ಭಜರಂಗಿ -2 ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

'ಭಜರಂಗಿ 2' ತಂಡದಿಂದ ಶಿವರಾಜ್ ಕುಮಾರ್ ಗೆ ಕಾದಿದೆ ಅಚ್ಚರಿ!

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸಂತೋಷದ ಹಾಗೂ ಕುತೂಹಲಕಾರಿ ಸುದ್ದಿಯೊಂದು ಹೊರಬಿದ್ದಿದೆ. ಜುಲೈ 12 ರಂದು ಹ್ಯಾಟ್ರಿಕ್ ಹಿರೋ ಹುಟ್ಟುಹಬ್ಬದ ಪ್ರಯುಕ್ತ ಭಜರಂಗಿ 2 ಚಿತ್ರದ ದೃಶ್ಯ ವಿಡಿಯೋವೊಂದನ್ನು ಬಿಡುಗಡೆ ಮಾಡಲು ನಿರ್ದೇಶಕ ಎ. ಹರ್ಷ ಎದುರು ನೋಡುತ್ತಿದ್ದಾರೆ.

ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸಂತೋಷದ ಹಾಗೂ ಕುತೂಹಲಕಾರಿ ಸುದ್ದಿಯೊಂದು ಹೊರಬಿದ್ದಿದೆ. ಜುಲೈ 12 ರಂದು ಹ್ಯಾಟ್ರಿಕ್ ಹಿರೋ ಹುಟ್ಟುಹಬ್ಬದ ಪ್ರಯುಕ್ತ ಭಜರಂಗಿ 2 ಚಿತ್ರದ ದೃಶ್ಯ ವಿಡಿಯೋವೊಂದನ್ನು ಬಿಡುಗಡೆ ಮಾಡಲು ನಿರ್ದೇಶಕ ಎ. ಹರ್ಷ ಎದುರು ನೋಡುತ್ತಿದ್ದಾರೆ.

ಟ್ರೈಲರ್ ಮತ್ತು ಟೀಸರ್ ಗೆ ಬದಲಾಗಿ ಹೊಸ ಕಲ್ಪನೆಯೊಂದಿಗೆ ಕೆಲಸ ಮಾಡುತ್ತಿದ್ದೇನೆ. ಒಂದೂವರೆ ನಿಮಿಷದ ವಿಡಿಯೋದಲ್ಲಿ ಶಿವಣ್ಣ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದದಾರೆ. ಇದು ಅಭಿಮಾನಿಗಳಿಗೆ ಸಂತೋಷವನ್ನುಂಟುಮಾಡುವುದು ಖಾತ್ರಿಯಾಗಿದೆ ಎಂದು ಹರ್ಷ ಹೇಳಿದ್ದಾರೆ. 

ಶಿವಣ್ಣನನ್ನು ಹೊಸ ರೀತಿಯಲ್ಲಿ ನೋಡಲು ಬಯಸಿರುವ ಹರ್ಷ, ಈ ಚಿತ್ರ ಹೇಗೆ ಟ್ರೆಂಡಿಯಾಗಿ ಇರಲಿದೆ ಎಂಬುದನ್ನು ವೀಕ್ಷಕರಿಗೆ ವಿಡಿಯೋದಲ್ಲಿ ವಿವರಣೆ ನೀಡಲಾಗುವುದು, ಆದರೆ, ಕಥೆಯನ್ನು ಹೇಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ. 

ಈ ಮಧ್ಯೆ 10 ದಿನಗಳ ಚಿತ್ರೀಕರಣದ ಬಾಕಿ ಉಳಿದಿದ್ದು, ಮರು ಚಿತ್ರೀಕರಣಕ್ಕೆ ಸರ್ಕಾರದ ಅನುಮತಿಗಾಗಿ ಕಾಯಲಾಗುತ್ತಿದೆ. ಈಗ ಸೆಟ್ ಸಿದ್ಧತೆ ನಡೆಸಲಾಗುತ್ತಿದೆ. ಲಾಕ್ ಡೌನ್ ನಂತರ ಬೇರೆ ಕಡೆಗೆ ಹೋಗಿದ್ದ ತಂತ್ರಜ್ಞರಿಗೆ ಕಾಯಲಾಗುತ್ತಿದೆ. ಅವರು ಸದ್ಯದಲ್ಲಿಯೇ ಮರಳಲಿದ್ದು, ನಂತರ ಚಿತ್ರೀಕರಣ ಪುನರ್ ಆರಂಭಿಸಲಾಗುವುದು, ಮುಂದಿನ 15 ದಿನಗಳೊಳಗೆ ಚಿತ್ರೀಕರಣ ಆರಂಭಿಸಲಾಗುವುದು, ಹಾಡುಗಳು ಸಿದ್ಧವಾಗಿವೆ. ಅವುಗಳನ್ನು ಉತ್ತಮ ಹಿನ್ನೆಲೆ ಗಾಯಕರಿಂದ ಧ್ವನಿ ಮುದ್ರಿಸಲಾಗುವುದು ಎಂದು ಹರ್ಷ ತಿಳಿಸಿದ್ದಾರೆ. 

ಟಗರು ಚಿತ್ರದ ನಾಯಕಿ ಭಾವನಾ ಈ ಚಿತ್ರದಲ್ಲೂ ಕೂಡಾ ಶಿವಣ್ಣನಿಗೆ ನಾಯಕಿಯಾಗಿ ಅಭಿನಯಿಸಲಿದ್ದು, ಜಯಣ್ಣ ಫಿಲಂಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಅರ್ಜುನ ಜನ್ಯಾ ಸಂಗೀತ ಸಂಯೋಜಿಸಲಿದ್ದು, ಜೆ ಸ್ವಾಮಿ ಛಾಯಾಗ್ರಾಹಕರಾಗಿದ್ದಾರೆ. ದೀಪು ಎಸ್ ಕುಮಾರ್ ಅವರ ಸಂಕಲನವಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಕಡಿವಾಣ: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ