ಸಿನಿಮಾ ಸುದ್ದಿ

'ಪೈಲ್ವಾನ್' ಗೆ ಪೈರಸಿ ಕಾಟ: ನಿರ್ಮಾಪಕಿಯಿಂದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು

Raghavendra Adiga

ಬೆಂಗಳೂರು: ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರ ಬಿಡುಗಡೆಯ ದಿನವೇ ಪೈರಸಿಯಾಗಿತ್ತು ಎಂದು ಆರೋಪಿಸಿ ಚಿತ್ರ ನಿರ್ಮಾಪಕಿ ಸ್ವಪ್ನಕೃಷ್ಣ, ಸೈಬರ್ ಅಪರಾಧ ಪೊಲೀಸ್ ಠಾಣೆಗೆ ಸೋಮವಾರ ದೂರು ನೀಡಿದ್ದಾರೆ.

ಇದೇ ತಿಂಗಳು 12 ರಂದು ಪಂಚಭಾಷೆಗಳಲ್ಲಿ 'ಪೈಲ್ವಾನ್' ಚಿತ್ರ ಬಿಡುಗಡೆಗೊಂಡಿದ್ದು, 3 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು.

ಚಿತ್ರ ನಿರ್ಮಾಪಕಿ ಸ್ವಪ್ನಕೃಷ್ಣ ಪ್ರತಿಕ್ರಿಯಿಸಿ, ''ಸಾಮಾಜಿಕ ಜಾಲತಾಣದಲ್ಲಿ 'ಪೈಲ್ವಾನ್' ಚಿತ್ರವನ್ನು ಕಿಡಿಗೇಡಿಗಳು ಪೈರಸಿ ಮಾಡಿ ಹರಿಬಿಡಲಾಗಿದೆ ಎಂದು ಇಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇವೆ. ಸುಮಾರು 3500 ಕ್ಕೂ ಹೆಚ್ಚು ಲಿಂಕ್ ಗಳನ್ನು ಹಂಚಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದೇನೆ ಎಂದರು.

ಹಾಗೆಯೇ ಚಿತ್ರವನ್ನು ಪೈರಸಿ ಮಾಡಿರುವುದು ದರ್ಶನ್ ಅಭಿಮಾನಿಗಳಲ್ಲ. ಆದರೆ ಕಿಡಿಗೇಡಿಗಳಿಂದ ಪೈರಸಿ ಆಗಿದೆ. ಪೈರಸಿ ಯಾರೇ ಮಾಡಿದರೆ ಅದು ತಪ್ಪು. ಇದು ಚಿತ್ರೋದ್ಯಮದ ಬೆಳವಣಿಗೆಗೆ ಮಾರಕ ಎಂದು ಅವರು ಅಭಿಪ್ರಾಯಪಟ್ಟರು.

SCROLL FOR NEXT