ಅನುರಾಧ ಪೌದ್ವಾಲ್ 
ಸಿನಿಮಾ ಸುದ್ದಿ

ಅನುರಾಧಾ ಪೌದ್ವಾಲ್ ನನ್ನ ತಾಯಿ: ಕೋರ್ಟ್ ಮೆಟ್ಟಿಲೇರಿದ ಮಹಿಳೆ: ಗಾಯಕಿ ಹೇಳಿದ್ದೇನು?

 ಖ್ಯಾತ ಹಿರಿಯ ಹಿನ್ನೆಲೆ ಗಾಯಕಿ ಅನುರಾಧಾ ಪೌದ್ವಾಲ್ ಅವರು ನನ್ನ ಹೆತ್ತ ತಾಯಿ ಎಂದು ಹೇಳಿಕೊಂಡು ಕೇರಳದ ಮಹಿಳೆಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ತಿರುವನಂತಪುರ;  ಖ್ಯಾತ ಹಿರಿಯ ಹಿನ್ನೆಲೆ ಗಾಯಕಿ ಅನುರಾಧಾ ಪೌದ್ವಾಲ್ ಅವರು ನನ್ನ ಹೆತ್ತ ತಾಯಿ ಎಂದು ಹೇಳಿಕೊಂಡು ಕೇರಳದ ಮಹಿಳೆಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಜ.27ರಂದು ಪ್ರಕರಣದ ವಿಚಾರಣೆ ನಡೆಯುವ ವೇಳೆ, ಪೊಡವಾಲ್ ಹಾಗೂ ಅವರ ಇಬ್ಬರು ಮಕ್ಕಳು ಖುದ್ದು ಹಾಜರಾಗಬೇಕು ಎಂದು ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಅನುರಾಧಾ ಪೌದ್ವಾಲ್ ಅವರಿಗೆ ಸೂಚಿಸಿದೆ.

ಕರ್ಮಲಾ ಮೋಡೆಕ್ಸ್ ಎನ್ನುವವರು ಈ ಆರೋಪ ಮಾಡಿದ್ದು, ‘ನನ್ನ ಬಾಲ್ಯ ಹಾಗೂ ಜೀವನದ ಹಕ್ಕುಗಳನ್ನು ನಿರಾಕರಿಸಿದ್ದಕ್ಕಾಗಿ ಹೆತ್ತ ಪೋಷಕರು ₹ 50 ಕೋಟಿ ಪರಿಹಾರ ನೀಡಬೇಕು’ ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

‘ಪೌದ್ವಾಲ್ ಅವರು 1974ರಲ್ಲಿ ಸಾಕುಪೋಷಕರಾದ ಪೊನ್ನಚ್ಚನ್ ಹಾಗೂ ಅಗ್ನೇಸ್‌ ಅವರಿಗೆ ನನ್ನನ್ನು ನೀಡಿದರು. ಆ ವೇಳೆಗೆ ಅವರು ವೃತ್ತಿಜೀವನದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರಿಂದ, ಮಗುವನ್ನು ಸಾಕಲು ಅವರಿಗೆ ಇಷ್ಟವಿರಲಿಲ್ಲ’  ಈ ವಿಷಯವನ್ನು ನನ್ನ ಸಾಕು ಸಾವಿನ ಅಂಚಿನಲ್ಲಿರುವಾಗ ತಿಳಿಸಿದರು ಎಂದು ಹೇಳಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಗಾಯಕಿ  ಅನುರಾಧ, ಉಥ ಮೂರ್ಖ ಹೇಳಿಕೆಗೆ ಪ್ರತಿಕ್ರಿಯಿಸುವ ಅವಶ್ಯಕತೆಯಿಲ್ಲ, ಇದರ ಬಗ್ಗೆ ನಾನು ಸ್ಪಷ್ಟನೆ ಕೂಡ ನೀಡುವುದಿಲ್ಲ, ಇದಕ್ಕೆ ಪ್ರತಿಕ್ರಿಯಿಯಿಸಿದರೇ ನನ್ನ ಗೌರವಕ್ಕೆ ಕುಂದು ಬರುತ್ತದೆ ಎಂದು ಹೇಳಿದ್ದಾರೆ. 

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅನುರಾಧ ಪೌದ್ವಾಲ್ ಅವರ ವಕ್ತಾರೆ, ಆಕೆಯೊಬ್ಬ ಸೈಕೋ ಎಂದು ಹೇಳಿದ್ದಾರೆ, ಅನುರಾಧ ಅವರ ಪುತ್ರಿ ಕವಿತಾ 1974 ರಲ್ಲಿ ಜನಿಸಿದರು, ಅನುರಾಧ ಅವರ ಪತಿ ನಿಧನವಾಗಿರುವ ವಿಷಯ ಕೂಡ ಆಕೆಗೆ ತಿಳಿದಿಲ್ಲ ಎಂದು ಟೀಕಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ