ಮಂಜು ವಾರಿಯರ್ 
ಸಿನಿಮಾ ಸುದ್ದಿ

ಒಡಿಯನ್ ಸಿನಿಮಾ ನಿರ್ದೇಶಕರ ವಿರುದ್ಧ ದೂರು ದಾಖಲಿಸಿದ  ನಟಿ ಮಂಜು ವಾರಿಯರ್

ಒಡಿಯನ್ ಸಿನಿಮಾ ನಿರ್ದೇಶಕ  ವಿ.ಎ ಶ್ರೀಕುಮಾರ್ ವಿರುದ್ಧ ನಟಿ ಮಂಜು ವಾರಿಯರ್  ಕೇರಳ ಡಿಜಿಪಿ ಅವರಿಗೆ ದೂರು ನೀಡಿದ್ದಾರೆ.

ಒಡಿಯನ್ ಸಿನಿಮಾ ನಿರ್ದೇಶಕ  ವಿ.ಎ ಶ್ರೀಕುಮಾರ್ ವಿರುದ್ಧ ನಟಿ ಮಂಜು ವಾರಿಯರ್  ಕೇರಳ ಡಿಜಿಪಿ ಅವರಿಗೆ ದೂರು ನೀಡಿದ್ದಾರೆ.

2018ರ ಡಿಸೆಂಬರ್ ನಲ್ಲಿ  ಒಡಿಯನ್ ಚಿತ್ರ ರಿಲೀಸ್ ಆಗಿತ್ತು,  ಅದಾದ ನಂತರ ಶ್ರೀ ಕುಮಾರ್  ಮೆನನ್ ಸಾಮಾಜಿಕ ಮಾಧ್ಯಮದಲ್ಲಿ ಆಕೆಯ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಹಾಕಿ ಅವರ ಸ್ನೇಹಿತರ ಮೂಲಕ ಬೆದರಿಕೆ ಹಾಕಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ,

ಸೋಮವಾರ ಕೇರಳ ಡಿಜಿಪಿ ಅವರ ಮನೆಗೆ ತೆರಳಿದ್ದ ನಟಿ ಮಂಜು ವಾರಿಯರ್ ದೂರು ದಾಖಲಿಸಿದ್ದಾರೆ. ಜೊತೆಗೆ ಕಲವು ಸಾಕ್ಷ್ಯಾಧಾರಗಳನ್ನು ಕೂಡ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ,

ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಘನತೆಗೆ ಧಕ್ಕೆ ಬರುವಂತ ಪೋಸ್ಟ್ ಗಳನ್ನು ಹಾಕಿದ್ದಾರೆ,ಅದಕ್ಕೆ ಅವರ ಸ್ನೇಹಿತ ಮಾಥ್ಯೂ ಸ್ಯಾಮ್ಯುಯೆಲ್ ಸಹಾಯ ಮಾಡಿದ್ದಾರೆ ಎಂದುದೂರಿದ್ದಾರೆ.,

ಇನ್ನು ತಮ್ಮ ಒಡೆತನದ ಮಂಜು ವಾರಿಯರ್ ಫೌಂಡೇಶನ್ ನ  ಲೆಟರ್ ಹೆಡ್ ಮತ್ತು ಬ್ಲಾಂಕ್ ಚೆಕ್ಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನೂ ದೂರಿನ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸರು, ಮಂಜುವಾರಿಯರ್ ದೂರು ನೀಡಿದ್ದು, ಐಜಿ ರ್ಯಾಂಕ್ ಅಧಿಕಾರಿಗಳು ತನಿಖೆ ನಡೆಸಲು ಸೂಚಿಸಿರುವುದಾಗಿ ತಿಳಿಸಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲೋಕಸಭೆಯಲ್ಲಿ 'ವಂದೇ ಮಾತರಂ' ಚರ್ಚೆ: ದೇಶಕ್ಕೆ ಸ್ವಾತಂತ್ರ್ಯ ಬಂದ 79 ವರ್ಷಗಳ ನಂತರ ಚರ್ಚೆಯ ಅಗತ್ಯವೇನಿತ್ತು? ಪ್ರಿಯಾಂಕಾ ಗಾಂಧಿ, ಯಾದವ್ ತೀವ್ರ ಕಿಡಿ!

ಬೀದರ್: 'ಹಿಂದೂ' ಎನ್ನುವುದು ಧರ್ಮವೇ ಅಲ್ಲ, ಅದೊಂದು ಕೆಟ್ಟ ಬೈಗುಳ; ನಿವೃತ್ತ ನ್ಯಾಯಮೂರ್ತಿ

ನಿಮ್ಮ ಪತ್ನಿ ಭಾರತೀಯಳಲ್ಲವೇ? ವಲಸೆ ವಿಚಾರವಾಗಿ ಮತ್ತೆ 'ಅಪಹಾಸ್ಯ'ಕ್ಕೀಡಾದ ಅಮೆರಿಕಾದ ಉಪಾಧ್ಯಕ್ಷ ಜೆಡಿ ವ್ಯಾನ್ಸ್!

ಮೈಸೂರು: ಉದ್ಯಮಿ ಅಪಹರಣ, ಸಿನಿಮೀಯ ರೀತಿಯಲ್ಲಿ ಪೊಲೀಸರ ಕಾರ್ಯಾಚರಣೆ, 4 ಗಂಟೆಯಲ್ಲೇ ರಕ್ಷಣೆ, ಐವರ ಬಂಧನ!

'ಇತಿಹಾಸ ತಿರುಚಲು' ಪ್ರಧಾನಿ ಮೋದಿ ಯತ್ನ; ನೆಹರೂ ಪರಂಪರೆ ಅಳಿಸಲು ಬಿಜೆಪಿಗೆ ಸಾಧ್ಯವಿಲ್ಲ: ಗೌರವ್ ಗೊಗೊಯ್; Video

SCROLL FOR NEXT