ಸಿನಿಮಾ ಪೋಸ್ಟರ್ 
ಸಿನಿಮಾ ಸುದ್ದಿ

ಗರುಡ ಗಮನ ವೃಷಭ ವಾಹನದಲ್ಲಿ ಹುಲಿ ಪೋಸ್ಟರ್: ಹೆಚ್ಚಿದ ಕುತೂಹಲ

ನಿರ್ದೇಶಕ, ನಟ ರಾಜ್​ ಬಿ. ಶೆಟ್ಟಿ ತಮ್ಮ ಮುಂದಿನ ‘ಗರುಡ ಗಮನ ವೃಷಭ ವಾಹನ ಸಿನಿಮಾದ  ಚಿತ್ರದ 2 ನೇ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಿಸಿದ್ದಾರೆ.

ನಿರ್ದೇಶಕ, ನಟ ರಾಜ್​ ಬಿ. ಶೆಟ್ಟಿ ತಮ್ಮ ಮುಂದಿನ ‘ಗರುಡ ಗಮನ ವೃಷಭ ವಾಹನ ಸಿನಿಮಾದ  ಚಿತ್ರದ 2 ನೇ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಿಸಿದ್ದಾರೆ.

ಬಿಡುಗಡೆಗೊಂಡ ಪೋಸ್ಟರ್​ನಲ್ಲಿ ಹುಲಿ ಮುಖವಾಡದ ಫೋಟೋವನ್ನು ಹಾಕಲಾಗಿದೆ. ಜೊತೆಗೆ ಮಂಗಳಾದೇವಿ ಫ್ರೆಂಡ್ಸ್​ (ರಿ) ಮಂಗಳೂರು ಮೊದಲ ವರ್ಷದ ಶಾರದಾ ಹುಲಿ ಎಂದು ಬರೆಯಲಾಗಿದೆ.

ಈ ಪೋಸ್ಟರ್​ ಗಮನಿಸಿದಾಗ ಇದು ಮಂಗಳೂರಿನ ಸುತ್ತಮುತ್ತಲೂ ನಡೆಯುವ ಕಥೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಜೊತೆಗೆ ತುಳುನಾಡಿನ ಆಚರಣೆಗಳಲ್ಲಿ ಒಂದಾದ ಹುಲಿವೇಷ ಕೂಡ ಇದರಲ್ಲಿ ಇರಲಿದೆ. ಈ ಬಾರಿ ಶೆಟ್ರು ಪ್ರೇಕ್ಷಕರನ್ನು ಮಂಗಳೂರು ಸುತ್ತಲೂ ಸುತ್ತಿಸಲು ರೆಡಿಯಾಗಿದ್ದಾರೆ ಎಂಬುದು ಪೋಸ್ಟರ್​ ನೋಡಿದಾಗ ತಿಳಿದುಬರುತ್ತಿದೆ.

ಗರುಡ ಗಮನ ವೃಷಭ ವಾಹನ' ರಾಜ್​ ಬಿ ಶೆಟ್ಟಿ ಮತ್ತು ರಿಷಬ್ ಕಾಂಬಿನೇಷನ್​ನಲ್ಲಿ ಬರುತ್ತಿರುವ ಸಿನಿಮಾ. ಈ ಸಿನಿಮಾದಲ್ಲಿ  ನಿರ್ದೇಶನದ ಜೊತೆಗೆ ಮುಖ್ಯ ಪಾತ್ರದಲ್ಲಿ ರಾಜ್​ ಬಿ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ನಿರ್ದೇಶಕ ರಿಷಬ್​​​ ಶೆಟ್ಟಿ ಕೂಡ ಈ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಗರುಡ ಗಮನ ವೃಷಭ ವಾಹನವನ್ನು ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ನಾಟಕದಲ್ಲಿನ ಅಹಂಕಾರದ ಬಗ್ಗೆ  ಉಲ್ಲೇಖಿಸಲಾಗಿದೆ.  ಲೈಟರ್ ಬುದ್ಧ ಫಿಲ್ಮ್ಸ್ ನಿರ್ಮಿಸಲಾಗತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT