ಅದ್ದೂರಿ-2 ಗಾಗಿ 8-ಪ್ಯಾಕ್ ಆದ ನಿರಂಜನ್ 
ಸಿನಿಮಾ ಸುದ್ದಿ

ಅದ್ದೂರಿ-2 ಗಾಗಿ 8-ಪ್ಯಾಕ್ ಗೆ ನಿರಂಜನ್ ಸಿದ್ಧತೆ!

"ಅದ್ದೂರಿ-2" ಗಾಗಿ ನಾಯಕ ನಿರಂಜನ್ ಸುಧೀಂದ್ರ ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ. ರಮೇಶ್ ವೆಂಕಟೇಶಬಾಬು ನಿರ್ದೇಶನದ ಈ ಚಿತ್ರಕ್ಕಾಗಿ ನಿರಂಜನ್ ತಾವು ತಮ್ಮ ದೇಹವನ್ನು 8 -ಪ್ಯಾಕ್ಗೆ ತರಲು ಮುಂದಾಗಿದ್ದಾರೆ.

ಬೆಂಗಳೂರು: "ಅದ್ದೂರಿ-2" ಗಾಗಿ ನಾಯಕ ನಿರಂಜನ್ ಸುಧೀಂದ್ರ ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ. ರಮೇಶ್ ವೆಂಕಟೇಶಬಾಬು ನಿರ್ದೇಶನದ ಈ ಚಿತ್ರಕ್ಕಾಗಿ ನಿರಂಜನ್ ತಾವು ತಮ್ಮ ದೇಹವನ್ನು 8 -ಪ್ಯಾಕ್ಗೆ ತರಲು ಮುಂದಾಗಿದ್ದಾರೆ.
ಈ ಚಿತ್ರದಲ್ಲಿ ಮೂರು ವಿಭಿನ್ನ ಶೇಡ್ ಗಳಲ್ಲಿ ನಿರಂಜನ್ ಕಾಣಿಸಲಿದ್ದಾರೆ. ಒಂದು ಶಾಲಾ ವಿದ್ಯಾರ್ಥಿಯಾಗಿ, ಇನ್ನೊಂದು 20-25ರ ಯುವಕನಾಗಿ ಹಾಗೂ ಕಡೆಯದಾಗಿ ಮತ್ತಷ್ಟು ಬಲಿಷ್ಟ ವ್ಯಕ್ತಿಯಾಗಿ ನಿರಂಜನ್ ತೆರೆ ಮೇಲೆ ಬರಲಿದ್ದಾರೆ. ಕಡೆಯ ಶೇಡ್ ನ ಪಾತ್ರಕ್ಕಾಘಿ ನಿರಂಜನ್ ತಮ್ಮ ದೇಹದಾರ್ಷ್ಯವನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯವಿದೆ ಎಂದು ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ.
ಮೋಹನ್ ಜತೆಯಾಗಿ ಸಿಎಂಆರ್ ಪ್ರೊಡಕ್ಷನ್ಸ್ ಲಾಛನದಲ್ಲಿ ಶಂಕರ್ ರೆಡ್ಡಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರಂಜನ್ ಈ ಹಿಂದೆ 2012ರಲ್ಲಿ ತೆರೆಕಂಡ "ಅದ್ದೂರಿ"ಯಲ್ಲಿ ದ್ರುವ ಸರ್ಜಾ ಜತೆ ತೆರೆ ಹಂಚಿಕೊಂಡಿದ್ದರು. ಆದರೆ ಈಗ "ಅದ್ದೂರಿ- 2" ಹೆಸರಿನ ಚಿತ್ರದಲ್ಲಿ ನಾಯಕ ನಟನಾಗಿ ಮಿಂಚುತ್ತಿದ್ದಾರೆ. ಹಾಗೆಯೇ ಈ ಚಿತ್ರಕ್ಕೆ ಮೊದಲಿನ ಚಿತ್ರಕ್ಕೂ ಯಾವ ಸಂಬಂಧವಿಲ್ಲ ಎಂದು ನಿರ್ದ್ಶಕ ರಮೇಶ್ ಹೇಳಿದ್ದಾರೆ.
ಚಿತ್ರತಂಡ ಜೂನ್ 10ಕ್ಕೆ ಚಿತ್ರದ ಮಹೂರ್ತ ನಿಗದಿಪಡಿಸಿದೆ. ಈ ಚಿತ್ರವನ್ನು ಕನ್ನಡದಲ್ಲಷ್ಟೇ ಅಲ್ಲದೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಡಬ್ ಮಾಡಿ ಏಕಕಾಲಕ್ಕೆ ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸಿದ್ದಾರೆ.ರಾಘವೇಂದ್ರ ವಿ. ಈ ಚಿತ್ರಕ್ಕೆ ಸಂಗೀತ ನೀಡಿದ್ದರೆ ಹೈದರಾಬಾದ್ ನ ಯೋಗಿ ಈ ಚಿತ್ರದಛಾಯಾಗ್ರಹಣ ಮಾಡುತ್ತಿದ್ದಾರೆ.
ಇದೇ ವೇಳೆ ಚಿತ್ರಕ್ಕೆ ಮುಖ್ಯ ನಾಯಕಿಯ ಪಾತ್ರಕ್ಕಾಗಿ ನಟಿಯರ ಆಯ್ಕೆ ಇನ್ನೂ ನಡೆಯಬೇಕಿದ್ದು "ರನ್ ಆಂಟನಿ" ಖ್ಯಾತಿಯ ರೂಕ್ಷರ್ ಆಯ್ಕೆಯಾಗುವ ಸಾಧ್ಯತೆಗಳಿದೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT