ಪೃಥ್ವಿ ಅಂಬರ್ 
ಸಿನಿಮಾ ಸುದ್ದಿ

ವಿಜಯ್ ಮಿಲ್ಟನ್ ನಿರ್ದೇಶನದ ಶಿವಣ್ಣ ನಟನೆಯ ಚಿತ್ರದಲ್ಲಿ ’ದಿಯಾ' ನಾಯಕ ಪ್ರಥ್ವಿ

ಛಾಯಾಗ್ರಾಹಕ-ನಿರ್ದೇಶಕ ವಿಜಯ್ ಮಿಲ್ಟನ್ ನಿರ್ದೇಶನದ ಚಿತ್ರದಲ್ಲಿ"ಟಗರು" ಜೋಡೊಯಾದ ಸೆಂಚುರಿ ಸ್ಟಾರ್ ಶಿವಣ್ಣ ಹಾಗೂ ಡಾಲಿ ಧನಂಜಯ್ ಮತ್ತೆ ಒಂದಾಗಿದ್ದು ಇದೀಗ ಈ ಚಿತ್ರಕ್ಕೆ ಪೃಥ್ವಿ ಅಂಬರ್ ಸಹ ಎಂಟ್ರಿ, ಕೊಡುತ್ತಿದ್ದಾರೆ.

ಛಾಯಾಗ್ರಾಹಕ-ನಿರ್ದೇಶಕ ವಿಜಯ್ ಮಿಲ್ಟನ್ ನಿರ್ದೇಶನದ ಚಿತ್ರದಲ್ಲಿ"ಟಗರು" ಜೋಡೊಯಾದ ಸೆಂಚುರಿ ಸ್ಟಾರ್ ಶಿವಣ್ಣ ಹಾಗೂ ಡಾಲಿ ಧನಂಜಯ್ ಮತ್ತೆ ಒಂದಾಗಿದ್ದು ಇದೀಗ ಈ ಚಿತ್ರಕ್ಕೆ  ಪೃಥ್ವಿ ಅಂಬರ್ ಸಹ ಎಂಟ್ರಿ, ಕೊಡುತ್ತಿದ್ದಾರೆ. ಕಮರ್ಷಿಯಲ್ ಎಂಟರ್ಟೈನರ್ ಕಥಾನಕವಿದಾಗಿದ್ದು "ದಿಯಾ"ದಲ್ಲಿನ ಆದಿ ಪಾತ್ರದಿಂದ ಹೆಸರಾದ ನಟನಿಗೆ ಹಲವಾರು ಕಡೆಗಳಿ<ಡ ಅವಕಾಶಗಳು ಸಾಲು ಸಾಲಾಗಿ ಬರುತ್ತಿದೆ. 

ಪ್ರಸ್ತುತ ಪ್ರಥ್ವಿ ಕಿಟ್ಟಿ ಲೈಫ್ ಈಸ್ ಬ್ಯೂಟಿಫುಲ್, ಶುಗರ್ಲೆಸ್, ಫಾರ್ ರೆಗ್ನ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ,ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ವಿಜಯ್ ಮಿಲ್ಟನ್ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರ. , ಇದು ಪೃಥ್ವಿ ಅವರ ಮುಂದಿನ ಬಹುದೊಡ್ಡ ಕಮರ್ಷಿಯಲ್ ಬ್ರೇಕ್ ಆಗಿರಲಿದೆ. ಅವರು ಇಲ್ಲಿ ಶಿವಣ್ಣ ಮತ್ತು ಧನಂಜಯ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲಿದ್ದಾರೆ. ಚಿತ್ರದ ಚಿತ್ರೀಕರಣವು ನವೆಂಬರ್ ಅಂತ್ಯದ ವೇಳೆಗೆ ಪ್ರಾರಂಭವಾಗಲಿದ್ದು, ತಯಾರಕರು ಪ್ರಸ್ತುತ ಅಂತಿಮ ತಯಾರಿಯಲ್ಲಿದ್ದಾರೆ.

ಮೂಲವೊಂದರ ಪ್ರಕಾರ, ಪೃಥ್ವಿಗೆ ಈ ಚಿತ್ರದಲ್ಲಿ ಪ್ರಮುಖ ಪಾತ್ರವಿದೆ. ಏತನ್ಮಧ್ಯೆ, ಪ್ರಮುಖ ನಾಯಕಿ ಮತ್ತು ಉಳಿದ ಪೋಷಕ ಪಾತ್ರಗಳಿಗಾಗಿ ಮಾತುಕತೆ ನಡೆದಿದೆ,. ಕೃಷ್ಣ ಸಾರ್ಥಕ್ ನಿರ್ಮಿಸುತ್ತಿರುವ ಈ ಚಿತ್ರ ಶಿವರಾಜ್ ಕುಮಾರ ಅವರ 123ನೇ ಚಿತ್ರವಾಗಿದೆ. ಭಜರಂಗಿ 2 ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ ನಟ ಈಗ ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ,ಏತನ್ಮಧ್ಯೆ, ಪ್ರಸ್ತುತ ರತ್ನನ್ ಪ್ರಪಂಚ ಚಿತ್ರದ ಚಿತ್ರೀಕರಣದಲ್ಲಿರುವ ಧನಂಜಯ್ ಈ ಚಿತ್ರದಲ್ಲಿ ತಮ್ಮ ಪಾತ್ರದ ಚಿತ್ರೀಕರಣವಿರುವಾಗ ಶಿವಣ್ಣ ಅವರೊಂದಿಗೆ ಸೇರಿಕೊಳ್ಳಲಿದ್ದಾರೆ. ಚಿತ್ರದ ಸಂಗೀತವನ್ನು ಅನೂಪ್ ಸೀಳನ್ ನಿರ್ವಹಿಸಿದ್ದಾರೆ.

ತಮಿಳು ಚಲನಚಿತ್ರ ಗೋಲಿ ಸೋಡಾವನ್ನು ನಿರ್ದೇಶಿಸಿದ ವಿಜಯ್ ವಿಲ್ಸನ್ ಸ್ಯಾಂಡಲ್ ವುಡ್ ನಲ್ಲಿ"ಅಟ್ಟಹಾಸ"ದಲ್ಲಿ ಡಿಒಪಿಯ ಮೂಲಕ ಮಾಡಿದ್ದಾರೆ.  ಪೊಗರು ಚಿತ್ರದ ಚಾಯಾಗ್ರಹಣ ಮಾಡಿರುವ ವಿಜಯ್ ಧ್ರುವ ಸರ್ಜಾ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಇದೀಗ ಶಿವಣ್ಣ ಅಭಿನಯದ ಚಿತ್ರದೊಡನೆ ಕನ್ನಡ ನಿರ್ದೇಶಕರಾಗುತ್ತಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT