ಶಿವರಾಜ್‌ಕುಮಾರ್ 
ಸಿನಿಮಾ ಸುದ್ದಿ

ಸೆಂಚುರಿ ಸ್ಟಾರ್ ಶಿವಣ್ಣನಿಗಾಗಿ ಡೈರೆಕ್ಟರ್ ಕ್ಯಾಪ್ ಧರಿಸಲಿರುವ ವಿಜಯ್ ಮಿಲ್ಟನ್?

ಸಧ್ಯಕ್ಕೆ  ಧ್ರುವ ಸರ್ಜಾ ಅವರ ಪೊಗರು ಚಿತ್ರದಲ್ಲಿ ಡಿಒಪಿ ಆಗಿ ಕೆಲಸ ಮಾಡುತ್ತಿರುವ ಛಾಯಾಗ್ರಾಹಕ ರ್ದೇಶಕ ವಿಜಯ್ ಮಿಲ್ಟನ್, ಶಿವರಾಜ್‌ಕುಮಾರ್ ಜತೆಗಿನ ಚಿತ್ರಕ್ಕಾಗಿ ಸಿದ್ದವಾಗುತ್ತಿದ್ದಾರೆ ಎಂಬ ವದಂತಿಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ. ಇದೀಗ ನಿರ್ದೇಶಕರು ಹ್ಯಾಟ್ರಿಕ್ ಹೋರೋ ಶಿವಣ್ಣಗೆ ಸ್ಕ್ರಿಪ್ಟ್ ವಿವರಿಸಿದ್ದು ನಟ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ

ಸಧ್ಯಕ್ಕೆ  ಧ್ರುವ ಸರ್ಜಾ ಅವರ ಪೊಗರು ಚಿತ್ರದಲ್ಲಿ ಡಿಒಪಿ ಆಗಿ ಕೆಲಸ ಮಾಡುತ್ತಿರುವ ಛಾಯಾಗ್ರಾಹಕ ರ್ದೇಶಕ ವಿಜಯ್ ಮಿಲ್ಟನ್, ಶಿವರಾಜ್‌ಕುಮಾರ್ ಜತೆಗಿನ ಚಿತ್ರಕ್ಕಾಗಿ ಸಿದ್ದವಾಗುತ್ತಿದ್ದಾರೆ ಎಂಬ ವದಂತಿಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ. ಇದೀಗ ನಿರ್ದೇಶಕರು ಹ್ಯಾಟ್ರಿಕ್ ಹೋರೋ ಶಿವಣ್ಣಗೆ ಸ್ಕ್ರಿಪ್ಟ್ ವಿವರಿಸಿದ್ದು ನಟ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗಿದೆ. 

ಪ್ರಸ್ತುತ  ಪೊಗರು  ಚಿತ್ರದ ಹಾಡಿನ ಸನ್ನಿವೇಶಗಳನ್ನು ಚಿತ್ರೀಕರಣ ಮಾಡುತ್ತಿರುವ ಡಿಒಪಿ ಶೀಘ್ರದಲ್ಲೇ ಹೊಸ ಪ್ರಾಜೆಕ್ಟ್‌ನ ಕೆಲಸ ಪ್ರಾರಂಭಿಸಲಿದ್ದಾರೆ.ಇದು ಸೆಂಚುರಿ ಸ್ಟಾರ್ ಶಿವಣ್ಣನ  124 ನೇ ಚಿತ್ರವಾಗಲಿದೆ. ಈ ನಟ ಪ್ರಸ್ತುತ ತನ್ನ 122 ನೇ ಚಿತ್ರ ಭಜರಂಗಿ 2 ಚಿತ್ರದ ಚಿತ್ರೀಕರಣದಲ್ಲಿದ್ದು, ರವಿ ಅರಸು ನಿರ್ದೇಶನದ ಮತ್ತು ಸತ್ಯ ಜ್ಯೋತಿ ಫಿಲ್ಮ್ಸ್ ನಿರ್ಮಿಸಿರುವ ಆರ್‌ಡಿಎಕ್ಸ್‌ ಅವರ ಮುಂದಿನ ಯೋಜನೆಯಾಗಿರಲಿದೆ. ಇನ್ನು ತಮ್ಮ 125 ನೇ ಚಿತ್ರ ಭೈರತಿ ರಣಗಲ್ ಎಂಬುದನ್ನು ಶಿವಣ್ಣ ಇದಾಗಲೇ ತೀರ್ಮಾನಿಸಿದ್ದಾರೆ.ಹಾಗೂ ಇದನ್ನು ಅವರ ಹೋಂ ಬ್ಯಾನರ್ ಶ್ರೀ ಆಂಡ್  ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಿಸಲಾಗಿದೆ 

ಇದೀಗ ಶಿವಣ್ಣ .ತಮ್ಮ 124 ನೇ ಯೋಜನೆಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದು  ವಿಜಯ್ ಮಿಲ್ಟನ್ ಜತೆ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ. ಈ ಚಿತ್ರದ ಬಗ್ಗೆ ಮತ್ತೊಂದು ಕುತೂಹಲಕಾರಿ ಸುದ್ದಿ ಎಂದರೆ ಟಗರು ಬಳಿಕ ವಣ್ಣ ಮತ್ತು ಧನಂಜಯ್ ಮತ್ತೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದಾಗಿದೆ. ನಿರ್ದೇಶಕರು ಇಬ್ಬರೂ ನಟರನ್ನು ಒಟ್ಟಿಗೆ ತೆರೆ ಮೇಲೆ ತೋರಿಸಲು ಕಾತುರರಿದ್ದಾರೆ. ಇದಾಗಲೇ ಸೂರಿ ನಿರ್ದೇಶನದ ಚಿತ್ರದಲ್ಲಿ ಈ ಜೋಡಿ ಮೋಡಿ ಮಾಡಿದ್ದರು. ವಿಜಯ್ ಮಿಲ್ಟನ್ ಮತ್ತೆ ಆ ಮ್ಯಾಜಿಕ್ ಅನ್ನು ತೆರೆಗೆ ಮರಳಿಸಲು ನೋಡುತ್ತಿದ್ದಾರೆ.ಇನ್ನು ಈ ಇಬ್ಬರಲ್ಲದೆ ಇನ್ನೂ ಒಬ್ಬ ನಾಯಕ ಚಿತ್ರದಲ್ಲಿದ್ದಾರೆ ಎನ್ನಲಾಗಿದ್ದು ಆ ಕುರಿತು ವಿವರಗಳು ಇನ್ನೂ ಬಹಿರಂಗವಾಗಿಲ್ಲ. 

ವಿಜಯ್ ಮಿಲ್ಟನ್ ತಮಿಳಿನ ಗೋಲಿ ಸೋಡ ಮೂಲಕ ವಿಮರ್ಶಕರ ಮೆಚ್ಚುಗೆ ಗಳಿಸಿದ್ದರು.ಸ್ಯಾಂಡಲ್ ವುಡ್ ನಲ್ಲಿ ಅಟ್ಟಹಾಸ ಚಿತ್ರದ ಡಿಒಪಿ ಆಗಿ ಹೆಚ್ಚು ಹೆಸರಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ  ನಡೆಇದ್ದಾದರೆ ಶಿವಣ್ಣ ಅವರೊಂದಿಗಿನ ಅವರ ಯೋಜನೆಯು ಕನ್ನಡದಲ್ಲಿ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT