ಸಿನಿಮಾ ಸುದ್ದಿ

ಶಿಕ್ಷಕರ ದಿನಾಚರಣೆಗೆ ಶುಭಾಶಯ ಕೋರಿ ನೆಟಿಗರಿಂದ ಮಂಗಳಾರತಿ ಮಾಡಿಸಿಕೊಂಡ ಆರ್‌ಜಿವಿ!

Vishwanath S

ಸದಾ ಒಂದಿಲ್ಲೊಂದು ಹೇಳಿಕೆಗಳನ್ನು ನೀಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ನಿರ್ದೇಶಕ ರಾಮ್ ಗೋಪಾಲ್ ವರ್ಮ ಇದೀಗ ಶಿಕ್ಷಕರ ದಿನಾಚರಣೆಗೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದು ಈ ಟ್ವೀಟ್ ನೋಡಿ ನೆಟಿಗರು ಮಂಗಳಾರತಿ ಮಾಡಿದ್ದಾರೆ. 

ರಾಮ್ ಗೋಪಾಲ್ ವರ್ಮ ಟ್ವೀಟ್ ನಲ್ಲಿ ಟೀಚರ್ಸ್ ವಿಸ್ಕಿ ಕುಡಿಯುವ ಮೂಲಕ ಟೀಚರ್ಸ್ ಡೇ ಆಚರಿಸಬಹುದೇ? ಸುಮ್ಮನೆ ಕೇಳುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ರೊಚ್ಚಿಗೆದ್ದಿರುವ ನೆಟಿಗರು ಗುರುಬ್ರಹ್ಮ, ಗುರುವಿಷ್ಣು, ಗುರು ದೇವೋ ಮಹೇಶ್ವರ ಅಂತ ಪೂಜಿಸುವ ಸಂಸ್ಕೃತಿ ನಮ್ಮದು. ಹೀಗಿರುವಾಗ ಇಂತಹ ಪೋಸ್ಟ್ ಮಾಡಿ ಶಿಕ್ಷಕರಿಗೆ ಅವಮಾನ ಮಾಡಬೇಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ. 

ಇನ್ನು ಈ ಹಿಂದೆ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ವಿರುದ್ಧ ವ್ಯಂಗ್ಯವಾಡಿ ವಿವಾದಕ್ಕೆ ಗುರಿಯಾಗಿದ್ದರು. ಇದೇ ಎಲ್ಲದೆ ಸಾವಿತ್ರಿ ಅನ್ನುವ ವಯಸ್ಕರ ಸಿನಿಮಾ ಪೋಸ್ಟರ್ ವಿವಾದ ಹುಟ್ಟುಹಾಕಿದ್ದರು.

SCROLL FOR NEXT