ರಾಬರ್ಟ್ ಸ್ಟಿಲ್ 
ಸಿನಿಮಾ ಸುದ್ದಿ

ರಿಲೀಸ್ ಮುನ್ನವೇ ಕೋಟಿ, ಕೋಟಿ ಬಾಚಿದ ರಾಬರ್ಟ್: ವಿತರಣೆ ಜವಾಬ್ದಾರಿಯೂ ನಿರ್ಮಾಪಕರದ್ದೇ!

ರಾಬರ್ಟ್‌' ಬಿಡುಗಡೆ ಆಗಿ ಗಲ್ಲಾಪೆಟ್ಟಿಗೆಯಲ್ಲಿ ಎಷ್ಟು ಹಣ ಗಳಿಸಲಿದೆಯೋ ಗೊತ್ತಿಲ್ಲ. ಆದರೆ ಬಿಡುಗಡೆಗೂ ಮುನ್ನವೇ ಬಹುಕೋಟಿ ರೂ. ಸಂಪಾದನೆ ಮಾಡುತ್ತಿದೆ ಎಂಬ ಸುದ್ದಿ ಗಾಂಧಿನಗರದಿಂದ ಕೇಳಿಬರುತ್ತಿದೆ. 

'ರಾಬರ್ಟ್‌' ಬಿಡುಗಡೆ ಆಗಿ ಗಲ್ಲಾಪೆಟ್ಟಿಗೆಯಲ್ಲಿ ಎಷ್ಟು ಹಣ ಗಳಿಸಲಿದೆಯೋ ಗೊತ್ತಿಲ್ಲ. ಆದರೆ ಬಿಡುಗಡೆಗೂ ಮುನ್ನವೇ ಬಹುಕೋಟಿ ರೂ. ಸಂಪಾದನೆ ಮಾಡುತ್ತಿದೆ ಎಂಬ ಸುದ್ದಿ ಗಾಂಧಿನಗರದಿಂದ ಕೇಳಿಬರುತ್ತಿದೆ. 

ರಾಬರ್ಟ್ ಸಿನಿಮಾಗೆ ಬಂಡವಾಳ ಹೂಡಿರುವ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಈ ಸಿನಿಮಾವನ್ನು ತಾವೇ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ. 

ಈ ಮೊದಲು ಉಮಾಪತಿ ಸಹಭಾಗಿತ್ವದಲ್ಲಿ ಹೆಬ್ಬುಲಿ ಸಿನಿಮಾ ವಿತರಕಾಗಿದ್ದರು. ಸದ್ಯ ತಾವು ನಿರ್ಮಾಪಕರಾಗಿರುವುದರಿಂದ ರಾಬರ್ಟ್ ಹಂಚಿಕೆ ಹೊಣೆ ತಾವೇ ಹೊತ್ತಿದ್ದಾರೆ. 

ವಿತರಕರು ಪ್ರಾಮಾಣಿಕವಾಗಿಲ್ಲ, ಸಿನಿಮಾಪ್ರದರ್ಶನಗಳ ಬಗ್ಗೆ ಸರಿಯಾದ ಮಾಹಿತಿ ನೀಡುವುದಿಲ್ಲ,  ಹೀಗಾಗಿ ನಮಗೆ ಸರಿಯಾದ ಸಮಯ್ಕೆ ಹಣ ಸಿಗುವುದಿಲ್ಲ, ವಿಳಂಬ ಮಾಡುತ್ತಾರೆ ಎಂದು ಉಮಾಪತಿ ಹೇಳಿದ್ದಾರೆ.

ಈ ಎಲ್ಲಾ  ಕಾರಣಗಳಿಂದ ರಾಬರ್ಟ್ ಸಿನಿಮಾವನ್ನು ನಾನೇ ವಿತರಿಸಲು ನಿರ್ಧರಿಸಿದ್ದೇನೆ, ಮೊದಲ ವಾರದಲ್ಲೇ ರಾಬರ್ಟ್ 30 ರಿಂದ 40 ಕೋಟಿ ರೂ ಬಾಚುವ ಸಾಧ್ಯತೆಯಿದೆ.  ಹೀಗಾಗಿ ವಿತರಕನ ಜವಾಬ್ದಾರಿಯನ್ನು ನಿರ್ಮಾಪಕರೇ ವಹಿಸಿಕೊಂಡಿದ್ದಾರೆ.


ಈ ಚಿತ್ರದ ವಿತರಣೆ ಹಕ್ಕುಗಳು ಅಂದಾಜು 35 ಕೋಟಿ ರೂ.ಗಳಿಗೆ ಮಾರಾಟ ಆಗಿದೆ ಎನ್ನಲಾಗಿದೆ. ಏಪ್ರಿಲ್‌ 9ರಂದು ರಾಜ್ಯಾದ್ಯಂತ 'ರಾಬರ್ಟ್‌' ತೆರೆಕಾಣುತ್ತಿದೆ. ಕನ್ನಡ ಮಾತ್ರವಲ್ಲದೆ, ತೆಲುಗಿನಲ್ಲಿಯೂ ಚಿತ್ರ ಬಿಡುಗಡೆ ಆಗಲಿದೆ. 

ಇದರ ಜೊತೆಗೆ ಈ ಸಿನಿಮಾದ ಆಡಿಯೋ ಮೂಲಕವೂ ಭರ್ಜರಿ ಕಮಾಯಿ ಆಗುತ್ತಿದೆಯಂತೆ. ಇತ್ತೀಚೆಗಷ್ಟೇ ಮೊದಲ ಹಾಡು ಹೊರಬಂದಿದೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿಬಂದಿವೆ. 

ಟಿವಿ ಮತ್ತು ಡಿಜಿಟಲ್‌ ಪ್ರಸಾರ ಹಕ್ಕು ಸೇರಿದಂತೆ ಸಿನಿಮಾಗೆ ಸಂಬಂಧಿಸಿದ ಇನ್ನಿತರ ಹಕ್ಕುಗಳ ಮಾರಾಟದ ಮಾತುಕತೆ ಚಾಲ್ತಿಯಲ್ಲಿದ್ದು ಎಲ್ಲ ಸೇರಿದರೆ 60 ಕೋಟಿ ರೂಗಿಂತಲೂ ಅಧಿಕ ಗಳಿಕೆ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶೋಪಿಯಾನ್‌ ಎನ್‌ಕೌಂಟರ್‌: ಅಡಗಿಕುಳಿತಿದ್ದ LET ಉಗ್ರನ ಹೊಡೆದುರುಳಿಸಿದ ಸೇನಾಪಡೆ..!

ಬಾರೂಯೀಪುರ್ ಅತ್ಯಾಚಾರ ಪ್ರಕರಣ: ಪಾಪದ ಕೃತ್ಯಕ್ಕೆ ತಕ್ಕ ಶಿಕ್ಷೆ: ಅವನ ಮುಖ ನೋಡಲ್ಲ, ಶವ ಕೂಡ ಮನೆಗೆ ತರಲ್ಲ; ಆರೋಪಿ ತಾಯಿ ಮಾತು!

ಯೋಗ್ಯ ವ್ಯಕ್ತಿಗಳು ಪರಿಷತ್ ಗೆ ಬರಬೇಕು- ಚಪಲ ತೀರಿಸಿಕೊಳ್ಳಲು ಬರ್ತಿದ್ದಾರೆ: ಸಿ.ಎನ್‌. ಮಂಜುನಾಥ್ ಕಣಕ್ಕಿಳಿಸುವ ತಂತ್ರ ಹೆಣೆದಿದ್ದೇ ನಾನು!

ನಿಜ್ಜರ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್ ವಿರುದ್ಧ ಅಮೆರಿಕಾ ಚಾರ್ಜ್‌ಶೀಟ್, 24 ಮಂದಿ ಬಂಧನ..!

ಬಾರೂಯೀಪುರ್ ಬಾಲಕಿ ಅತ್ಯಾಚಾರ-ಕೊಲೆ ಪ್ರಕರಣ: ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಬಲಿ..!