ತಾನ್ಯಾ ಹೋಪೆ 
ಸಿನಿಮಾ ಸುದ್ದಿ

ಬಣ್ಣದ ಲೋಕಕ್ಕೆ ಮರಳಲು ಕಾತುರಳಾಗಿದ್ದೇನೆ: ನಟಿ ತಾನ್ಯಾ ಹೋಪೆ

ಲಾಕ್'ಡೌನ್ ಸಮಯವನ್ನು ಅತ್ಯುತ್ತಮವಾಗಿ ಬಳಕೆ ಮಾಡಿಕೊಳ್ಳುತ್ತಿರುವ ತಾನ್ಯಾ ಹೋಪೆ ಅವರು, ಈ ಸಮಯದಲ್ಲಿ ನೃತ್ಯ ಕಲಿಯುವುದರಲ್ಲಿ ತಲ್ಲೀನರಾಗಿದ್ದಾರೆ.

ಲಾಕ್'ಡೌನ್ ಸಮಯವನ್ನು ಅತ್ಯುತ್ತಮವಾಗಿ ಬಳಕೆ ಮಾಡಿಕೊಳ್ಳುತ್ತಿರುವ ತಾನ್ಯಾ ಹೋಪೆ ಅವರು, ಈ ಸಮಯದಲ್ಲಿ ನೃತ್ಯ ಕಲಿಯುವುದರಲ್ಲಿ ತಲ್ಲೀನರಾಗಿದ್ದಾರೆ.
 
ಡ್ಯಾನ್ಸ್ ದೀವಾನೆಯಲ್ಲಿ ಮಾಧುರಿ ದೀಕ್ಷಿತ್ ಅವರ ಜೊತೆಗೆ ಜಡ್ಜ್ ಆಗಿರುವ ಹಾಗೂ ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿದ್ದ ಕಿಶನ್ ಬಿಲಾಗಲಿಯಿಂದ ನಟಿ ತಾನ್ಯಾ ಹೋಪೆ ಅವರು ನೃತ್ಯ ಕಲಿಯುತ್ತಿದ್ದಾರೆ. 

ಕಿಶನ್ ಬಹಳ ದಿನಗಳಿಂದ ತಿಳಿದ ವ್ಯಕ್ತಿಯಾಗಿದ್ದು, ನನ್ನ ಸಹೋದರಿಯ ಟ್ರಿಸ್ಟ್ ಸ್ಟುಡಿಯೋದೊಂದಿಗೂ ಕೈಜೊಡಿಸಿದ್ದಾರೆ. ನನಗೆ ನೃತ್ಯ ಹೇಳಿಕೊಡಲು ಕಿಶನ್ ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆಂದು ತಾನ್ಯಾ ಹೋಪೆ ತಿಳಿಸಿದ್ದಾರೆ. 

ಪ್ರತಿನಿತ್ಯ 1 ಗಂಟೆಗಳ ಕಾಲ ನೃತ್ಯ ತರಬೇತಿ ಪಡೆಯುತ್ತಿದ್ದು, ಪ್ರತೀನಿತ್ಯ 5-6 ಗಂಟೆಗಳ ಕಾಲ ನೃತ್ಯ ಮಾಡುವುದರಲ್ಲಿ ನಾನು ಕಾಲ ಕಳೆಯುತ್ತಿದ್ದೇನೆ. ಚಿತ್ರೀಕರಣ ಸಂದರ್ಭದಲ್ಲಿ ನಟರು ಯಾವಾಗಲೂ ಚಿತ್ರೀಕರಣ ಸಂದರ್ಭದಲ್ಲಿಯೇ ನೃತ್ಯ ಕಲಿಯುತ್ತಾರೆ. ಆದರೆ, ನಾನು ಹಿಂದಿನ ಎರಡು ದಿನಗಳಿಗೂ ಮುನ್ನವೇ ಪೂರ್ವಾಭ್ಯಾಸ ಮಾಡುತ್ತೇನೆ. ನೃತ್ಯ ಸಂಯೋಜಕರು ನೃತ್ಯ ಹೇಳಿಕೊಟ್ಟ ಕೂಡಲೇ ಮಾಡಬೇಕೆಂದು ನಾನು ಬಯಸುತ್ತೇನೆ. ವೃತ್ತಿಪರ ನೃತ್ಯಗಾರ್ತಿಯಾಗಬೇಕೆಂದು ನಾನು ಬಯಸುತ್ತೇನೆ. ಆ ಮಟ್ಟಕ್ಕೆ ತಲುಪಬೇಕೆಂಬುದು ನನ್ನ ಗುರಿಯಾಗಿದೆ ಎಂದು ತಾನ್ಯಾ ತಿಳಿಸಿದ್ದಾರೆ. 

ಲಾಕ್'ಡೌನ್'ಗೂ ಮುನ್ನ ಪ್ರತಿನಿತ್ಯ ನಾನು ಚಿತ್ರೀಕರಣದಲ್ಲಿಯೇ ಇರುತ್ತಿದ್ದೆ. ಮನೆಗೆ ಬರುವಷ್ಟರಲ್ಲಿ ಆಯಾಸದಿಂದಿರುತ್ತಿದ್ದೆ. ಈ ಲಾಕ್'ಡೌನ್ ಸಂದರ್ಭದಲ್ಲಿ ಕೆಲವೇ ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಆ ಚಿತ್ರಗಳ ಚಿತ್ರೀಕರಣ ಜೂನ್ ನಿಂದ ಆರಂಭಗೊಳ್ಳಲಿದೆ. ತೆಲುಗು ಹಾಗೂ ತಮಿಳಿನಲ್ಲಿ ಚಿತ್ರಗಳು ಬರಲಿವೆ ಎಂದಿದ್ದಾರೆ.
 
ಬೆಂಗಳೂರಿನಲ್ಲಿಯೇ ಚಿತ್ರೀಕರಣ ನಡೆಯಲಿದ್ದು, ಚೆನ್ನೈನಿಂದ ಚಿತ್ರತಂಡ ಬೆಂಗಳೂರಿಗೆ ಬರಲಿದೆ. ಕೊರೋನಾ ಸಾಂಕ್ರಾಮಿಕ ಇರುವ ಹಿನ್ನೆಲೆಯಲ್ಲಿ ಚಿತ್ರತಂಡವು ಬೆಂಗಳೂರಿಗೆ ಬರುವ ದಿನಾಂಕವನ್ನು ಮುಂದೂಡಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT