ರಘು ದೀಕ್ಷಿತ್ 
ಸಿನಿಮಾ ಸುದ್ದಿ

'ಲವ್ ಮೋಕ್‌ಟೇಲ್ 2'ನಿಂದ ಹೊರನಡೆದ ಸಂಗೀತ ನಿರ್ದೇಶಕ ರಘು ದೀಕ್ಷಿತ್

ಬಹುನಿರೀಕ್ಷಿತ "ಲವ್ ಮೋಕ್‌ಟೇಲ್ 2" ಗಾಗಿ ನಟ-ನಿರ್ದೇಶಕ- ನಿರ್ಮಾಪಕ ಕೃಷ್ಣ ಟೀಂ ಸೇರಿದ್ದ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಈಗ ತಂಡದಿಂದ ಹೊರಬಂದಿದ್ದಾರೆ.

ಬಹುನಿರೀಕ್ಷಿತ "ಲವ್ ಮೋಕ್‌ಟೇಲ್ 2" ಗಾಗಿ ನಟ-ನಿರ್ದೇಶಕ- ನಿರ್ಮಾಪಕ ಕೃಷ್ಣ ಟೀಂ ಸೇರಿದ್ದ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಈಗ ತಂಡದಿಂದ ಹೊರಬಂದಿದ್ದಾರೆ. ಈ ಚಿತ್ರದ ಮೊದಲ ಭಾಗಕ್ಕೆ ಘು ದೀಕ್ಷಿತ್ ಸಂಯೋಜಿಸಿದ ಸಂಗೀತವು ಚಿತ್ರದ ಪ್ರಮುಖ ಅಂಶಗಳಲ್ಲಿ ಒಂದಾಗಿತ್ತು. ಚಿತ್ರದ ಎರಡನೇ ಭಾಗದಲ್ಲೀ ಸಹ ಅವರ ಸಂಗೀತದ ಮೋಡಿ ಇರಲಿದೆ ಎಂದು ಭಾವಿಸಲಾಗಿತ್ತು.  ಜೂನ್‌ನಲ್ಲಿ ಅಧಿಕೃತವಾಗಿ "ಲವ್ ಮಾಕ್‌ಟೇಲ್ 2" ಘೀಷಣೆಯಾದಾಗ ಕೃಷ್ಣ ಸಹ ರಘು ದೀಕ್ಷಿತ್ ಜತೆಗೆ ಮತ್ತೊಮ್ಮೆ ಕೆಲಸ ಮಾಡಲು ಹರ್ಷ ವ್ಯಕ್ತಪಡಿಸಿದ್ದರು.

ಆದಾಗ್ಯೂ, ವ್ಯವಹಾರದಲ್ಲಿನ ಕೆಲ ಭಿನ್ನಾಭಿಪ್ರಾಯದಿಂದಾಗಿ ರಘು ದೀಕ್ಷಿತ್ ಇದೀಗ ಚಿತ್ರದಿಂದ ದೂರವಾಗಿದ್ದಾರೆ ಎನ್ನಲಾಗಿದೆ. "ನಿರ್ದೇಶಕನಾಗಿ ನಾನು ಅವರನ್ನು ನಮ್ಮೊಡನಿರಲು ಬಯಸುತ್ತೇನೆ. ಆದರೆ ನಿರ್ಮಾಪಕನಾಗಿ, ನಾನು ಅವರನ್ನು ಉಳಿಸಿಕೊಳ್ಲಲು ಸಾಧ್ಯವಾಗಿಲ್ಲ" ಕೃಷ್ಣ ಹೇಳಿದ್ದಾರೆ. "ವ್ಯವಹಾರ ನಿಯಮಗಳನ್ನು ರೂಪಿಸಲು ಸಾಧ್ಯವಾಗದ ಕಾರಣ, ನಾನು ಯೋಜನೆಯ ಬದಲಾವಣೆಗೆ ತೀರ್ಮಾನಿಸಿದೆ." ಅವರು ವಿವರಿಸಿದ್ದಾರೆ.

ಮಿಲಾನಾ ನಾಗರಾಜ್ ಅವರೊಂದಿಗೆ ಸೇರಿ ಚಿತ್ರ ನಿರ್ಮಾಣದಲ್ಲಿ ತೊಡಗಿರುವ ಕೃಷ್ಣ ತಾವು ಮೊದಲಿಗೆ ಚಿತ್ರೀಕರಣ ಪೂರ್ಣಗೊಳಿಸಲು ಬಯಸಿದ್ದಾರೆ. ನಂತರ ಸಂಗೀತದ ಟೀಂ ಜತೆಗೆ ಕುಳೀತುಕೊಳ್ಲಲು ನಿರ್ಧರಿಸಿದ್ದಾರೆ. ಸಧ್ಯ ಕೃಷ್ಣ ನಕುಲ್ ಅಭ್ಯಂಕರ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ಅಧಿಕೃತ ಮಾಹಿತಿ ಬಂದಿಲ್ಲ. "ಲವ್ ಮೋಕ್‌ಟೇಲ್ 2"ಚಿತ್ರದ ಸಂಗೀತದ ಹಕ್ಕನ್ನು ಖರೀದಿಸಲು ಝೇಂಕಾರ್ ಮ್ಯೂಸಿಕ್ ಜತೆ ಮಾತುಕತೆ ನಡೆದಿದೆ ಎನ್ನುವುದು ಗಾಂಧೀನಫ಼ರದಲ್ಲಿ ಹರಿದಾಡುತ್ತಿರುವ ಸುದ್ದಿಯಾಗಿದೆ.

"ಸಂಗೀತ ನಿರ್ದೇಶಕ-ಗಾಯಕ ನಕುಲ್ ಅಭ್ಯಂಕರ್ ಲವ್ ಮೋಕ್‌ಟೇಲ್‌ನ ಮೊದಲ ಭಾಗದಲ್ಲಿ ಕೆಲಸ ಮಾಡಿದ್ದರು. ಅದರಲ್ಲಿ ಅವರು "ಲವ್ ಯು ಚಿನ್ನ "ಮತ್ತು "ಜನುಮಗಳಿಗೆ ಕಾಯುವೆ" ಎಂಬ ಎರಡು ಹಾಡುಗಳನ್ನು ಹಾಡಿದ್ದರು. ನಾವು ಅವರೊಂದಿಗೆ ಚರ್ಚೆಯಲ್ಲಿದ್ದೇವೆ. ಲವ್ ಮೋಕ್‌ಟೇಲ್‌ಗಾಗಿ, ನಾನು ಶೂಟಿಂಗ್ ಪೂರ್ಣಗೊಳಿಸಿದ ನಂತರವೇ ಸಂಗೀತದ ಬಗೆಗೆ ಕೆಲಸ ಪ್ರಾರಂಭವಾಗಿತ್ತು. ಈ ಚಿತ್ರಕ್ಕೆ ಸಹ ನಾನು ಇದೇ ಮಾದರಿ ಅನುಸರಿಸುತ್ತೇನೆ.

"ಶೂಟಿಂಗ್ ಮುಗಿದ ನಂತರವೇ ನಾವು ರೀ ರೆಕಾರ್ಡಿಂಗ್ ಮತ್ತು ಸಂಯೋಜನೆಗಳತ್ತ ಗಮನ ಹರಿಸುತ್ತೇವೆ, ”ಎಂದು ಅವರು ಹೇಳುತ್ತಾರೆ. ಚಿತ್ರದಲ್ಲಿ ರಾಚೆಲ್ ಡೇವಿಡ್ ಹಾಗೂ ಹೊಸ ನಾಯಕಿ ಸುಷ್ಮಿತಾ ಅಭಿನಯವಿದೆ. , ಕುಶಿ ಆಚಾರ್ ಮತ್ತು ಅಭಿಲಾಶ್ ಸಹ ಪ್ರಮುಖ ಪಾತ್ರವರ್ಗದಲ್ಲಿದ್ದು ಇದೊಂದು ಎಮೋಷನಲ್ ರೋಮ್ಯಾಂಟಿಕ್ ಡ್ರಾಮಾ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT