ಯೋಗರಾಜ್ ಭಟ್ ಹಾಗೂ ತಂಡ 
ಸಿನಿಮಾ ಸುದ್ದಿ

ಯೋಗರಾಜ್ ಭಟ್ಟರ ಹೊಸ ಸಿನೆಮಾ 'ಪದವಿಪೂರ್ವ’

ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ಹೊಸ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದು,  ಯೋಗರಾಜ್ ಸಿನಿಮಾಸ್ ಅಡಿಯಲ್ಲಿ ಮುಂದಿನ ವರ್ಷ ಜನವರಿ ೨೦೨೦ಕ್ಕೆ ಚಿತ್ರ ಆರಂಭವಾಗಲಿದೆ.

ಬೆಂಗಳೂರು: ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ಹೊಸ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದು,  ಯೋಗರಾಜ್ ಸಿನಿಮಾಸ್ ಅಡಿಯಲ್ಲಿ ಮುಂದಿನ ವರ್ಷ ಜನವರಿ ೨೦೨೦ಕ್ಕೆ ಚಿತ್ರ ಆರಂಭವಾಗಲಿದೆ.

ಈ ಚಿತ್ರಕ್ಕೆ ಯೋಗರಾಜ್ ಭಟ್ ಹಾಗೂ ರವಿ ಶಾಮನೂರ್ ಅವರು ಬಂಡವಾಳ ಹೂಡಲಿದ್ದು, ಹರಿಪ್ರಸಾದ್ ಜಯಣ್ಣ ನಿರ್ದೇಶನದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ರವಿ ಶಾಮನೂರ್ ಅವರ ಪುತ್ರ ಪೃಥ್ವಿ ರಾಜ್ ಶಾಮನೂರು ಅವರು 'ಪದವಿಪೂರ್ವ’ ಚಿತ್ರದ ನಾಯಕವನಾಗಿದ್ದಾರೆ. ಈ ಮೂಲಕ ಮಾಡಲಿಂಗ್ ನಲ್ಲಿ ತೊಡಗಿಸಿಕೊಂಡಿದ್ದ ಪೃಥ್ವಿ ಈಗ ಮೊದಲ ಬಾರಿಗೆ ಹೀರೋ ಆಗುತ್ತಿದ್ದಾರೆ.

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಮತ್ತು ಸಂತೋಷ್ ರಾಜ್ ಪತಾಜೆ ಛಾಯಾಗ್ರಹಣವಿರಲಿದೆ ಎಂದು ಯೋಗರಾಜ್ ಸಿನೆಮಾಸ್ ತಿಳಿಸಿದೆ.

ಯುವಕ ಯುವತಿಯರ ತಲ್ಲಣವನ್ನು ಇಟ್ಟುಕೊಂಡು ಸಿನಿಮಾದ ಕಥೆ ಮಾಡಲಾಗಿದೆ. ಅದಕ್ಕೆ ತಕ್ಕ ಹಾಗೆ 'ಪದವಿ ಪೂರ್ಣ' ಎಂಬ ಟೈಟಲ್ ನಿಗದಿ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಭಾರತ ಹೆಚ್ಚಿನ ಸುಂಕ ವಿಧಿಸಬೇಕು: ಕೇಜ್ರಿವಾಲ್

SCROLL FOR NEXT