ತಾನ್ಯಾ ಹೋಪೆ 
ಸಿನಿಮಾ ಸುದ್ದಿ

ಆಗಸ್ಟ್ 15 ರಂದು ತಾನ್ಯಾ ಹೋಪೆ ನಟನೆಯ ಆಲ್ಬಂ ರಿಲೀಸ್

ಅರ್ಜುನ್ ರಾಜ್ ನಿರ್ದೇಶನದ ಸಿಂಗಲ್ ಮ್ಯೂಸಿಕ್ ಆಲ್ಬಂ ನಲ್ಲಿ ನಟಿ ತಾನ್ಯಾ ಹೋಪೆ ಕಾಣಿಸಿಕೊಂಡಿದ್ದಾರೆ. ಅರ್ಜುನ್ ರಾಜ್ ನಿರ್ದೇಶನದ ಚೊಚ್ಚಲ ಹಾಡು ಇದಾಗಿದೆ, ಎಲ್ಲಾ ವೃತ್ತಿಪರರ ವೇದಿಕೆ ಗೀತೆ ಇದಾಗಿದ್ದು, ಆಗಸ್ಟ್ 15 ರಂದು ಸಾಂಗ್ ರಿಲೀಸ್ ಆಗಲಿದೆ.

ಅರ್ಜುನ್ ರಾಜ್ ನಿರ್ದೇಶನದ ಸಿಂಗಲ್ ಮ್ಯೂಸಿಕ್ ಆಲ್ಬಂ ನಲ್ಲಿ ನಟಿ ತಾನ್ಯಾ ಹೋಪೆ ಕಾಣಿಸಿಕೊಂಡಿದ್ದಾರೆ. ಅರ್ಜುನ್ ರಾಜ್ ನಿರ್ದೇಶನದ ಚೊಚ್ಚಲ ಹಾಡು ಇದಾಗಿದೆ, ಎಲ್ಲಾ ವೃತ್ತಿಪರರ ವೇದಿಕೆ ಗೀತೆ ಇದಾಗಿದ್ದು, ಆಗಸ್ಟ್ 15 ರಂದು ಸಾಂಗ್ ರಿಲೀಸ್ ಆಗಲಿದೆ.

ಈ ಮೊದಲು ತಾನ್ಯಾ ಹೋಪೆ ಮಾರಮ್ಮನ್ ಡಿಸ್ಕೋ ಗೆ ಸಂಗೀತ ನೀಡಿದ್ದ ಬಾಸಿಕ್ಸ್  ಈ ಸಾಂಗ್ ಗೆ ಸಂಗೀತ ನೀಡಿದ್ದಾರೆ. ಮಾರಮ್ಮನ್ ಡಿಸ್ಕೋ ತಾಂಡವ್ ಮೀಡಿಯಾ ಟೀಮ್ ಸಾಂಗ್ ಇದಾಗಿತ್ತು. ಜೊತೆಗೆ ಇದು ತಾನ್ಯಾ ಅವರ 2ನೇ ರ್ಯಾಪರ್ ಸಾಂಗ್ ಆಗಿದೆ. ಪ್ರವೀಣ್ ಆರ್ಯ ನೃತ್ಯ  ಸಂಯೋಜನೆಯಿದೆ,

ಮೂರು ಭಾಷೆಗಳಲ್ಲಿ ಹಾಡು ತಯಾರಾಗಿದ್ದು, ಕನ್ನಡದಲ್ಲಿ ಶ್ರೇಣಿಕ್, ತೆಲುಗಿನಲ್ಲಿ ಪ್ರಣವ್ ಚಾಗಂತಿ ಮತ್ತು ತಮಿಳಿನಲ್ಲಿ ಸೌಂದರ್ಯ ಬಾಲಾ ಹಾಡಿದ್ದಾರೆ. ಸುಹಾಸ್ ಸಪ್ತಗಿರಿ ಸಿನಿಮಾಟೋಗ್ರಫಿ ಇದೆ.

ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಎಲ್ಲಾ ಕಲಾವಿದರು ವೇದಿಕೆಯಲ್ಲಿ ನಟಿಸುವ ಅವಕಾಶ ಕಳೆದುಕೊಂಡಿದ್ದಾರೆ, ಪ್ರಸಕ್ತ ಸನ್ನಿವೇಶದಲ್ಲಿ ಮತ್ತೆ ನಾವೆಲ್ಲರೂ ಹೇಗೆ ಸೇರಿಕೊಳ್ಳುತ್ತೇವೆ ಮತ್ತು ನಮ್ಮ ವೇದಿಕೆಯನ್ನು ಹೇಗೆ ರಚಿಸುತ್ತೇವೆ ಎಂಬುದು ಹಾಡಿನ ವಿಷಯವಾಗಿದೆ ಎಂದು ತಾನ್ಯಾ ಹೇಳಿದ್ದಾರೆ.

ಡ್ಯಾನ್ಸ್ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ತಾನ್ಯಾ ಎಲ್ಲಾ ಸಮಯದಲ್ಲೂ ನೃತ್ಯ ಅಭ್ಯಾಸ ಮಾಡುತ್ತಿರುತ್ತಾರಂತೆ ,ಈ ಹಾಡಿನಲ್ಲಿ ತಮ್ಮ ಎಲ್ಲಾ ಪ್ರತಿಭೆ ಹೊರ ಹಾಕಲು ರೆಡಿಯಾಗಿದ್ದಾರೆ.

ನನಗೆ ಆಯಾಸವಾಗಿಯೇ ಇಲ್ಲ, ಪ್ರತಿಸಲ ನಾನು ಡ್ಯಾನ್ಸ್ ಮಾಡುವಾಗ ಯಾವ ಸ್ಟೆಪ್ ಮಾಡಿದ್ದೇನೆ, ಯಾವುದನ್ನು ಮಾಡಿಲ್ಲ ಎಂಬುದು ನನಗೆ ತಿಳಿಯುತ್ತದೆ, ಇದೊಂದು ಥೀಮ್ ಸಾಂಗ್ ಆಗಿರುವ ಕಾರಣದಿಂದ ನಾನು ಈ ಹಾಡಿನಲ್ಲಿ ನಟಿಸಿದ್ದೇನೆ, ಥೀಮ್ ಸಾಂಗ್ ನನಗೆ ಬಹಳ ಇಷ್ಟ, ಹಾಗಾಗಿ ಡ್ಯಾನ್ಸ್ ಮಾಡಿದ್ದೇನೆ, ಎಲ್ಲಾ ರೀತಿಯ ಮುಂಜಾಗರೂಕಾ ಕ್ರಮ ತೆಗೆದುಕೊಂಡು ಶೂಟಿಂಗ್ ನಲ್ಲಿ ಭಾಗವಹಿಸಿದ್ದಾಗಿ ತಿಳಿಸಿದ್ದಾರೆ.

ದರ್ಶನ್ ನಟನೆಯ ಯಜಮಾನ ಸಿನಿಮಾದ ಫೇಮಸ್ ಹಾಡು ಬಸಣ್ಣಿ ಬಾ ಮೂಲಕ ತಾನ್ಯಾ ಮನೆ ಮಾತಾಗಿದ್ದಾರೆ. ಉಪೇಂದ್ರ ಅಭಿನಯದ ಹೋಮ್ ಮಿನಿಸ್ಟರ್ ಸಿನಿಮಾದಲ್ಲೂ ಕೂಡ ತಾನ್ಯಾ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT