ತಾನ್ಯಾ ಹೋಪೆ 
ಸಿನಿಮಾ ಸುದ್ದಿ

ಆಗಸ್ಟ್ 15 ರಂದು ತಾನ್ಯಾ ಹೋಪೆ ನಟನೆಯ ಆಲ್ಬಂ ರಿಲೀಸ್

ಅರ್ಜುನ್ ರಾಜ್ ನಿರ್ದೇಶನದ ಸಿಂಗಲ್ ಮ್ಯೂಸಿಕ್ ಆಲ್ಬಂ ನಲ್ಲಿ ನಟಿ ತಾನ್ಯಾ ಹೋಪೆ ಕಾಣಿಸಿಕೊಂಡಿದ್ದಾರೆ. ಅರ್ಜುನ್ ರಾಜ್ ನಿರ್ದೇಶನದ ಚೊಚ್ಚಲ ಹಾಡು ಇದಾಗಿದೆ, ಎಲ್ಲಾ ವೃತ್ತಿಪರರ ವೇದಿಕೆ ಗೀತೆ ಇದಾಗಿದ್ದು, ಆಗಸ್ಟ್ 15 ರಂದು ಸಾಂಗ್ ರಿಲೀಸ್ ಆಗಲಿದೆ.

ಅರ್ಜುನ್ ರಾಜ್ ನಿರ್ದೇಶನದ ಸಿಂಗಲ್ ಮ್ಯೂಸಿಕ್ ಆಲ್ಬಂ ನಲ್ಲಿ ನಟಿ ತಾನ್ಯಾ ಹೋಪೆ ಕಾಣಿಸಿಕೊಂಡಿದ್ದಾರೆ. ಅರ್ಜುನ್ ರಾಜ್ ನಿರ್ದೇಶನದ ಚೊಚ್ಚಲ ಹಾಡು ಇದಾಗಿದೆ, ಎಲ್ಲಾ ವೃತ್ತಿಪರರ ವೇದಿಕೆ ಗೀತೆ ಇದಾಗಿದ್ದು, ಆಗಸ್ಟ್ 15 ರಂದು ಸಾಂಗ್ ರಿಲೀಸ್ ಆಗಲಿದೆ.

ಈ ಮೊದಲು ತಾನ್ಯಾ ಹೋಪೆ ಮಾರಮ್ಮನ್ ಡಿಸ್ಕೋ ಗೆ ಸಂಗೀತ ನೀಡಿದ್ದ ಬಾಸಿಕ್ಸ್  ಈ ಸಾಂಗ್ ಗೆ ಸಂಗೀತ ನೀಡಿದ್ದಾರೆ. ಮಾರಮ್ಮನ್ ಡಿಸ್ಕೋ ತಾಂಡವ್ ಮೀಡಿಯಾ ಟೀಮ್ ಸಾಂಗ್ ಇದಾಗಿತ್ತು. ಜೊತೆಗೆ ಇದು ತಾನ್ಯಾ ಅವರ 2ನೇ ರ್ಯಾಪರ್ ಸಾಂಗ್ ಆಗಿದೆ. ಪ್ರವೀಣ್ ಆರ್ಯ ನೃತ್ಯ  ಸಂಯೋಜನೆಯಿದೆ,

ಮೂರು ಭಾಷೆಗಳಲ್ಲಿ ಹಾಡು ತಯಾರಾಗಿದ್ದು, ಕನ್ನಡದಲ್ಲಿ ಶ್ರೇಣಿಕ್, ತೆಲುಗಿನಲ್ಲಿ ಪ್ರಣವ್ ಚಾಗಂತಿ ಮತ್ತು ತಮಿಳಿನಲ್ಲಿ ಸೌಂದರ್ಯ ಬಾಲಾ ಹಾಡಿದ್ದಾರೆ. ಸುಹಾಸ್ ಸಪ್ತಗಿರಿ ಸಿನಿಮಾಟೋಗ್ರಫಿ ಇದೆ.

ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಎಲ್ಲಾ ಕಲಾವಿದರು ವೇದಿಕೆಯಲ್ಲಿ ನಟಿಸುವ ಅವಕಾಶ ಕಳೆದುಕೊಂಡಿದ್ದಾರೆ, ಪ್ರಸಕ್ತ ಸನ್ನಿವೇಶದಲ್ಲಿ ಮತ್ತೆ ನಾವೆಲ್ಲರೂ ಹೇಗೆ ಸೇರಿಕೊಳ್ಳುತ್ತೇವೆ ಮತ್ತು ನಮ್ಮ ವೇದಿಕೆಯನ್ನು ಹೇಗೆ ರಚಿಸುತ್ತೇವೆ ಎಂಬುದು ಹಾಡಿನ ವಿಷಯವಾಗಿದೆ ಎಂದು ತಾನ್ಯಾ ಹೇಳಿದ್ದಾರೆ.

ಡ್ಯಾನ್ಸ್ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ತಾನ್ಯಾ ಎಲ್ಲಾ ಸಮಯದಲ್ಲೂ ನೃತ್ಯ ಅಭ್ಯಾಸ ಮಾಡುತ್ತಿರುತ್ತಾರಂತೆ ,ಈ ಹಾಡಿನಲ್ಲಿ ತಮ್ಮ ಎಲ್ಲಾ ಪ್ರತಿಭೆ ಹೊರ ಹಾಕಲು ರೆಡಿಯಾಗಿದ್ದಾರೆ.

ನನಗೆ ಆಯಾಸವಾಗಿಯೇ ಇಲ್ಲ, ಪ್ರತಿಸಲ ನಾನು ಡ್ಯಾನ್ಸ್ ಮಾಡುವಾಗ ಯಾವ ಸ್ಟೆಪ್ ಮಾಡಿದ್ದೇನೆ, ಯಾವುದನ್ನು ಮಾಡಿಲ್ಲ ಎಂಬುದು ನನಗೆ ತಿಳಿಯುತ್ತದೆ, ಇದೊಂದು ಥೀಮ್ ಸಾಂಗ್ ಆಗಿರುವ ಕಾರಣದಿಂದ ನಾನು ಈ ಹಾಡಿನಲ್ಲಿ ನಟಿಸಿದ್ದೇನೆ, ಥೀಮ್ ಸಾಂಗ್ ನನಗೆ ಬಹಳ ಇಷ್ಟ, ಹಾಗಾಗಿ ಡ್ಯಾನ್ಸ್ ಮಾಡಿದ್ದೇನೆ, ಎಲ್ಲಾ ರೀತಿಯ ಮುಂಜಾಗರೂಕಾ ಕ್ರಮ ತೆಗೆದುಕೊಂಡು ಶೂಟಿಂಗ್ ನಲ್ಲಿ ಭಾಗವಹಿಸಿದ್ದಾಗಿ ತಿಳಿಸಿದ್ದಾರೆ.

ದರ್ಶನ್ ನಟನೆಯ ಯಜಮಾನ ಸಿನಿಮಾದ ಫೇಮಸ್ ಹಾಡು ಬಸಣ್ಣಿ ಬಾ ಮೂಲಕ ತಾನ್ಯಾ ಮನೆ ಮಾತಾಗಿದ್ದಾರೆ. ಉಪೇಂದ್ರ ಅಭಿನಯದ ಹೋಮ್ ಮಿನಿಸ್ಟರ್ ಸಿನಿಮಾದಲ್ಲೂ ಕೂಡ ತಾನ್ಯಾ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

NCERT ಪಠ್ಯಪುಸ್ತಕ ವಿವಾದ: ನಾವು ನ್ಯಾಯಾಂಗವನ್ನು ಗೌರವಿಸುತ್ತೇವೆ; ಬಿಜೆಪಿ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

SCROLL FOR NEXT