ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

'ಮೈ ನೇಮ್ ಇಸ್ ರಾಜ' ನಟನೆಗೆ ಮನೆಯವರು 'ಥೂ' ಅಂತಿದ್ದಾರೆ: ರಾಜ್ ಸೂರ್ಯನ್

ಚಂದನವನದಲ್ಲಿ ಈಗಾಗಲೇ ಎರಡು ಚಿತ್ರಗಳನ್ನು ನಿರ್ಮಿಸಿಯೂ ಅಸ್ತಿತ್ವ ಕಂಡುಕೊಳ್ಳಲಾಗದೆ ಪರಿತಪಿಸುತ್ತಿರುವ ನಾಯಕ ನಟ ಕಮ್ ನಿರ್ಮಾಪಕ ರಾಜ್ ಸೂರ್ಯನ್ ‘ಮೈ ನೇಮ್ ಇಸ್ ರಾಜ’ನಾಗಿ ಒಳ್ಳೆಯ ಅವಕಾಶ ನಿರೀಕ್ಷಿಸುತ್ತಿದ್ದಾರೆ.

ಬೆಂಗಳೂರು: ಚಂದನವನದಲ್ಲಿ ಈಗಾಗಲೇ ಎರಡು ಚಿತ್ರಗಳನ್ನು ನಿರ್ಮಿಸಿಯೂ ಅಸ್ತಿತ್ವ ಕಂಡುಕೊಳ್ಳಲಾಗದೆ ಪರಿತಪಿಸುತ್ತಿರುವ ನಾಯಕ ನಟ ಕಮ್ ನಿರ್ಮಾಪಕ ರಾಜ್ ಸೂರ್ಯನ್ ‘ಮೈ ನೇಮ್ ಇಸ್ ರಾಜ’ನಾಗಿ ಒಳ್ಳೆಯ ಅವಕಾಶ ನಿರೀಕ್ಷಿಸುತ್ತಿದ್ದಾರೆ.

“ಈ ಚಿತ್ರವನ್ನು ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ. ರೊಮ್ಯಾಂಟಿಕ್, ಕಾಮಿಡಿ, ಫೈಟ್ ಎಲ್ಲವೂ ಇದ್ದರೂ, ಉತ್ತಮ ಸಂದೇಶ ಒಳಗೊಂಡಿದೆ ಸೆನ್ಸಾರ್ ಮಂಡಳಿ ‘ಎ’ ಸರ್ಟಿಫಿಕೆಟ್ ನೀಡಿದ್ದು, ಇದೇ 31ರಂದು ಬಿಡುಗಡೆಯಾಗಲಿದೆ’ ಎಂದು ನಾಯಕ ನಟ ರಾಜ್ ಸೂರ್ಯನ್ ಹೇಳಿದ್ದಾರೆ.

ಚಿತ್ರದ ಕೆಲ ತುಣುಕುಗಳನ್ನು ಪ್ರದರ್ಶಿಸಿದ ಬಳಿಕ ಮಾತನಾಡಿ, “ಈ ಚಿತ್ರದಲ್ಲಿ ಮೈ ಚಳಿ ಬಿಟ್ಟು ನಟಿಸಿದ್ದೇನೆ. ಇದಕ್ಕಾಗಿ ಹೆಂಡತಿ ಸೇರಿದಂತೆ ಮನೆಯವರೆಲ್ಲ ‘ಥೂ’ ಅಂತ ಉಗಿಯುತ್ತಿದ್ದಾರೆ. ಆದ್ರೂ ಪರವಾಗಿಲ್ಲ ಗಂಡ, ಹೆಂಡತಿ ಪರಸ್ಪರ ಹೇಗಿರಬೇಕೆಂಬ ಸಂದೇಶ ಚಿತ್ರದಲ್ಲಿದೆ” ಎಂದಿದ್ದಾರೆ.

ನಿರ್ದೇಶಕ ಅಶ್ಚಿನ್‍ ಚಿತ್ರಕಥೆ ಹೆಣೆದು ಆಕ್ಷನ್ ಕಟ್ ಹೇಳಿದ್ದಾರೆ. ಕಥೆಗೆ ಅನುಗುಣವಾಗಿ ಹಸಿಬಿಸಿ ದೃಶ್ಯಗಳನ್ನು ಹೆಣೆಯಲಾಗಿದೆ. ತೆಲುಗು ಹಾಗೂ ಕನ್ನಡ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಅಶ್ವಿನ್ ತಿಳಿಸಿದ್ದಾರೆ

“ಹೆಂಡತಿಯೇ ಸರ್ವಸ್ವ ಎಂದು ಪತಿ ಭಾವಿಸಿದ್ದ ಸಂದರ್ಭದಲ್ಲಿ ಯುವತಿಯೊಬ್ಬಳು ಆಕೆಯನ್ನು ಕೊಲ್ಲುತ್ತಾಳೆ ಎಂದು ತಿಳಿದಾಗ ಆತನ ಮನಃಸ್ಥಿತಿ ಹೇಗಿರುತ್ತದೆ ಎಂಬುದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ” ಎಂದು ಹೇಳಿದ್ದಾರೆ.

ಚಿತ್ರದಲ್ಲಿ 4 ಹಾಡುಗಳಿದ್ದು, ರಾಜ್‍ ಸೂರ್ಯನ್ ಜತೆಗೆ ನಸ್ರಿನ್‍ ಮೊದಲಾದ ನಟ, ನಟಿಯರ ಅಭಿನಯವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿರಿಯ ನಾಯಕರೊಂದಿಗಿನ ಚರ್ಚೆ ಬಳಿಕ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ: ದೆಹಲಿಗೆ ತೆರಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ಡಿಕೆಶಿ ಪರ ಒಕ್ಕಲಿಗ ಸ್ವಾಮೀಜಿ ಬ್ಯಾಟಿಂಗ್, ಸಿದ್ದರಾಮಯ್ಯ ಪರ ಅಖಾಡಕ್ಕಿಳಿದ 'ಕಾಗಿನೆಲೆ' ಸ್ವಾಮೀಜಿ!

ತಮಿಳು ನಾಡು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ TVK ಪಕ್ಷ ಸೇರಿದ ಸೆಂಗೊಟ್ಟೈಯನ್

ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನಿಸಿದರೆ ಡಿಕೆಶಿಯನ್ನು CM ಆಗಿ ಒಪ್ಪಿಕೊಳ್ಳುವೆ : ಕುರ್ಚಿ ಕದನಕ್ಕೆ ಪರಮೇಶ್ವರ್ ಟ್ವಿಸ್ಟ್

CM ಪಟ್ಟಕ್ಕಾಗಿ ಕಿತ್ತಾಟ: ಡಿಕೆಶಿಗೆ 'ಹೈಕಮಾಂಡ್' ಒಲವು ತೋರಿದ್ರೆ, ಸಿದ್ದರಾಮಯ್ಯರ ಮುಂದಿನ ಪ್ಲಾನ್ ಏನು?

SCROLL FOR NEXT