಕ.
ಸೋನಾಲ್ ಗೆ ಯೋಗರಾಜ್ ಭಟ್ ರ ಗಾಳಿಪಟ-2 ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಕೂಡ ಸಿಕ್ಕಿದೆ. ಅವರ ಬಳಿ ತುಂಬಾ ಕಲಿತಿದ್ದೇನೆ, ಸಂಭಾಷಣೆ ಹೇಳುವ ರೀತಿ, ದೈಹಿಕ ಭಾಷೆ ಇತ್ಯಾದಿ ಭಟ್ಟರ ಚಿತ್ರದಲ್ಲಿ ಅಭಿನಯಿಸಿದರೆ ವೃತ್ತಿಯಲ್ಲಿ ಬಹಳ ಉಪಯೋಗವಾಗಲಿದೆ ಎಂದರು.
SCROLL FOR NEXT