ರಾಘವೇಂದ್ರ ರಾಜ್ ಕುಮಾರ್ 
ಸಿನಿಮಾ ಸುದ್ದಿ

ರಾಘಣ್ಣ ನಟನೆಯ 25ನೇ ಥ್ರಿಲ್ಲರ್ ಸಿನಿಮಾ 'ಆಡಿಸಿದಾತ'!

1974 ರಲ್ಲಿ ತೆರೆಕಂಡ ಶ್ರೀನಿವಾಸ ಕಲ್ಯಾಣ ಮೂಲಕ ಬಾಲ ಕಲಾವಿದನಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟ ರಾಘವೇಂದ್ರ ರಾಜ್ ಕುಮಾರ್ 25ನೇ ಸಿನಿಮಾ ಥ್ರಿಲ್ಲರ್ ಮೂವಿ ಆಗಲಿದೆ...

1974 ರಲ್ಲಿ ತೆರೆಕಂಡ ಶ್ರೀನಿವಾಸ ಕಲ್ಯಾಣ ಮೂಲಕ ಬಾಲ ಕಲಾವಿದನಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟ ರಾಘವೇಂದ್ರ ರಾಜ್ ಕುಮಾರ್ 25ನೇ ಸಿನಿಮಾ ಥ್ರಿಲ್ಲರ್ ಮೂವಿ ಆಗಲಿದೆ.
ಅಮ್ಮನ ಮನೆ ಸಿನಿಮಾದಿಂದ ನಟ ರಾಘವೇಂದ್ರ ರಾಜ್​ಕುಮಾರ್ ಪುನಃ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಈಗಾಗಲೇ ಅವರ ಮತ್ತೊಂದು ಸಿನಿಮಾ ‘ತ್ರಯಂಬಕಂ’ ಏ.19ಕ್ಕೆ ತೆರೆಕಾಣುವುದಕ್ಕೆ ಸಿದ್ಧವಾಗಿದೆ. ಇದರ ಜತೆಗೆ ಧ್ರುವ ಸರ್ಜಾ ಜತೆಗೆ ‘ಪೊಗರು’ ಚಿತ್ರದಲ್ಲೂ ರಾಘಣ್ಣ ಭಾಗಿಯಾಗಿದ್ದಾರೆ. ಇದೆಲ್ಲದರ ಮಧ್ಯೆ ಅವರ 25ನೇ ಸಿನಿಮಾದ ಕುರಿತ ಮಾಹಿತಿಯೊಂದು ಹೊರಬಿದ್ದಿದೆ. ಆ ಚಿತ್ರಕ್ಕೆ ‘ಆಡಿಸಿದಾತ’ ಎಂದು ನಾಮಕರಣ ಮಾಡಲಾಗಿದೆ.
‘ಆಡಿಸಿದಾತ’ ಶೀರ್ಷಿಕೆ ಕೇಳುತ್ತಲೇ ಡಾ. ರಾಜ್​ಕುಮಾರ್ ಅಭಿನಯದ ಮಹೋನ್ನತ ಸಿನಿಮಾ ‘ಕಸ್ತೂರಿ ನಿವಾಸ’ ನೆನಪಾಗುತ್ತದೆ. ಆ ಚಿತ್ರದ ‘ಆಡಿಸಿದಾತ ಬೇಸರ ಮೂಡಿ..’ ಹಾಡು ಇಂದಿಗೂ ಫೇಮಸ್. ಇದೀಗ ಆ ಹಾಡಿನ ಮೊದಲ ಪದವನ್ನೇ ತೆಗೆದುಕೊಂಡು ಶೀರ್ಷಿಕೆ ಮಾಡಲಾಗಿದೆ. ಅದು ರಾಘಣ್ಣ ನಟಿಸಲಿರುವ 25ನೇ ಸಿನಿಮಾಕ್ಕೆ ಎಂಬುದು ವಿಶೇಷ.
ಮಾರ್ಚ್ 25ಕ್ಕೆ ಚಿತ್ರದ ಮುಹೂರ್ತ ಸಮಾರಂಭ ನೆರವೇರಲಿದ್ದು, ಇದೊಂದು ಥ್ರಿಲ್ಲರ್ ಕಥೆಯಾಧರಿತ ಸಿನಿಮಾ ಆಗಿರಲಿದೆಯಂತೆ. ಹರೀಶ್ ಭಾರದ್ವಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಬೆಂಗಳೂರು, ಮೈಸೂರು ಸುತ್ತಮುತ್ತ ಅಂದಾಜು 30 ದಿನ ಚಿತ್ರೀಕರಣ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT