ಸಿನಿಮಾ ಸುದ್ದಿ

ಪ್ರೀತಿಸಿದವರೊಂದಿಗೆ ಸಪ್ತಪದಿ ತುಳಿಯಲು ತಯಾರಾದ 'ಮೊಗ್ಗಿನ ಮನಸು' ಬೆಡಗಿ ಶುಭಾ ಪೂಂಜಾ

Raghavendra Adiga

ಮೊಗ್ಗಿನ ಮನಸು ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದ್ದ ನಟಿ ಶುಭಾ ಪೂಂಜಾ ಹಸೆಮಣೆ ಏರಲು ಸಿದ್ದತೆ ನಡೆಸಿದ್ದಾರೆ. 

ಜಯಕರ್ನಾಟಕ ಸಂಘಟೆನೆಯ ಮುಖಂಡ, ಉದ್ಯಮಿ ಸುಮಂತ್ ಮಹಾಬಲ ಅವರೊಂದಿಗೆ ವಿವಾಹವಾಗಲು ನಟಿ ಶುಭಾ ಪೂಂಜಾ  ನಿರ್ಧರಿಸಿದ್ದಾರೆ. ಈ ಇಬ್ಬರ ವಿವಾಹ ಮಂಗಳೂರಿನಲ್ಲಿ ನೆರವೇರಿದರೆ, ಆರತಕ್ಷತೆ ಬೆಂಗಳೂರಿನಲ್ಲಿ ನಡೆಯಲಿದೆ.

ಇನ್ನು ಶುಭಾ ಅವರನ್ನು ವರಿಸುತ್ತಿರುವ ಸುಮಂತ್ ಜಯಕರ್ನಾಟಕ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲೆ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ. ಈ ಇಬ್ಬರೂ ಒಂದು ವರ್ಷದಿಂದ ಪ್ರೀತಿಸುತ್ತಿದ್ದು ಈ ಡಿಸೆಂಬರ್ ನಲ್ಲಿ ಸಪ್ತಪದಿ ತುಳಿಯುವ ನಿರೀಕ್ಷೆ ಇದೆ.

"ತ್ರಿದೇವಿ" ಚಿತ್ರದ ಮೂಲಕ ನಿರ್ಮಾಪಕಿಯಾಗಿ ಭಡ್ತಿ ಪಡೆದಿರುವ ನಟಿ ಸದ್ಯ "ರೈಮ್ಸ್" ಚಿತ್ರದಲ್ಲಿ ಟಿವಿ ವಾಹಿನಿಯೊಂದರ ನಿರೂಪಕಿ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ.

SCROLL FOR NEXT