'ರೆಮೋ' ಹಾಡಿಗಾಗಿ ತಯಾರಾಯ್ತು ಪ್ರಸಿದ್ದ ಹಿನ್ನೆಲೆ ಗಾಯಕರ ತಂಡ 
ಸಿನಿಮಾ ಸುದ್ದಿ

 'ರೆಮೋ' ಹಾಡಿಗಾಗಿ ತಯಾರಾಯ್ತು ಪ್ರಸಿದ್ದ ಹಿನ್ನೆಲೆ ಗಾಯಕರ ತಂಡ 

ಗೂಗ್ಲಿ ನಿರ್ದೇಶಕ ಪವನ್ ಒಡೆಯರ್ ತಮ್ಮ ಮುಂಬರುವ ಚಿತ್ರ ರೆಮೋ ಶೂಟಿಂಗ್ ಅನ್ನು  ಬಹುತೇಕ ಪೂರ್ಣಗೊಳಿಸಿದ್ದು ಕೇವಲ ಎರಡು ಹಾಡುಗಳ ಹಾಗೂ ಒಂದು ಫೈಟ್ ದೃಶ್ಯವು ಮಾತ್ರ ಬಾಕಿ ಇದೆ.  ಇಶಾನ್ ಮತ್ತು ಆಶಿಕಾ ರಂಗನಾಥ್ ಈ ರೆಮೋ ಚಿತ್ರದ ಮೂಲಕ ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ

ಗೂಗ್ಲಿ ನಿರ್ದೇಶಕ ಪವನ್ ಒಡೆಯರ್ ತಮ್ಮ ಮುಂಬರುವ ಚಿತ್ರ ರೆಮೋ ಶೂಟಿಂಗ್ ಅನ್ನು  ಬಹುತೇಕ ಪೂರ್ಣಗೊಳಿಸಿದ್ದು ಕೇವಲ ಎರಡು ಹಾಡುಗಳ ಹಾಗೂ ಒಂದು ಫೈಟ್ ದೃಶ್ಯವು ಮಾತ್ರ ಬಾಕಿ ಇದೆ.  ಇಶಾನ್ ಮತ್ತು ಆಶಿಕಾ ರಂಗನಾಥ್ ಈ ರೆಮೋ ಚಿತ್ರದ ಮೂಲಕ ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ಲಾಕ್‌ಡೌನ್‌ಗೆ ಮುನ್ನ  ತಂಡವು ಡಬ್ಬಿಂಗ್ ಮತ್ತು ಎಡಿಟಿಂಗ್ ಅನ್ನು  ಪೂರ್ಣಗೊಳಿಸಿತ್ತು, ಮತ್ತು ನಿರ್ದೇಶಕರು ಮನೆಯಲ್ಲಿ ಫೈನಲ್ ಟಚ್ ಸಹ ನೀಡಿದ್ದಾರೆ.ದೇಶವು ಶೀಘ್ರದಲ್ಲೇ ಕೋವಿಡ್ ಮಹಾಮಾರಿಯಿಂದ ಮುಕ್ತವಾಗಲಿದ್ದು ಶೂಟಿಂಗ್ ಪೂರ್ಣಗೊಳಿಸಲು ಹಿಮಾಲಯ ಮತ್ತು ರಾಜಸ್ಥಾನಕ್ಕೆ ತೆರಳುವ ಯೋಜನೆಯನ್ನು ನಿರ್ದೇಶಕ ಹಾಕಿಕೊಂಡಿದ್ದಾರೆ.

"ನಮಗೆ ಪರ್ಯಾಯ ವ್ಯವಸ್ಥೆ ಇಲ್ಲ, ಮತ್ತು ನಾವು ರಾಜ್ಯದ ಹೊರಗೆ ಪ್ರಯಾಣಿಸಲು ಅನುಮತಿ ಸಿಕ್ಕುವವರೆಗೆ ಕಾಯಬೇಕಿದೆ. " ಎಂದು ಅವರು  ಹೇಳಿದ್ದಾರೆ.ಚಿತ್ರದ ಇತ್ತೀಚಿನ ಸ್ಟಿಲ್‌ಗಳನ್ನು  ಹಂಚಿಕೊಂಡ ಪವನ್ ಒಡೆಯರ್ , ಇದನ್ನು ಬ್ಯಾಂಕಾಕ್, ಮಲೇಷ್ಯಾದಂತಹ ವಿವಿಧದೇಶಗಳಲ್ಲಿ ಶೂಟಿಂಗ್ ಮಾಡಲಾಗಿದೆ, ದಕ್ಷಿಣ ಆಫ್ರಿಕಾ ಮತ್ತು ಸಿಂಗಾಪುರ.ದಲ್ಲಿ ಸಹ ಚಿತ್ರೀಕರಣವಾಗಿದೆ. ಇದು  ಪ್ರಸ್ತುತ ಪೀಳಿಗೆಗೆ ಸೂಕ್ತವಾದ ಪ್ರೇಮಕಥೆ. ಎಂದು ರೆಮೋ ಬಗೆಗೆ ಅವರು ಭರವಸೆಯೊಂದಿಗೆ ಮಾತನಾಡಿದ್ದಾರೆ.

 ಏಳು ಹಾಡುಗಳನ್ನು ಹೊಂದಿರುವ ರೆಮೋ ಸಂಗೀತ ಪ್ರಧಾನವಾಗಿರುವ ಚಿತ್ರವೂ ಸಹ ಆಗಿದೆ.  ನಾನು ಮೊದಲ ಬಾರಿಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರೊಂದಿಗೆ ಕೈಜೋಡಿಸಿದ್ದೇನೆ, ಮತ್ತು ನಾವಿಬ್ಬರೂ ಒಟ್ಟಾಗಿ ಉತ್ತಮ ಸಂಗೀತವನ್ನು ನೀಡುತ್ತಿದ್ದೇವೆ. ಅರಿಜಿತ್ ಸಿಂಗ್, ಶ್ರೇಯಾ ಘೋಶಾಲ್, ಅರ್ಮಾನ್ ಮಲಿಕ್ ಮುಂತಾದ ಪ್ರಸಿದ್ಧ ಗಾಯಕರನ್ನು ಕರೆಸಿ ಹಾಡು ಹೇಳಿಸುವ ಯೋಜನೆ ನಿರ್ದೇಶಕರಲ್ಲಿದೆ. . ಸಂಜಿತ್ ಹೆಗ್ಡೆ, ಇಂದೂ ನಾಗರಾಜ್ ಅವರು ರೇಮೋದಲ್ಲಿನ ವಿವಿಧ ಹಾಡುಗಳಿಗೆ ಧ್ವನಿ ನೀಡಲಿದ್ದಾರೆ.

ಈ ಚಿತ್ರದಲ್ಲಿ ಇಶಾನ್ ಗಾಯಕ ಮತ್ತು ಗಿಟಾರ್ ವಾದಕನಾಗಿ ಕಾಣಿಸಿಕೊಂಡಿದ್ದಾರೆ.  ತನ್ನ ಪಾತ್ರಕ್ಕಾಗಿ ಇಮೇಜ್ ಮೇಕ್ ಓವರ್ ಪಡೆದಿರುವ ನಟನ ಜತೆ ಜತೆಗೆ ಹಿರಿಯ ನಟರಾದ ಮಧು ಮತ್ತು ಶರತ್‌ಕುಮಾರ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ

ಏತನ್ಮಧ್ಯೆ ಪವನ್ ಒಡೆಯರ್ ತಾವು ಮುಂಬರುವ ದಿನಗಳಲ್ಲಿ ರೆಮೋ ನಿರ್ಮಾಪಕ ಸಿಆರ್ ಮನೋಹರ್ ಅವರೊಂದಿಗೆ ಒಂದು ಚಿತ್ರವನ್ನು ಮಾಡಲಿದ್ದಾರೆ. ಅಷ್ಟೇ ಅಲ್ಲದೆ ಇಶಾನ್  ಅವರಿಗಾಗಿ ಸಹ ಇನ್ನೊಂದು ಚಿತ್ರ ನಿರ್ದೇಶನ ಮಾಡುತ್ತಿರುವುದಾಗಿ ಸಹ ಅವರು ಒಪ್ಪಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT