ಸೋನಾಲ್ ಮಾಂಟೇರಿಯಾ 
ಸಿನಿಮಾ ಸುದ್ದಿ

ಯೋಗರಾಜ್ ಭಟ್ ಅವರಂಥ ನಿರ್ದೇಶಕರ ಬಳಿ ಕೆಲಸ ಮಾಡುವುದು ಸುದೈವ; ಸೋನಾಲ್ ಮಾಂಟೇರಿಯಾ

ಪಂಚತಂತ್ರ ಸಿನಿಮಾ ತಮ್ಮ ವೃತ್ತಿಬದುಕಿನಲ್ಲಿ ಮಹತ್ವದ ತಿರುವು ನೀಡಲಿದೆ ಎಂದು ನಾಯಕಿ ಸೊನಾಲ್ ಮಾಂಟೆರೋ...

ಪಂಚತಂತ್ರ ಸಿನಿಮಾ ತಮ್ಮ ವೃತ್ತಿಬದುಕಿನಲ್ಲಿ ಮಹತ್ವದ ತಿರುವು ನೀಡಲಿದೆ ಎಂದು ನಾಯಕಿ ಸೋನಾಲ್ ಮಾಂಟೇರಿಯಾ ಹೇಳಿದ್ದಾರೆ.
ಪ್ರತಿಯೊಬ್ಬರ ವೃತ್ತಿಬದುಕಿನಲ್ಲಿಯೂ ಇಂತಹ ಸಮಯಕ್ಕಾಗಿ ಕಾಯುತ್ತೇವೆ. ಚಿತ್ರ ಬಿಡುಗಡೆಗೆ ಮುನ್ನ ವಿಶ್ವಾಸದಿಂದ ಹೇಳುತ್ತೇನೆ, ಯೋಗರಾಜ್ ಭಟ್ ಅವರ ಈ ಚಿತ್ರ ನನಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ. ಶೃಂಗಾರದ ಹೊಂಗೆಮರ ಗೀತೆಯಂತೂ ಅದ್ಭುತವಾಗಿ ಮೂಡಿಬಂದಿದ್ದು ಅದು ಕೂಡ ನಮಗೆ ಧನಾತ್ಮಕ ಅಂಶವಾಗಿದೆ ಎನ್ನುತ್ತಾರೆ ಈ ಮಂಗಳೂರು ಚೆಲುವೆ,
ಸೋನಾಲ್ ಮಾಂಟೇರಿಯಾ ತುಳು ಭಾಷೆಯ ಚಿತ್ರಗಳಿಂದ ತಮ್ಮ ವೃತ್ತಿಬದುಕು ಆರಂಭಿಸಿ ಈ ಹಿಂದೆ ಕನ್ನಡದ ಕೆಲವೊಂದು ಸಣ್ಣ ಚಿತ್ರಗಳಲ್ಲಿ ಅಭಿನಯಿಸಿದ್ದರು. ಆದರೆ ಪ್ರೇಕ್ಷಕರಿಗೆ ಹತ್ತಿರವಾದದ್ದು ಇದೀಗ ಪಂಚತಂತ್ರ ಮೂಲಕ.
ಸೋನಾಲ್ ಗೆ ಯೋಗರಾಜ್ ಭಟ್ ರ ಗಾಳಿಪಟ-2 ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಕೂಡ ಸಿಕ್ಕಿದೆ. ಅವರ ಬಳಿ ತುಂಬಾ ಕಲಿತಿದ್ದೇನೆ, ಸಂಭಾಷಣೆ ಹೇಳುವ ರೀತಿ, ದೈಹಿಕ ಭಾಷೆ ಇತ್ಯಾದಿ ಭಟ್ಟರ ಚಿತ್ರದಲ್ಲಿ ಅಭಿನಯಿಸಿದರೆ ವೃತ್ತಿಯಲ್ಲಿ ಬಹಳ ಉಪಯೋಗವಾಗಲಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT