ತಮ್ಮ ಮುಂದಿನ ಚಿತ್ರದಲ್ಲಿ ರಗಡ್ ಲುಕ್ ನಲ್ಲಿ ವಿಕ್ರಮ್ ರವಿಚಂದ್ರನ್ 
ಸಿನಿಮಾ ಸುದ್ದಿ

ತಮ್ಮ ಮುಂದಿನ ಚಿತ್ರದಲ್ಲಿ ರಗಡ್ ಲುಕ್ ನಲ್ಲಿ ವಿಕ್ರಮ್ ರವಿಚಂದ್ರನ್

​ವಿಕ್ರಮ್ ರವಿಚಂದ್ರನ್ ಅವರ ಮೊದಲ ಸಿನಿಮಾ ತ್ರಿವಿಕ್ರಮ ಬಿಡುಗಡೆಗೆ ಅವರ ಅಭಿಮಾನಿಗಳು ಕಾಯುತ್ತಿರುವಾಗಲೇ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ ಎರಡನೇ ಸಿನಿಮಾಗೆ ತಯಾರಾಗುತ್ತಿದ್ದಾರೆ. 

ವಿಕ್ರಮ್ ರವಿಚಂದ್ರನ್ ಅವರ ಮೊದಲ ಸಿನಿಮಾ ತ್ರಿವಿಕ್ರಮ ಬಿಡುಗಡೆಗೆ ಅವರ ಅಭಿಮಾನಿಗಳು ಕಾಯುತ್ತಿರುವಾಗಲೇ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ ಎರಡನೇ ಸಿನಿಮಾಗೆ ತಯಾರಾಗುತ್ತಿದ್ದಾರೆ. 

ಪ್ರಿಯಾಮಣಿ, ಅಮಿತಾಬ್ ಬಚ್ಚನ್ (ವಾಯ್ಸ್ ಓವರ್) ರಂತಹ ತಾರಾಗಣವನ್ನಿಟ್ಟುಕೊಂಡು ನೇತ್ರದಾನದ ಕುರಿತು ವೈಟ್ ಎಂಬ ಕಿರು ಚಿತ್ರ ನಿರ್ದೇಶಿಸಿದ್ದ ಸಹಾಯಕ ನಿರ್ದೇಶಕ ಮನು ನಾಗ್ ವಿಕ್ರಮ್ ರವಿಚಂದ್ರನ್ ಅವರ ಎರಡನೇ ಚಿತ್ರವನ್ನು ನಿರ್ದೇಶಿಸುವ ಮೂಲಕ ಮೊದಲ ಬಾರಿಗೆ ನಿರ್ದೇಶನಕ ಕ್ಯಾಪ್ ತೊಡಲಿದ್ದಾರೆ. 

ಮನು ನಾಗ್ ಮಲಯಾಳಂ ನಲ್ಲಿ ಅಥಿಧಿಕಲ್, ಕನ್ನಡದಲ್ಲಿ ಬೆಳ್ಳಿ, ಯೋಗರಾಜ್ ಭಟ್ಟರ ದನ ಕಾಯೋನು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದಾರೆ.

ವಿಕ್ರಮ್ ರವಿಚಂದ್ರನ್ ಅವರು ಮನು ನಿರ್ದೇಶಿಸುತ್ತಿರುವ ಚಿತ್ರದಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರ ಪೋಷಕರು ಮತ್ತು ಮಗನ ನಡುವಿನ ಭಾವನೆಗಳ ಸುತ್ತ ಹೆಣೆದಿರುವ ಕಥಾಹಂದರವನ್ನು ಹೊಂದಿರಲಿದೆ. 

"ವಿಕ್ರಮ್ ಚಿತ್ರಕಥೆಯನ್ನು ಇಷ್ಟಪಟ್ಟಿದ್ದಾರೆ, ಅವರ ಪಾತ್ರದ ಚಿತ್ರಣವನ್ನೂ ಮೆಚ್ಚಿದ್ದಾರೆ. ಈ ಸಿನಿಮಾಗೆ ಅವರು ಒಪ್ಪಿಗೆ ಸೂಚಿಸಿದ್ದು, ತಯಾರಿ ಕೆಲಸ ಭರದಿಂದ ಸಾಗಿದೆ, ಪ್ರೊಡಕ್ಷನ್ ಹೌಸ್, ಉಳಿದ ತಾರಾಗಣಗಳ ಬಗ್ಗೆ ಚಿತ್ರತಂಡ ಹಾಗೂ ನಟ ವಿಕ್ರಮ್ ರವಿಚಂದ್ರನ್ ಶೀಘ್ರವೇ  ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. 

ಅಂದಹಾಗೆ ವಿಕ್ರಮ್ ರವಿಚಂದ್ರನ್ ಮೊದಲ ಬಾರಿಗೆ ನಟಿಸಿದ್ದ, ಸಹನಾ ಮೂರ್ತಿ ನಿರ್ದೇಶನದ ಸಿನಿಮಾ ತ್ರಿವಿಕ್ರಮದ ಟೀಸರ್ ಪೋಸ್ಟರ್ ಗಳು ನಿರೀಕ್ಷೆಗಳನ್ನು ಹೆಚ್ಚಿಸಿದೆ. ತ್ರಿವಿಕ್ರಮ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, 2 ಹಾಡುಗಳ ಚಿತ್ರೀಕರಣ ಬಾಕಿ ಇದೆ. ಗೌರಿ ಎಂಟರ್ಟೈನರ್ಸ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಚಿತ್ರ ದೇಶಾದ್ಯಂತ ತೆರೆ ಕಾಣಲಿದ್ದು, ತಮಿಳು, ತೆಲುಗು, ಮಲಯಾಳಂ, ಹಿಂದಿಗಳಲ್ಲಿಯೂ ತೆರೆ ಕಾಣಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT