ಬುದ್ದಿವಂತ 2 
ಸಿನಿಮಾ ಸುದ್ದಿ

ಬುದ್ದಿವಂತ 2: ವಿಶಿಷ್ಟ ಲುಕ್ ನಿಂದ ಅಭಿಮಾನಿಗಳಿಗೆ 'ಶಾಕ್' ಕೊಡಲು ಉಪೇಂದ್ರ ತಯಾರು!

ಸೆಪ್ಟೆಂಬರ್ 18-ರಿಯಲ್ ಸ್ಟಾರ್ ಉಪೇಂದ್ರ ಜನ್ಮದಿನ. ಇದಕ್ಕಾಗಿ ಇಂದು ಮಧ್ಯರಾತ್ರಿ ಗಡಿಯಾರ 12 ಹೊಡೆಯುತ್ತಿದ್ದಂತೆ "ಬುದ್ದಿವಂತ 2" ಚಿತ್ರತಂಡ ನಾಯಕ ನಟನ ವಿಶಿಷ್ಟ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಮೂಲಕ ಉಪೇಂದ್ರ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದೆ.

ಸೆಪ್ಟೆಂಬರ್ 18-ರಿಯಲ್ ಸ್ಟಾರ್ ಉಪೇಂದ್ರ ಜನ್ಮದಿನ. ಇದಕ್ಖಾಗಿ ಇಂದು ಮಧ್ಯರಾತ್ರಿ ಗಡಿಯಾರ 12 ಹೊಡೆಯುತ್ತಿದ್ದಂತೆ "ಬುದ್ದಿವಂತ 2" ಚಿತ್ರತಂಡ ನಾಯಕ ನಟನ ವಿಶಿಷ್ಟ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಮೂಲಕ ಉಪೇಂದ್ರ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದೆ.ಇನ್ನು ಈ ದಿನ ಸಂಜೆ ಉಪ್ಪಿ ತಮ್ಮ  ಕ್ರಿಸ್ಟಲ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಚಿತ್ರದ ಮೋಶನ್ ಪೋಸ್ಟರ್ ಸಹ ಅನಾವರಣಗೊಳಿಸಲಿದ್ದಾರೆ.  

ನಟ, ನಿರ್ದೇಶಕ ಉಪ್ಪಿ ಆಗಾಗ್ಗೆ ತಮ್ಮ ಶೈಲಿ ಮತ್ತು ಹೊಸ ಲುಕ್ ಗಳಿಂದ ಪ್ರೇಕ್ಷಕರ ಮೇಲೆ ಪ್ರಭಾವ ಬೀರುತ್ತಾ ಬಂದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ಪೋಸ್ಟರ್ ಹಾಲಿವುಡ್ ನ ಟಚ್ ಹೊಂದಿದ್ದು ಜತೆಜತೆಗೆ ಸ್ಥಳೀಯ ಅಂಶಗಳ ಟಚ್ ಸಹ ಇದೆ.ಅಲ್ಲದೆ ಇದೊಂದು ಮ್ಯಾಡ್ ಮ್ಯಾಕ್ಸ್ ಲುಕ್ ನಿಂದ ಪ್ರಭಾವಿತವಾಗಿದೆ ಎಂದು ಹೇಳಲಾಗಿದೆ.

ನಿರ್ಮಾಪಕರು ಚಿತ್ರದ ಕುರಿತ ಹೆಚ್ಚಿನ ವಿವರ ಬಹಿರಂಗಕ್ಕೆ ಸಿದ್ದವಾಗಿಲ್ಲವಾದರೂ ಉಪೇಂದ್ರ ಅವರ ಲುಕ್ ಚಿತ್ರದಲ್ಲಿ, ವಿಶೇಷವಾಗಿರಲಿದ್ದು ನಾಯಕನ ಪರಿಚಯದ ಸನ್ನಿವೇಶ, ಹಾಡುಮತ್ತು ಕ್ಲೈಮ್ಯಾಕ್ಸ್‌ನಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಸುಳಿವು ಕೊಟ್ಟಿದ್ದಾರೆ."ಈ ವೇಷಭೂಷಣವನ್ನು ವಿನ್ಯಾಸಗೊಳಿಸಲು ಸಾಕಷ್ಟು ವಿಶೇಷ ಕೆಲಸಗಳಾಗಿತ್ತು"ಎಂದು ಉಪೇಂದ್ರನಿಗಾಗಿ ಬುದ್ಧವಂತ 2 ನಲ್ಲಿ ಉಪೇಂದ್ರ ಅವರ ಡ್ರೆಸ್ಸಿಂಗ್ ವಿನ್ಯಾಸಕಾರ ಜಯರಾಮ್ ಹೇಳಿದ್ದಾರೆ.

"ಈ ಉಡುಪನ್ನು ಮುಂಬೈನ ಜಿಮ್ಮಿ ಬಾಬು ಅವರೊಂದಿಗೆ ಸಮಾಲೋಚಿಸಿ ವಿನ್ಯಾಸಗೊಳಿಸಲಾಗಿದೆ, ಮತ್ತು ಬೂಟುಗಳು ಸೇರಿದಂತೆ ಬಟ್ಟೆ ಮತ್ತು ಪರಿಕರಗಳನ್ನು ಕಸ್ಟಮೈಸ್ ಮಾಡಲಾಗಿದೆ" ಎಂದು ಅವರು ಹೇಳುತ್ತಾರೆ. 

ಕ್ರಿಸ್ಟಲ್ ಪಾರ್ಕ್ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಚಿತ್ರದಲ್ಲಿ ನಟ ಡ್ಯುಯಲ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಉಪ್ಪಿ ಎದುರಾಗಿ ಆದಿತ್ಯ ಮೊದಲ ಬಾರಿಗೆ ಖಳನಟನ ಪಾತ್ರ ವಹಿಸಿದ್ದಾರೆ. ಬುದ್ಧಿವಂತ 2 ನಲ್ಲಿ ಮೇಘನಾ ರಾಜ್ ಮತ್ತು ಸೋನಾಲ್ ಮೋಂಟಾರಿಯೋ ಪ್ರಮುಖ ನಾಯಕಿಯರಾಗಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT